Karnataka Election 2023: ಖಾಸಗಿ ಬಸ್‍ಗಳಿಗೆ ಭಾರೀ ಬೇಡಿಕೆ; ಅಡ್ವಾನ್ಸ್ ಬುಕಿಂಗ್!

Karnataka Assembly Election 2023: ಈಗಾಗಲೇ KSRTC, NWRTC, KKRTCಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಟೆಕೆಟ್ ಬುಕಿಂಗ್ ಆಗಿವೆ. ಮೇ 9ರಂದು ರಾತ್ರಿ ಬೆಂಗಳೂರಿನಿಂದ 25 ಲಕ್ಷ ಜನರು ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವ ನಿರೀಕ್ಷೆ ಇದೆ.

Written by - Zee Kannada News Desk | Last Updated : Apr 29, 2023, 02:05 PM IST
  • ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಬೆಂಗಳೂರಿನಿಂದ ಮನೆಗಳತ್ತ ತೆರಳಲು ಜನರು ಸಜ್ಜು
  • ಮಾರ್ಚ್ 9ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಕ್ಕೆ ತೆರಳುವ ಬಸ್‍ಗಳು ಅಡ್ವಾನ್ಸ್ ಬುಕ್
  • ಹೆಚ್ಚಿನ ಬಸ್‍ಗಳಿಗೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರ ಬೇಡಿಕೆ
Karnataka Election 2023: ಖಾಸಗಿ ಬಸ್‍ಗಳಿಗೆ ಭಾರೀ ಬೇಡಿಕೆ; ಅಡ್ವಾನ್ಸ್ ಬುಕಿಂಗ್! title=
ಖಾಸಗಿ ಬಸ್ಗಳಿಗೆ ಭಾರೀ ಬೇಡಿಕೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿವೆ. . ಮತದಾನದ ದಿನ ಎಲ್ಲರಿಗೂ ಕೂಡ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಮತದಾನ ಮಾಡಲು ಜನರು ಬೆಂಗಳೂರಿನಿಂದ ಮನೆಗಳತ್ತ ತೆರಳಲು ಸಜ್ಜಾಗಿದ್ದಾರೆ. ಮಾರ್ಚ್ 9ರಂದು ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಭಾಗಕ್ಕೆ ತೆರಳುವ ಬಸ್‍ಗಳು ಅಡ್ವಾನ್ಸ್ ಬುಕ್ ಆಗಿವೆ. ಜೊತೆಗೆ ಖಾಸಗಿ ಬಸ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಮತದಾನದ ಹೊಸ್ತಿಲಲ್ಲಿ ಖಾಸಗಿ ಬಸ್‍ಗಳಿಗೆ ಭಾರೀ ಬೇಡಿಕೆ ಬಂದಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆಗಳಿಗೆ ಹೆಚ್ಚುವರಿ ಬಸ್ ಒದಗಿಸುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಖಾಸಗಿ ಬಸ್ ಮಾಲೀಕರನ್ನು ವಿವಿಧ ಪಕ್ಷದ ಮುಖಂಡರು ಸಂಪರ್ಕ ಮಾಡಿದ್ದಾರೆ.

ಇದನ್ನೂ ಓದಿ: Karnataka Election 2023: ಆನೆ ಮೇಲೆ ಕುಳಿತು ಪ್ರಚಾರ ನಡೆಸುತ್ತಿರುವ ಚಾಮರಾಜನಗರ BSP ಅಭ್ಯರ್ಥಿ!

ಈಗಾಗಲೇ KSRTC, NWRTC, KKRTCಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಟೆಕೆಟ್ ಬುಕಿಂಗ್ ಆಗಿವೆ. ಮೇ 9ರಂದು ರಾತ್ರಿ ಬೆಂಗಳೂರಿನಿಂದ 25 ಲಕ್ಷ ಜನರು ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುವ ನಿರೀಕ್ಷೆ ಇದೆ. ಈಗಾಗಲೇ ಕೆಲ ಬುಕ್ಕಿಂಗ್ ವೆಬ್ಸೈಟ್ನಲ್ಲಿ ಅಡ್ವಾನ್ಸ್ ಆಗಿ ಟಿಕೆಟ್ ಬುಕ್ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಬೆಂಗಳೂರಿಂದ ಪ್ರತಿನಿತ್ಯ 2 ರಿಂದ 2,500 ಬಸ್‍ಗಳು ವಿವಿಧ ಭಾಗಗಳಿಗೆ ಸೇವೆ ಒದಗಿಸುತ್ತಿದೆ. ಆದರೆ ಮೇ 9ರಂದು ರಾತ್ರಿ 7 ಸಾವಿರಕ್ಕೂ ಅಧಿಕ ಖಾಸಗಿ ಬಸ್‍ಗಳು ರಸ್ತೆಗಳಿಸಲು ಖಾಸಗಿ ಬಸ್ ಮಾಲೀಕರು ಸಜ್ಜಾಗಿ ನಿಂತಿದ್ದಾರೆ. ಬಳ್ಳಾರಿ, ಬೆಳಗಾವಿ, ಮಂಗಳೂರು, ಚಿಕ್ಕಮಗಳೂರು, ಶೃಂಗೇರಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಗೆ ಈಗಾಗಲೇ ಅಡ್ವಾನ್ಸ್ ಆಗಿ ಟಿಕೆಟ್ ಬುಕ್ ಆಗಿವೆ. ಬಹುತೇಕ ಸಿಟ್‍ಗಳು ಹೌಸ್‍ಫುಲ್ ಆಗಿವೆ.

ಇದನ್ನೂ ಓದಿ: Karnataka Election 2023: ಎಲೆಕ್ಷನ್‌ ಬಿಸಿಯ ನಡುವೆ ಹೆಚ್ಚಾಯ್ತು ಹೂವಿನ ಹಾರಗಳಿಗೆ ಬೇಡಿಕೆ

ಅಲ್ಲದೆ ಅಭ್ಯರ್ಥಿಗಳು ಮುಂಗಡ ಟಿಕೆಟ್‍ಗಳನ್ನು ಕಾಯ್ದಿರಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ತಮ್ಮ ಕ್ಷೇತ್ರದ ಜನರ ಪಟ್ಟಿ ರೆಡಿ ಮಾಡಿಕೊಂಡಿದ್ದು, ಸಾವಿರದ ಲೆಕ್ಕದಲ್ಲಿ ಟಿಕೆಟ್ ಖರೀದಿ ಮಾಡ್ತಿದ್ದಾರೆ. ಜಿಲ್ಲಾವಾರು ಬಸ್ ಸಂಘಗಳ ಜೊತೆ ಎಲ್ಲಾ ರಾಜಕೀಯ ಮುಖಂಡರು ಕೂಡ ಚರ್ಚೆ ಮಾಡ್ತಿದ್ದಾರೆ. ಈ ಮೂಲಕ ಮೇ 9ರಂದು ಬೆಂಗಳೂರಿನಿಂದ ಸುಮಾರು 7 ಸಾವಿರ ಖಾಸಗಿ ಬಸ್ ಗಳು ಸೇವೆ ನೀಡಲು ಸಜ್ಜಾಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News