"ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತವರು ವಾಯುಮಾಲಿನ್ಯಕ್ಕಾಗಿ ರೈತರನ್ನು ದೂಷಿಸುತ್ತಿದ್ದಾರೆ": ಸುಪ್ರೀಂಕೋರ್ಟ್

ದೆಹಲಿಯಲ್ಲಿನ ಮಾಲಿನ್ಯದ ವಿಚಾರವಾಗಿ ರೈತರನ್ನು ದೂರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಪಂಚತಾರ ಹೋಟೆಲ್ ನಲ್ಲಿರುವ ಜನರು ರೈತರು ವಾಯುಮಾಲಿನ್ಯಕ್ಕಾಗಿ ರೈತರನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದೆ.

Written by - Zee Kannada News Desk | Last Updated : Nov 17, 2021, 04:10 PM IST
  • ದೆಹಲಿಯಲ್ಲಿನ ಮಾಲಿನ್ಯದ ವಿಚಾರವಾಗಿ ರೈತರನ್ನು ದೂರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಪಂಚತಾರ ಹೋಟೆಲ್ ನಲ್ಲಿರುವ ಜನರು ರೈತರು ವಾಯುಮಾಲಿನ್ಯಕ್ಕಾಗಿ ರೈತರನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದೆ.
"ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತವರು ವಾಯುಮಾಲಿನ್ಯಕ್ಕಾಗಿ ರೈತರನ್ನು ದೂಷಿಸುತ್ತಿದ್ದಾರೆ": ಸುಪ್ರೀಂಕೋರ್ಟ್ title=

ನವದೆಹಲಿ: ದೆಹಲಿಯಲ್ಲಿನ ಮಾಲಿನ್ಯದ ವಿಚಾರವಾಗಿ ರೈತರನ್ನು ದೂರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಪಂಚತಾರ ಹೋಟೆಲ್ ನಲ್ಲಿರುವ ಜನರು ರೈತರು ವಾಯುಮಾಲಿನ್ಯಕ್ಕಾಗಿ ರೈತರನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದೆ.

'ನಾವು ರೈತರಿಗೆ ದಂಡ ವಿಧಿಸಲು ಬಯಸುವುದಿಲ್ಲ, ನಾವು ಈಗಾಗಲೇ ಕೇಂದ್ರವನ್ನು ಮುಂದುವರಿಸಲು ಮತ್ತು ಕನಿಷ್ಠ ಒಂದು ವಾರದವರೆಗೆ ಹುಲ್ಲು ಸುಡದಂತೆ ರೈತರನ್ನು ವಿನಂತಿಸುವಂತೆ ಕೇಳಿದ್ದೇವೆ' ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಇಂದು ಹೇಳಿದ್ದಾರೆ.

ಇದನ್ನೂ ಓದಿ : New Suzuki Alto: ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರಿನ ಹೊಸ ರೂಪ ನೋಡಿದರೆ ನೀವು ಆಶ್ಚರ್ಯಚಕಿತರಾಗುವಿರಿ

ಇನ್ನು ಮುಂದುವರೆದು "ಟಿವಿಯಲ್ಲಿನ ಚರ್ಚೆಗಳು ಇತರ ಮೂಲಗಳಿಗಿಂತ ಹೆಚ್ಚು ಮಾಲಿನ್ಯವನ್ನು ಉಂಟುಮಾಡುತ್ತವೆ. ಪ್ರತಿಯೊಬ್ಬರಿಗೂ ಅವರದೇ ಆದ ಕಾರ್ಯಸೂಚಿಗಳಿವೆ.ನಾವು ಇಲ್ಲಿ ಪರಿಹಾರವನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇದನ್ನೂ ಓದಿ : Smart Driving Licence: ಹಳೆಯ ಪರವಾನಗಿಯನ್ನು ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಲು ಇಲ್ಲಿದೆ 5 ಸುಲಭ ಹಂತಗಳು

ಪರ್ಯಾಯಗಳನ್ನು ಹುಡುಕಲು ರೈತರಿಗೆ ಪ್ರೋತ್ಸಾಹ ಬೇಕು ಎಂದು ಈ ಹಿಂದೆ ಒತ್ತಾಯಿಸಿದ್ದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಇಂದು ಮತ್ತೊಮ್ಮೆ ಒತ್ತಿ ಹೇಳಿದರು.'ಅಫಿಡವಿಟ್‌ಗಳಲ್ಲಿನ ಅಂಕಿ-ಅಂಶಗಳನ್ನು ಲೆಕ್ಕಿಸದೆ,ನಾವು ರೈತರ ಕಷ್ಟವನ್ನು ಪರಿಗಣಿಸಬೇಕು.ಅವರು ಇದನ್ನು ಸುಡಲಿಕ್ಕೆ ಕಾರಣವೇನು ಎನ್ನುವುದನ್ನು ಅರಿತುಕೊಳ್ಳಬೇಕು, ಆದರೆ ಯಾರೂ ಅದರ ಬಗ್ಗೆ ಚಿಂತಿಸುತ್ತಿಲ್ಲ, ದೆಹಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ಮಲಗುವ ಜನರು ರೈತರನ್ನು ದೂಷಿಸುತ್ತಾರೆ.ಅಂತಹ ಸಣ್ಣ ಭೂಹಿಡುವಳಿದಾರರ ಪರಿಸ್ಥಿತಿಯನ್ನು ನೋಡಿ..ನೀವೆಲ್ಲರೂ ಹೇಳುವ ಯಂತ್ರಗಳನ್ನು ಅವರಿಗೆ ಖರೀದಿಸಲಿಕ್ಕೆ ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News