'ದೇಶದ ಗಡಿಯನ್ನು ಚೀನಾ ಆಕ್ರಮಿಸಿದರೂ ಕೂಡ ಪ್ರಧಾನಿ ಮೋದಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ '

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ (ಜನವರಿ 24) ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಚೀನಾದ ಸೈನ್ಯವು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು 56 ಇಂಚಿನ ಎದೆ ಹೊಂದಿರುವ ವ್ಯಕ್ತಿಗೆ ಚೀನಾ ಎಂದು ಹೆಸರಿಡಿದು ಕರೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

Last Updated : Jan 24, 2021, 11:35 PM IST
  • ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದದ ಮೇಲೆ ದಾಳಿ ನಡೆಸಿದರು.
  • ಜಿಡಿಪಿ- ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಮೋದಿ ಜಿ ಹೆಚ್ಚಿನ ಪ್ರಗತಿಯನ್ನು ತೋರಿಸಿದ್ದಾರೆ.
  • ಜನರು ಹಣದುಬ್ಬರದಿಂದ ಬಳಲುತ್ತಿದ್ದಾರೆ, ಆದರೆ ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ.
'ದೇಶದ ಗಡಿಯನ್ನು ಚೀನಾ ಆಕ್ರಮಿಸಿದರೂ ಕೂಡ ಪ್ರಧಾನಿ ಮೋದಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ' title=
file photo

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ (ಜನವರಿ 24) ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಚೀನಾದ ಸೈನ್ಯವು ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು 56 ಇಂಚಿನ ಎದೆ ಹೊಂದಿರುವ ವ್ಯಕ್ತಿಗೆ ಚೀನಾ ಎಂದು ಹೆಸರಿಡಿದು ಕರೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಚೀನಾದಿಂದ ಭಾರತದ ಭೂಮಿ ವಾಪಸ್ ಪಡೆಯುವುದು ಕೂಡ ಆ್ಯಕ್ಟ್ ಆಫ್ ಗಾಢ್ ಗೆ ಬಿಟ್ಟಿದ್ದಾ?: ರಾಹುಲ್ ಗಾಂಧಿ ವ್ಯಂಗ್ಯ

'ಮೊದಲ ಬಾರಿಗೆ, ಚೀನಾದ ಪಡೆಗಳು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವುದನ್ನು ಭಾರತೀಯ ಜನರು ನೋಡಬಹುದು. ನಾವು ಇಂದು ಮಾತನಾಡುವಾಗ, ಸಾವಿರಾರು ಚೀನೀ ಸೈನಿಕರು ನಮ್ಮ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು 56 ಇಂಚಿನ ಎದೆಯಿರುವ ವ್ಯಕ್ತಿ ಚೀನಾ ಪದವನ್ನು ಸಹ ಹೇಳಲು ಸಾಧ್ಯವಿಲ್ಲ. ಅದು ನಮ್ಮ ದೇಶದ ವಾಸ್ತವ 'ಎಂದು ರಾಹುಲ್ ಗಾಂಧಿ Rahul Gandhi ಹೇಳಿದ್ದಾರೆ.

ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದ ಉದ್ದೇಶಗಳನ್ನು ಎದುರಿಸಲು ಮೋದಿ ಸರ್ಕಾರ ಹೆದರುತ್ತಿದೆ-ರಾಹುಲ್ ಗಾಂಧಿ

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಗಾಂಧಿ ಮೂರು ದಿನಗಳ ತಮಿಳುನಾಡು ಪ್ರವಾಸದಲ್ಲಿದ್ದಾರೆ. ಅವರು ಹಲವಾರು ಸಭೆಗಳನ್ನುದ್ದೇಶಿಸಿ, ರೈತರು, ನೇಕಾರರು ಮತ್ತು ಸಾರ್ವಜನಿಕರೊಂದಿಗೆ ಭಾನುವಾರ ಸಂವಾದ ನಡೆಸಿದರು. ಅವರು ತಿರುಪ್ಪೂರು, ಕರುರು ಮತ್ತು ದಿಂಡಿಗಲ್ ಜಿಲ್ಲೆಗಳಿಗೂ ಭೇಟಿ ನೀಡಿದರು.

ಇದನ್ನೂ ಓದಿ: ನಿಮ್ಮಂತಹ ಪ್ರಧಾನಿ ಅನುಪಸ್ಥಿತಿ ಭಾರತವನ್ನು ಕಾಡುತ್ತಿದೆ: ಮನಮೋಹನ್ ಸಿಂಗ್ ಅವರಿಗೆ ರಾಹುಲ್ ಗಾಂಧಿ

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದದ ಮೇಲೆ ದಾಳಿ ನಡೆಸಿದರು. ಜಿಡಿಪಿ- ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಮೋದಿ ಜಿ ಹೆಚ್ಚಿನ ಪ್ರಗತಿಯನ್ನು ತೋರಿಸಿದ್ದಾರೆ. ಜನರು ಹಣದುಬ್ಬರದಿಂದ ಬಳಲುತ್ತಿದ್ದಾರೆ, ಆದರೆ ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ "ಎಂದು ಅವರು ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಹುಲ್ ಗಾಂಧಿ ಶನಿವಾರ, ತಿರುಪ್ಪೂರಿನಲ್ಲಿ ಕೈಗಾರಿಕಾ ಕಾರ್ಮಿಕರೊಂದಿಗಿನ ಸಂವಾದದಲ್ಲಿ, ತಮ್ಮ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದರೆ ಅವರು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಪುನರ್ರಚಿಸಿ 'ಒಂದು ತೆರಿಗೆ, ಕನಿಷ್ಠ ತೆರಿಗೆಯನ್ನು ತರುವುದಾಗಿ ಭರವಸೆ ನೀಡಿದ್ದರು.'

ಇದನ್ನೂ ಓದಿ: ಜಂಗಲ್ ರಾಜ್ ಯುಪಿಯಲ್ಲಿ ಜಾತಿ ಆಧಾರಿತ ಹಿಂಸೆ ಮತ್ತು ಅತ್ಯಾಚಾರ ಅಧಿಕಗೊಂಡಿದೆ- ರಾಹುಲ್ ಗಾಂಧಿ

ಈ ಜಿಎಸ್ಟಿ ಆಡಳಿತವು ಸರಳವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಎಂಎಸ್ಎಂಇಗಳ ಮೇಲೆ ಭಾರಿ ಹೊರೆ ಬೀರುತ್ತದೆ ಮತ್ತು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಕುಂಠಿತಗೊಳಿಸುತ್ತದೆ. ಜಿಎಸ್ಟಿಯ ಅತಿದೊಡ್ಡ ಬೆಂಬಲಿಗರು ದೊಡ್ಡ ಉದ್ಯಮಗಳಾಗಿದ್ದರು. ಅದಕ್ಕೆ ಒಂದು ಕಾರಣವಿದೆ..ಜಿಎಸ್ಟಿ .. ಪ್ರಸ್ತುತ ಅವರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತುಸಣ್ಣ ಉದ್ಯಮಗಳಿಗಲ್ಲ  "ಎಂದು ಅವರು ಹೇಳಿದರು.'ನಾವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ ನಾವು ಜಿಎಸ್ಟಿಯನ್ನು ಪುನರ್ರಚಿಸುತ್ತೇವೆ ಮತ್ತು ನಿಮಗೆ ಒಂದು ತೆರಿಗೆ, ಕನಿಷ್ಠ ತೆರಿಗೆ ನೀಡುತ್ತೇವೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

 

Trending News