Tirumala Temple : ತಿಮ್ಮಪ್ಪನ ಭಕ್ತರ ಗಮನಕ್ಕೆ : ಎರಡು ದಿನ ತಿರುಮಲ ದೇವಸ್ಥಾ ಬಂದ್!

ಅಕ್ಟೋಬರ್ 25 ರಂದು ಸಂಜೆ 5.11 ರಿಂದ 6.27 ರವರೆಗೆ ಸೂರ್ಯಗ್ರಹಣ ಸಂಭವಿಸುತ್ತದೆ. ಬೆಳಗ್ಗೆ 8.11ರಿಂದ ಸಂಜೆ 7.30ರವರೆಗೆ ಬೆಟ್ಟದ ದೇವಸ್ಥಾನದ ಬಾಗಿಲು ಬಂದ್ ಇರುತ್ತದೆ. ಆದರೆ, ರಾತ್ರಿ 7.50ರ ನಂತರ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Written by - Channabasava A Kashinakunti | Last Updated : Oct 12, 2022, 05:46 PM IST
  • ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇವಾಲಯ
  • ತಿರುಮಲ ದೇವಾಲಯವು ಎರಡು ದಿನಗಳ ಕಾಲ ಬಂದ್
  • ಟಿಟಿಡಿ ದೇಶ ಮತ್ತು ವಿದೇಶಗಳ ಭಕ್ತರಿಗೆ ಮನವಿ ಮಾಡಿದೆ.
Tirumala Temple : ತಿಮ್ಮಪ್ಪನ ಭಕ್ತರ ಗಮನಕ್ಕೆ : ಎರಡು ದಿನ ತಿರುಮಲ ದೇವಸ್ಥಾ ಬಂದ್! title=

ತಿರುಪತಿ : ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇವಾಲಯವು ಎರಡು ದಿನಗಳ ಕಾಲ ಬಂದ್ ಇರಲಿದೆ ಎಂದು ಟಿಟಿಡಿ ತಿಳಿಸಿದೆ. ಸೂರ್ಯ ಹಾಗೂ ಚಂದ್ರ ಗ್ರಹಣದ ಕಾರಣ  ಅ. 25 ಮತ್ತು ನವೆಂಬರ್ 8ರಂದು ತಿರುಮಲದಲ್ಲಿರುವ ವೆಂಕಟೇಶ್ವರನ ಬೆಟ್ಟದ ದೇವಾಲಯವನ್ನು 12 ಗಂಟೆಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಇರುವುದಿಲ್ಲ.

ಅಕ್ಟೋಬರ್ 25 ರಂದು ಸಂಜೆ 5.11 ರಿಂದ 6.27 ರವರೆಗೆ ಸೂರ್ಯಗ್ರಹಣ ಸಂಭವಿಸುತ್ತದೆ. ಬೆಳಗ್ಗೆ 8.11ರಿಂದ ಸಂಜೆ 7.30ರವರೆಗೆ ಬೆಟ್ಟದ ದೇವಸ್ಥಾನದ ಬಾಗಿಲು ಬಂದ್ ಇರುತ್ತದೆ. ಆದರೆ, ರಾತ್ರಿ 7.50ರ ನಂತರ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : Weather Update: ಕರ್ನಾಟಕ ಸೇರಿದಂತೆ ದೇಶದ ಈ ಭಾಗಗಳಲ್ಲಿ ಇಂದು ಭಾರೀ ಮಳೆ ಎಚ್ಚರಿಕೆ

ಅದೇ ರೀತಿ ನವೆಂಬರ್ 8 ರಂದು ಮಧ್ಯಾಹ್ನ 2.39 ರಿಂದ 6.19 ರವರೆಗೆ ಸಂಭವಿಸುವ ಚಂದ್ರಗ್ರಹಣದ ದಿನದಂದು, ದೇವಾಲಯದ ಬಾಗಿಲುಗಳನ್ನು ಬೆಳಿಗ್ಗೆ 8.40 ಕ್ಕೆ ಮುಚ್ಚಲಾಗುತ್ತದೆ ಮತ್ತು ರಾತ್ರಿ 7.20 ಕ್ಕೆ ಮತ್ತೆ ತೆರೆಯಲಾಗುತ್ತದೆ.

ಗ್ರಹಣ ಸಮೀಪಿಸುತ್ತಿರುವ ಎರಡು ದಿನಗಳಲ್ಲಿ ದೇಗುಲದಲ್ಲಿ ಪ್ರತಿದಿನ ನಡೆಸುವ 'ಕಲ್ಯಾಣೋತ್ಸವ' ಸೇರಿದಂತೆ ಪಾವತಿಸಿದ ಆಚರಣೆಗಳು ಬಂದ್ ಇರುತ್ತವೆ. ಈ ಎರಡು ದಿನಗಳಲ್ಲಿ ವಿಐಪಿ ಬ್ರೇಕ್ ದರ್ಶನ, ಉಂಜಲ್ ಸೇವೆ, ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ.

ಹಿರಿಯ ನಾಗರಿಕರು, ದೈಹಿಕ ವಿಕಲಚೇತನರು, ಶಿಶುಗಳನ್ನು ಹೊಂದಿರುವ ಪೋಷಕರು, ಎನ್‌ಆರ್‌ಐಗಳು, ರಕ್ಷಣಾ ಸಿಬ್ಬಂದಿ ಇತ್ಯಾದಿ ಸೇರಿದಂತೆ ಎಲ್ಲಾ ವಿಶೇಷ ದರ್ಶನಗಳನ್ನು ರದ್ದುಗೊಳಿಸಲಾಗಿದೆ.

ಈ ಎರಡು ದಿನಗಳಲ್ಲಿ VQC-II ಮೂಲಕ ದೇವಾಲಯದ ಬಾಗಿಲುಗಳನ್ನು ಪುನಃ ತೆರೆದ ನಂತರ ಸರ್ವ ದರ್ಶನ ಯಾತ್ರಿಕರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಗ್ರಹಣ ಮುಗಿಯುವವರೆಗೆ ಅಡುಗೆ ಮಾಡುವುದಿಲ್ಲ. ಅನ್ನಪ್ರಸಾದ ಭವನವೂ ಗ್ರಹಣ ಮುಗಿಯುವವರೆಗೆ ಬಂದ್ ಇರುತ್ತದೆ.

ಅಕ್ಟೋಬರ್ 25 ಮತ್ತು ನವೆಂಬರ್ 8 ರಂದು ಸಂಭವಿಸುವ ಎರಡು ಗ್ರಹಣ ದಿನಗಳಲ್ಲಿ ನೀಡಲಾದ ಸಲಹೆಯನ್ನು ಗಮನಿಸಿ ಮತ್ತು ಅನಾನುಕೂಲತೆಯನ್ನು ತಪ್ಪಿಸಲು ತಿರುಮಲಕ್ಕೆ ತಮ್ಮ ತೀರ್ಥಯಾತ್ರೆಯನ್ನು ಯೋಜಿಸುವಂತೆ ಟಿಟಿಡಿ ದೇಶ ಮತ್ತು ವಿದೇಶಗಳ ಭಕ್ತರಿಗೆ ಮನವಿ ಮಾಡಿದೆ.

ಇದೇ ವೇಳೆ ಸೋಮವಾರ ತಿರುಮಲ ದರ್ಶನ ಸರತಿ ಸಾಲಿನಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ಭಕ್ತರ ನಡುವೆ ಮಾರಾಮಾರಿ ನಡೆದು ಇಬ್ಬರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಗುಂಟೂರಿನ ಭಕ್ತರು ತಮಿಳುನಾಡಿನ ವ್ಯಕ್ತಿಗಳನ್ನು ವಾಶ್ ರೂಂಗೆ ಹೋಗಲು ದಾರಿ ಮಾಡಿಕೊಡುವಂತೆ ಕೇಳಿದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Bride Groom Video: ವರನ ಮುಂದೆ ಅಳುತ್ತಾ ಮಾಜಿ ಲವರ್‌ಗೆ ಹಾಡು ಹೇಳಿದ ವಧು

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News