Russia-Ukraine Crisis: ಮೋದಿ ಸರ್ಕಾರದ ವಿದೇಶಾಂಗ ನೀತಿಗೆ Shashi Tharoor ಫಿದಾ, ಹೇಳಿದ್ದೇನು ಗೊತ್ತಾ?

Ukraine Crisis - ಪ್ರಸ್ತುತ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ಬಗ್ಗೆ ಕಾಂಗ್ರೆಸ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇನ್ನೊಂದೆಡೆ  ಕಾಂಗ್ರೆಸ್ ಸಂಸದರಾಗಿರುವ  ಶಶಿ ತರೂರ್ ಮೋದಿ ಸರ್ಕಾರದ (Modi Government) ವಿದೇಶಾಂಗ ನೀತಿಯನ್ನು (Foreign Policy) ಶ್ಲಾಘಿಸಿದ್ದಾರೆ.

Written by - Nitin Tabib | Last Updated : Mar 3, 2022, 05:20 PM IST
  • ಮೋದಿ ಸರ್ಕಾರದ ವಿದೇಶಾಂಗ ನೀತಿ ಹೋಗಲಿದೆ ಶಶಿ ತರೂರ್
  • ತರೂರ್ ಯಾವಾಗಲು ಮೋದಿ ಸರ್ಕಾರದ ವಿರುದ್ಧ ಬ್ಯಾಟ್ ಮಾಡುತ್ತಾರೆ
  • ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಅವರ ತಂಡವನ್ನು ಶ್ಲಾಘಿಸಿದ ತರೂರ್.
Russia-Ukraine Crisis: ಮೋದಿ ಸರ್ಕಾರದ ವಿದೇಶಾಂಗ ನೀತಿಗೆ Shashi Tharoor ಫಿದಾ, ಹೇಳಿದ್ದೇನು ಗೊತ್ತಾ? title=
Russia-Ukraine Crisis (File Photo)

Russia-Ukraine War - ಕಾಂಗ್ರೆಸ್ ಸಂಸದ (Congress MP) ಶಶಿ ತರೂರ್ (Shashi Tharoor) ಸಾಮಾನ್ಯವಾಗಿ ತಮ್ಮ ಪಕ್ಷದ ಪರವಾಗಿ ಮತ್ತು ಮೋದಿ ಸರ್ಕಾರದ (Modi Government) ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಆದರೆ, ಉಕ್ರೇನ್ ಬಿಕ್ಕಟ್ಟಿನ (Ukraine Crisis) ಹಿನ್ನೆಲೆ ಮೋದಿ ಸರ್ಕಾರದ ನೀತಿಗಳ  (Modi Governments Foreign Policy) ಬಗ್ಗೆ ಅವರು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಅವರು ಶ್ಲಾಘಿಸಿದ್ದಾರೆ. ತರೂರ್ ಅವರು ವಿಶೇಷವಾಗಿ  ವಿದೇಶಾಂಗ ಸಚಿವ ಮತ್ತು ಅವರ ತಂಡವನ್ನು ಶ್ಲಾಘಿಸಿದ್ದಾರೆ.

ಟ್ವೀಟ್ ಮಾಡುವ ಮೂಲಕ ತರೂರ್ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ
ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುವ ಮೂಲಕ ಅವರು  ಮೋದಿ ಸರ್ಕಾರವನ್ನು ಅಭಿನಂದಿಸಿದ್ದಾರೆ. ಇಂದು ಬೆಳಗ್ಗೆ ಕರೆದಿದ್ದ ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಯ ಸಭೆಯು ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ನಮ್ಮ ಪ್ರಶ್ನೆಗಳು ಮತ್ತು ಕಾಳಜಿಗಳಿಗೆ ವಿವರವಾದ ಮತ್ತು ನಿಖರವಾದ ಉತ್ತರಗಳಿಗಾಗಿ, ಡಾ. ಎಸ್. ಜೈಶಂಕರ್ (Foreign Minister S. Jaishankar) ಮತ್ತು ಅವರ ತಂಡಕ್ಕೆ ಧನ್ಯವಾದಗಳು ಎಂದು ತರೂರ್ ಹೇಳಿದ್ದಾರೆ. ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಶ್ಲಾಘಿಸಿರುವ ತರೂರ್, 'ಇಂತಹ ಆತುರತೆ ಮತ್ತು ಉತ್ಸಾಹವನ್ನು ವಿದೇಶಾಂಗ ನೀತಿಯಲ್ಲಿ ತೋರಿಸಬೇಕು. ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದೊಂದು ಅದ್ಭುತವಾದ ಸಭೆಯಾಗಿತ್ತು ಮತ್ತು ನಾವು ಒಗ್ಗಟ್ಟಾಗಿದ್ದೇವೆ ಎಂದು ನಾನು ಹೇಳಬಲ್ಲೆ' ಎಂದಿದ್ದಾರೆ.

ಇದನ್ನೂ ಓದಿ-ಉಕ್ರೇನ್ ನಿಂದ ಕಾಲ್ಕಿತ್ತ 836,000 ನಿರಾಶ್ರಿತರು..!

ವಿದೇಶಾಂಗ ಸಚಿವರು ಹಾಗೂ ಅವರ ತಂಡವನ್ನು ಶ್ಲಾಘಿಸಿದ ತರೂರ್
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸಚಿವರು ಈ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಅವರ ತಂಡವು ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸಿರುವ ಆಳ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ವಿದೇಶಾಂಗ ನೀತಿಯೂ ಹೀಗೆಯೇ ಎಂದು ಅವರು ಹೇಳಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ-ರಷ್ಯಾದ ಮೇಲಿನ ಅಮೆರಿಕ ನಿರ್ಬಂಧಗಳು ಭಾರತೀಯ ವಾಯುಪಡೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಸಲಹಾ ಸಮಿತಿ ಸಭೆ ಕರೆಯಲಾಗಿತ್ತು
ರಷ್ಯಾ-ಉಕ್ರೇನ್ ಯುದ್ಧದಿಂದ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವಾಲಯ ಗುರುವಾರ ಸಲಹಾ ಸಮಿತಿಯ ಸಭೆ ಕರೆದಿತ್ತು. 6 ಪಕ್ಷಗಳ 9 ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು. ಈ ಬಿಕ್ಕಟ್ಟನ್ನು ಎದುರಿಸಲು ಸಂಸದರು ಸಲಹೆಗಳನ್ನು ನೀಡಿದ್ದಾರೆ ಮತ್ತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಸಭೆಯಲ್ಲಿ ಸಂಸದರ ಪ್ರತಿಯೊಂದು ಪ್ರಶ್ನೆಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ತಂಡ ಸಮರ್ಪಕ ಉತ್ತರ ನೀಡಿದೆ.ಸಂಪೂರ್ಣ ವಿವರ ಮತ್ತು ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ನೀಡಿದ ಉತ್ತರಗಳಿಂದ ಕಾಂಗ್ರೆಸ್ ಸಂಸದ ಶಶಿ ತರೂರ್ ಸಾಕಷ್ಟು ತೃಪ್ತರಾಗಿದ್ದಾರೆ. ಇದಾದ ಬಳಿಕ ವಿದೇಶಾಂಗ ಸಚಿವರು ಹಾಗೂ ಇಡೀ ತಂಡವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ-'ಅಂತರರಾಷ್ಟ್ರೀಯ ನಿರ್ಬಂಧಗಳು S-400 ವಾಯು ರಕ್ಷಣಾ ಕ್ಷಿಪಣಿ ಒಪ್ಪಂದದ ಮೇಲೆ ಪರಿಣಾಮ ಬೀರುವುದಿಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News