ಕೇವಲ ʼಲಡ್ಡೂʼಗಾಗಿ ಅಲ್ಲೋಲ ಕಲ್ಲೋಲವಾಯ್ತು ಮದುವೆ ಮನೆ...

ಇಲ್ಲಿನ ಚಾರ್ಭಾಟದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಮನೆ ಕೇವಲ ಲಡ್ಡೂ ವಿಚಾರವಾಗಿ ರಣರಂಗವಾಗಿ ಮಾರ್ಪಾಡಾಗಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. 

Written by - Bhavishya Shetty | Last Updated : Apr 27, 2022, 03:41 PM IST
  • ಮದುವೆ ಮನೆಯಲ್ಲಿ ಲಡ್ಡೂ ವಿಚಾರವಾಗಿ ಗಲಾಟೆ
  • ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು
  • ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯ ಬೆಮೆತಾರಾದಲ್ಲಿ ಘಟನೆ
ಕೇವಲ ʼಲಡ್ಡೂʼಗಾಗಿ ಅಲ್ಲೋಲ ಕಲ್ಲೋಲವಾಯ್ತು ಮದುವೆ ಮನೆ... title=
Laddoo Clash

ಛತ್ತೀಸ್‌ಗಢ: ಇಲ್ಲಿನ ಚಾರ್ಭಾಟದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಮನೆ ಕೇವಲ ಲಡ್ಡೂ ವಿಚಾರವಾಗಿ ರಣರಂಗವಾಗಿ ಮಾರ್ಪಾಡಾಗಿತ್ತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. 

ಇದನ್ನು ಓದಿ: 'ತೆಲುಗು ಮತ್ತು ಕನ್ನಡ ಸಿನಿಮಾ ಬಾಲಿವುಡ್ ಗೆ ಕೊರೊನಾ ವೈರಸ್ ತರ ತಗುಲಿವೆ'

ಇಲ್ಲಿನ ಮುಂಗೇಲಿ ಜಿಲ್ಲೆಯ ಬೆಮೆತಾರಾ ಗ್ರಾಮದ ಗುಣರಾಮ್ ಸಾಹು ಎಂಬವರ ಪುತ್ರ ಸೂರಜ್ ಸಾಹು ಅವರು ರಂಭಾಜ್ ಸಾಹು ಎಂಬವರ ಮಗಳು ಕುಂತಿಯೊಂದಿಗೆ ವಿವಾಹವಾಗಲು ಚಾರ್ಭಾಟಕ್ಕೆ ತೆರಳಿದ್ದರು. ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ಮದುವೆ ಮನೆಯಲ್ಲಿ ವಧುವಿನ ಕಡೆಯವರು ಲಡ್ಡುವಿನ ವ್ಯವಸ್ಥೆ ಮಾಡಿರಲಿಲ್ಲ. ಈ ವಿಚಾರದಲ್ಲಿಯೇ ಗಲಾಟೆ ಪ್ರಾರಂಭವಾಗಿದ್ದು, ಎರಡೂ ಕಡೆಯವರ ಮಧ್ಯೆ ಹೊಡೆದಾಟ ನಡೆದಿದೆ. 

ಬಳಿಕ ಈ ಗಲಾಟೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಎರಡೂ ಕುಟುಂಬಗಳ ದೂರನ್ನು ಪೊಲೀಸರು ತಾಳ್ಮೆಯಿಂದ ಪರಿಗಣಿಸಿ ಗಂಭೀರತೆಯನ್ನು ಅರಿತುಕೊಂಡಿದ್ದಾರೆ. 

ಇದನ್ನು ಓದಿ: "ಕೊರೊನಾ ಸಂಬಂಧ ಸುದೀರ್ಘ ವರದಿ ಪಡೆದ ನರೇಂದ್ರ ಮೋದಿ"

ತಿಳಿಹೇಳಿದ ಪೊಲೀಸರು: 
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಎರಡೂ ಕಡೆಯವರನ್ನು ಕರೆದು ತಿಳಿಹೇಳಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಸಂಬಂಧಗಳನ್ನು ಕಡಿದುಕೊಳ್ಳಬೇಡಿ. ಜಗಳ ಬಿಟ್ಟು ಒಂದಾಗಿ ಎಂದು ಸಮಾಧಾನ ಮಾಡಿದ್ದಾರೆ. ಸದ್ಯ ಪೊಲೀಸರ ಮಾತಿಗೆ ಗೌರವ ಸೂಚಿಸಿ ಮಕ್ಕಳ ಮದುವೆಯನ್ನು ಎರಡೂ ಕುಟುಂಬದವರು ಅದ್ಧೂರಿಯಾಗಿ ನೆರವೇರಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News