ಡಿ.ಕೆ.ಶಿವಕುಮಾರ್ ಗೆ 'ಟಾಂಗ್' ನೀಡಿದ ಬಿ.ವೈ. ವಿಜಯೇಂದ್ರ!

ಶಿರಾ, ಆರ್.ಆರ್.ನಗರ ಚುನಾವಣೆ ಸೋಲು ಕಾಂಗ್ರೆಸ್ ಹಾಗೂ ಡಿಕೆಶಿಗೆ ಆಘಾತ ತಂದಿದೆ

Last Updated : Nov 30, 2020, 12:45 PM IST
  • ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಉಪಚುನಾವಣೆ ಸೋಲಿನಿಂದ ಹತಾಶರಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ
  • ಶಿರಾ, ಆರ್.ಆರ್.ನಗರ ಚುನಾವಣೆ ಸೋಲು ಕಾಂಗ್ರೆಸ್ ಹಾಗೂ ಡಿಕೆಶಿಗೆ ಆಘಾತ ತಂದಿದೆ
  • ಸಂತೋಷ್ ಆತ್ಮಹತ್ಯೆ ಯತ್ನ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ
ಡಿ.ಕೆ.ಶಿವಕುಮಾರ್ ಗೆ 'ಟಾಂಗ್' ನೀಡಿದ ಬಿ.ವೈ. ವಿಜಯೇಂದ್ರ! title=

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಉಪಚುನಾವಣೆ ಸೋಲಿನಿಂದ ಹತಾಶರಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ(B.Y. Vijayendra), ಶಿರಾ, ಆರ್.ಆರ್.ನಗರ ಚುನಾವಣೆ ಸೋಲು ಕಾಂಗ್ರೆಸ್ ಹಾಗೂ ಡಿಕೆಶಿಗೆ ಆಘಾತ ತಂದಿದೆ. ಹೀಗಾಗಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಇಂತಹ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಗ್ರಾಮಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್

ಸಂತೋಷ್ ಚೇತರಿಸಿಕೊಳ್ಳುತ್ತಿದ್ದಂತೆಯೇ ಸಿಎಂ ಯಡಿಯೂರಪ್ಪ ಭೇಟಿಯಾಗಿ, ಏನೆಂಬುದನ್ನು ಚರ್ಚಿಸುತ್ತಾರೆ. ಊಹಾಪೋಹಗಳನ್ನು ಹರಡುವುದು ಬೇಡ ಎಂದರು.

ಕೈ ಶಾಸಕಿಯ ಮರಾಠ ಪ್ರೇಮ: 2ಎ ಮೀಸಲಾತಿ ನೀಡದಿದ್ದರೆ ಚುನಾವಣಾ ಬಹಿಷ್ಕಾರ ಎಚ್ಚರಿಕೆ!

Trending News