ಬಿಜೆಪಿಯತ್ತ ಲಖನ್ ಜಾರಕಿಹೊಳಿ ಚಿತ್ತ!

    

Last Updated : Mar 15, 2018, 04:42 PM IST
ಬಿಜೆಪಿಯತ್ತ ಲಖನ್ ಜಾರಕಿಹೊಳಿ ಚಿತ್ತ! title=

ಬೆಂಗಳೂರು:  ಬಿಜೆಪಿ ಸೇರಲು ಸತೀಶ್ ಜಾರಕಿಹೊಳಿ ಸಹೋದರ್ ಲಖನ್ ತಿರ್ಮಾನಿಸಿದ್ದಾರೆ. ಈಗಾಗಲೇ ಈ ಕುರಿತಾಗಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರ ಜೊತೆ ಮಾತುಕತೆ ನಡೆಸಲಾಗಿದೆ.

ಅಮಿತ್ ಶಾ ಇದಕ್ಕೆ ಅಂತಿಮ ಒಪ್ಪಿಗೆ ನೀಡಿದರೆ ಅವರ ಸಮ್ಮುಖದಲ್ಲೇ  ಮುಂದಿನ ವಾರ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಲಖನ್ ಜಾರಕಿಹೊಳಿಯವರು ಸತೀಶ್ ವಿರುದ್ದ ಯಮಕನಮರಡಿಯಲ್ಲಿ  ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. 

ಆ ಮೂಲಕ ಬೆಳಗಾವಿ ಜಿಲ್ಲೆ ಈ ಬಾರಿ ಮತ್ತೊಮ್ಮೆ ಜಾರಕಿಹೊಳಿ ಸಹೋದರರ ಜಿದ್ದಾಜಿದ್ದಿನ ಚುನಾವಣಾ ಪೈಪೋಟಿಗೆ ಸಾಕ್ಷಿಯಾಗಲಿದೆ.

Trending News