/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ : ಕೊರೊನಾವೈರಸ್ ಕೋವಿಡ್-19 (Covid-19)  ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ, ಸರ್ಕಾರದ ಜೊತೆಗೆ ಸಮಾಜದ ಪ್ರತಿಯೊಂದು ವರ್ಗದವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರು ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಜನರಿಗೆ ಅರಿವು ಮೂಡಿಸುತ್ತಿದ್ದಾರೆ, ಕೆಲವರು ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುತ್ತಿದ್ದಾರೆ. ಅವರ ಜೀವನದ ಹೊರತಾಗಿಯೂ ಅಗತ್ಯ ಸೇವೆಗಳೊಂದಿಗೆ ಸಂಪರ್ಕ ಹೊಂದಿದ ಜನರು ಅಗತ್ಯ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.

ಈ ಸಂಚಿಕೆಯಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಪೂರೈಸುವ ಡೆಲಿವರಿ ಹುಡುಗರ ಪಾತ್ರವೂ ಬಹಳ ಮುಖ್ಯವಾಗಿದೆ. ಎಲ್ಲೆಡೆ ಕರೋನಾ ಹಾವಳಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಡೆಲಿವರಿ ಹುಡುಗರು ಮನೆಗಳಿಗೆ ಸಿಲಿಂಡರ್ ಸರಬರಾಜು ಮಾದುವುದರೆ ಜೊತೆಗೆ ತಮ್ಮ ಮನೆಗಳನ್ನು ಕರೋನಾ ವೈರಸ್‌ನಿಂದ ಹೇಗೆ ಸುರಕ್ಷಿತವಾಗಿಡಬೇಕು ಎಂಬ ಬಗ್ಗೆಯೂ ಸಲಹೆಗಳನ್ನು ನೀಡುತ್ತಾರೆ.

ಕೊರೊನಾವೈರಸ್ (Coronavirus) ವಿರುದ್ಧ ನಡೆಯುತ್ತಿರುವ ಅಭಿಯಾನದಲ್ಲಿ ಗ್ರಾಹಕರಿಗೆ ಸಿಲಿಂಡರ್ ತಲುಪಿಸುವ ಹುಡುಗರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ದೇಶದ ಒಂದು ಸಾವಿರಕ್ಕೂ ಹೆಚ್ಚು ಎಲ್‌ಪಿಜಿ ವಿತರಕರೊಂದಿಗಿನ ಸಂವಾದದ ಸಂದರ್ಭದಲ್ಲಿ ಈ ಹೋರಾಟದಲ್ಲಿ ಅವರು ಡೆಲಿವರಿ ಹುಡುಗನನ್ನು ಮೊದಲ ಸಾಲಿನ ಯೋಧ ಎಂದು ಕರೆದಿದ್ದಾರೆ ಮತ್ತು ಜಾಗೃತಿಗೆ ಸಂಬಂಧಿಸಿದ ನಾಲ್ಕು ವಿಷಯಗಳನ್ನು ತನಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (Pradhan Mantri Garib Kalyan Yojane) ಅಡಿಯಲ್ಲಿ ಬಡವರಿಗೆ ಸಹಾಯ ಮಾಡಲು ಉಜ್ಜಲಾ ಯೋಜನೆಯಡಿ ಮೂರು ಉಚಿತ ಸಿಲಿಂಡರ್‌ಗಳನ್ನು ತಲುಪಿಸುವಂತೆ ಧರ್ಮೇಂದ್ರ ಪ್ರಧಾನ್ ಎಲ್‌ಪಿಜಿ ವಿತರಕರಿಗೆ ಸೂಚನೆ ನೀಡಿದರು.

ಡೆಲಿವರಿ ಹುಡುಗರು ಮತ್ತು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಎಲ್‌ಪಿಜಿ ಸಿಲಿಂಡರ್‌ಗಳ ನೈರ್ಮಲ್ಯೀಕರಣ ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಚಿವ ಧರ್ಮೇಂದ್ರ ಪ್ರಧಾನ್ ಸೂಚನೆ ನೀಡಿದರು. ಗ್ರಾಹಕರಿಗೆ ಅರಿವು ಮೂಡಿಸಲು ವಿತರಣಾ ಸಿಬ್ಬಂದಿಗೆ ತಿಳಿಸುವಂತೆ ಅವರು ವಿತರಕರನ್ನು ಕೇಳಿದರು.

ಕರೋನಾಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಗ್ರಾಹಕರಲ್ಲಿ ತಲುಪಿಸುವಲ್ಲಿ ಅವರ ಸೇವೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಕೆಲಸದ ಸ್ಥಳದಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಾಮಾಜಿಕ ಅಂತರ, ಸೋಂಕು ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವಂತೆ ಅವರು ವಿತರಕರನ್ನು ಕೋರಿದರು.

ಸಿಲಿಂಡರ್ ಡೆಲಿವರಿ ಸಂದರ್ಭದಲ್ಲಿ ತಿಳಿಸಲಾಗುವ 4 ವಿಷಯಗಳು:
ಡೆಲಿವರಿ ಹುಡುಗರು ನಾಲ್ಕು ಮುಖ್ಯ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಅಂದರೆ ಮುಖವಾಡ, ಆರೋಗ್ಯ ಸೇತು ಆ್ಯಪ್ ಬಳಕೆ, ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತು ಸಾಂಕ್ರಾಮಿಕ ರೋಗವನ್ನು ಸೋಲಿಸುವಲ್ಲಿ ಸಾಮಾಜಿಕ ಅಂತರದ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ.

Section: 
English Title: 
While delivering gas cylinders, these 4 tips will also give people
News Source: 
Home Title: 

ಗ್ಯಾಸ್ ಸಿಲಿಂಡರ್‌ ಡೆಲಿವರಿ ವೇಳೆ ಗ್ರಾಹಕರಿಗೆ ನೀಡಲಾಗುತ್ತೆ ಈ 4 ಸಲಹೆ

ಗ್ಯಾಸ್ ಸಿಲಿಂಡರ್‌ ಡೆಲಿವರಿ ವೇಳೆ ಗ್ರಾಹಕರಿಗೆ ನೀಡಲಾಗುತ್ತೆ ಈ 4 ಸಲಹೆ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಗ್ಯಾಸ್ ಸಿಲಿಂಡರ್‌ ಡೆಲಿವರಿ ವೇಳೆ ಗ್ರಾಹಕರಿಗೆ ನೀಡಲಾಗುತ್ತೆ ಈ 4 ಸಲಹೆ
Yashaswini V
Publish Later: 
No
Publish At: 
Thursday, April 23, 2020 - 14:41
Created By: 
Yashaswini V
Updated By: 
Yashaswini V
Published By: 
Yashaswini V