ಬೆಂಗಳೂರಿನಲ್ಲಿ ಇಂದೂ ಸಹ ಮುಂದುವರೆಯಲಿದೆ ಅಮಿತ್ ಶಾ 'ಹವಾ'

'ಕರುನಾಡ ಜಾಗೃತಿ ಯಾತ್ರೆ' ಅಂಗವಾಗಿ ನಿನ್ನೆಯಿಂದ ಎರಡು ದಿನ ಬೆಂಗಳೂರು ಪ್ರವಾಸ ಕೈಗೊಂಡಿರುವ ಬಿಜೆಪಿ ಚಾಣಕ್ಯ.

Last Updated : Apr 19, 2018, 09:18 AM IST
ಬೆಂಗಳೂರಿನಲ್ಲಿ ಇಂದೂ ಸಹ ಮುಂದುವರೆಯಲಿದೆ ಅಮಿತ್ ಶಾ 'ಹವಾ' title=

ಬೆಂಗಳೂರು: 'ಕರುನಾಡ ಜಾಗೃತಿ ಯಾತ್ರೆ' ಅಂಗವಾಗಿ ಏ. 18, ಏ. 19 ರಂದು ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ 'ಹವಾ' ಸಿಲಿಕಾನ್ ಸಿಟಿಯಲ್ಲಿ ಇಂದೂ ಸಹ ಮುಂದುವರೆಯಲಿದೆ.

ಏಪ್ರಿಲ್ 19ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರವರ ಕಾರ್ಯಕ್ರಮದ ವಿವರ
* ಬೆಳಿಗ್ಗೆ 9:40 ಕ್ಕೆ ಬಿಜೆಪಿ ಕಚೇರಿಗೆ ಆಗಮನ ಜಗನ್ನಾಥ ಭವನದಲ್ಲಿ ಚುನಾವಣಾ ಉಸ್ತುವಾರಿಗಳು, ಸೋಷಿಯಲ್ ಮೀಡಿಯಾ, ವಕ್ತಾರರು, ಪ್ರಚಾರ ಸಮಿತಿ ಸಭೆ 

* ಮಧ್ಯಾಹ್ನ 12:30 ಕ್ಕೆ ರಾಜಕೀಯ ಉಸ್ತುವಾರಿಗಳ ಸಭೆ

* ಮಧ್ಯಾಹ್ನ 1:30 ಕ್ಕೆ ಪಕ್ಷದ ಕಚೇರಿಯಲ್ಲಿ ಊಟ

* ಮಧ್ಯಾಹ್ನ 3:00 ಕ್ಕೆ ಅನಂತ ವಿದ್ಯಾನಿಕೇತನ ಶಾಲೆಗೆ ಭೇಟಿ ( ದೇವನಹಳ್ಳಿ)

* ಸಂಜೆ 4:15 ಶಕ್ತಿ ಕೇಂದ್ರ ಪ್ರಮುಖರ ಸಭೆ

* ಸಂಜೆ 6:00 ಕ್ಕೆಸಮಾಜ ಚಿಂತನಾ ಸಭೆ 

* ಸಂಜೆ 7:00 ಕ್ಕೆ ಟ್ರೇಡ್ ಅಂಡ್ ಇಂಡಸ್ಟ್ರಿ ಲೀಡರ್ಸ್ ಜೊತೆ ಸಂವಾದ ( ಜ್ಞಾನ ಜ್ಯೋತಿ)

* ರಾತ್ರಿ 8:30 ಕ್ಕೆ ಹೆಚ್ ಎ ಎಲ್ ಮೂಲಕ ದೆಹಲಿಗೆ ವಾಪಸ್.

Trending News