ಉದ್ಯಮಿಯ ಕೊಲೆಗೆ ಪತ್ನಿಯಿಂದಲೆ ಸ್ಕೇಚ್..! ತಾಯಿಯ ಕೃತ್ಯ ಬಯಲಿಗೆಳೆದ ಪುತ್ರಿ..

ತಂದೆಯ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಸಂತೋಷ ಪುತ್ರಿ ಸಂಜಾನಾ ಅಂತ್ಯಕ್ರಿಯೆ ಬಳಿಕ ಸಿಸಿ ಕ್ಯಾಮರಾ ಪುಟೇಜ್ ತೋರಿಸುವಂತೆ ತಾಯಿಗೆ ಕೆಳಿದ್ದಾಳೆ.‌ ಆಗ ಉಮಾ ಈಗಷ್ಟೆ ಅಂತ್ಯಕ್ರಿಯೆ ಮುಗಿದಿದೆ, ಸ್ನಾನ ಮಾಡಿ ಬರೋಗು ಎಂದು ಪುತ್ರಿ ಸಂಜನಾಗೆ ಹೇಳಿದ್ದಳು... ನಂತರ ಆಗಿದ್ದೇನು..?.. 

Written by - Krishna N K | Last Updated : Oct 16, 2024, 03:52 PM IST
    • ಸಂತೋಷ ‌ಪದ್ಮನ್ನವರ ಅವರದ್ದು ಸಹಜ ಸಾವಲ್ಲ ಕೊಲೆ ಎನ್ನಲಾಗಿದೆ.
    • ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಸಂತೋಷಗೆ ಕುಡಿಸಿದ್ದಾರೆ.
    • ಉಮಾ ಹೃದಯಾಘಾತದಿಂದ ‌ಮೃತನಾಗಿದ್ದಾನೆಂದು ಕಥೆ ಕಟ್ಟಿದ್ದಳು.
ಉದ್ಯಮಿಯ ಕೊಲೆಗೆ ಪತ್ನಿಯಿಂದಲೆ ಸ್ಕೇಚ್..! ತಾಯಿಯ ಕೃತ್ಯ ಬಯಲಿಗೆಳೆದ ಪುತ್ರಿ.. title=

ಬೆಳಗಾವಿ: ಕಳೆದು ಐದಾರು ದಿನಗಳ ಹಿಂದೆ ಬೆಳಗಾವಿ ಆಗರ್ಭ ಶ್ರಿಮಂತನ ಸಾವಾಗಿತ್ತು. ಸಹಜ ಸಾವು ಎಂದು ಅಂತ್ಯಕ್ರಿಯೆಯ ನಡೆದಿತ್ತು. ಆದರೆ ಆ ಶ್ರಿಮಂತ ವ್ಯಕ್ತಿಯ ಪುತ್ರಿಯ ಸಂದೇಹಕ್ಕೆ ಇದು ಸಹಜಸಾವಲ್ಲ ಕೊಲೆ ಎಂದು ಸಂಶಯ ವ್ಯಕ್ತವಾಗಿದೆ.

ಬೆಳಗಾವಿಯ ರಿಯಲ್ ಎಸ್ಟೇಟ್ ‌ಉದ್ಯಮಿಯಾಗದ್ದ ಆಂಜನೇಯ‌ ನಗರದ ನಿವಾಸಿ ಸಂತೋಷ ‌ಪದ್ಮನ್ನವರ ಅವರದ್ದು, ಸಹಜ ಸಾವಲ್ಲ ಕೊಲೆಯಾಗಿದೆ ಎನ್ನಲಾಗಿದೆ, ಸಂತೋಷ ತನ್ನ ಪತ್ನಿ ಉಮಾಗೆ ನಿರಂತರ ‌ಕಿರುಕುಳ ಜೊತೆಗೆ ಸಂಶಯ ಪಡ್ತಿದ್ದ ಎನ್ನಾಲಾಗಿದೆ. ಇದೆ ಕಾರಣಕ್ಕೆ ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಸಂತೋಷಗೆ ಕುಡಿಸಿದ್ದಾರೆ.‌ ಉದ್ಯಮಿ ಪ್ರಜ್ಞೆ ತಪ್ಪಿದ್ದಾ, ಬಳಿಕ ಫೆಸ್ಬುಕ್ ಗೆಳೆಯ, ಮನೆ ಕೆಲಸದವರು ಸೇರಿ ಪಿಲ್ಲೋದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸಂತೋಷ ‌ಉಸಿರು ಚೆಲ್ತಿದ್ದಂತೆ ಪತ್ನಿ ಉಮಾ ಹೃದಯಾಘಾತದಿಂದ ‌ಮೃತನಾಗಿದ್ದಾನೆಂದು ಕಥೆ ಕಟ್ಟಿದ್ದಳು ಎಂದು ಮೂಲಗಳು ತಿಳಿಸಿವೆ. ಬಳಿಕ ಉಮಾ‌ ಮಾತು ನಂಬಿ ಸಂಬಂಧಿಕರು ಅಂತ್ಯಕ್ರಿಯೆ ‌ನಡೆಸಿದ್ದರು. 

ಇದನ್ನೂ ಓದಿ:2026 ರಲ್ಲಿ ಕೆಎಫ್‌ಡಿ ಲಸಿಕೆ ಲಭ್ಯ, ಐಸಿಎಂಆರ್ ನಿರ್ದೇಶಕರನ್ನ ಭೇಟಿ ಮಾಡಿ ಚರ್ಚಿಸಿದ ಆರೋಗ್ಯ ಸಚಿವರು

ತಂದೆಯ ಸಾವಿನ ಸುದ್ದಿ ತಿಳಿದು ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಸಂತೋಷ ಪುತ್ರಿ ಸಂಜಾನಾ ಅಂತ್ಯಕ್ರಿಯೆ ಬಳಿಕ ಸಿಸಿ ಕ್ಯಾಮರಾ ಪುಟೇಜ್ ತೋರಿಸುವಂತೆ ತಾಯಿಗೆ ಕೆಳಿದ್ದಾಳೆ.‌ ಆಗ ಉಮಾ ಈಗಷ್ಟೆ ಅಂತ್ಯಕ್ರಿಯೆ ಮುಗಿದಿದೆ, ಸ್ನಾನ ಮಾಡಿ ಬರೋಗು ಎಂದು ಪುತ್ರಿ ಸಂಜನಾಗೆ ಹೇಳಿದ್ದಾಳೆ. ಸಂಜನಾ ಸ್ನಾನಕ್ಕೆ ಹೋದಾಗ ಪುತ್ರರಿಗೆ ಹೇಳಿ ಕೊಲೆ ಘಟನೆಗೆ ಸಂಬಂಧಿಸಿದ ಒಂದು ಗಂಟೆ ಅವಧಿಯ ಸಿಸಿ ಕ್ಯಾಮರಾ ಪುಟೇಜ್ ‌ಡಿಲೀಟ್ ಮಾಡಿಸಿದ್ದಾಳೆ. ಕೊಲೆ ನಡೆದ ಒಂದು ಗಂಟೆ ಅವಧಿಯ ದೃಶ್ಯಾವಳಿ ಕಾಣದಾಗ ಅನುಮಾನಗೊಂಡಿರುವ ಸಂಜನಾ, ಒಂದು ಗಂಟೆಯ ಪುಟೇಜ್ ಎಲ್ಲಿ ಎಂದು ‌ಸಹೋದರರನ್ನು ಪ್ರಶ್ನಿಸಿದ್ದಾಳೆ. 

ತಾಯಿ ಹೇಳಿದಕ್ಕೆ ಪುಟೇಜ್ ಡಿಲೇಟ್ ಮಾಡಿದ್ದೇವೆ ಎಂದಿದ್ದಾನೆ. ಆಗ ಸಂಜನಾ ತಂದೆಯ ಸಾವು ಸಹಜವಲ್ಲ, ಕೊಲೆ ಇರಬಹುದೆಂದು ಮಾಳಮಾರುತಿ ಠಾಣೆಯಲ್ಲಿ ತಾಯಿ ಉಮಾ ಸೇರಿದಂತೆ 4. ಜನರ ಮೇಲೆ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ‌ಪೊಲೀಸರು, ಸಂತೋಷನ ಎದುರ ಮನೆಯ ಸಿಸಿ ಕ್ಯಾಮರಾ ಪುಟೇಜ್ ಚೆಕ್ ಮಾಡಿದ್ದಾರೆ.‌ ಆಗ ರಾತ್ರಿ ಸಮಯದಲ್ಲಿ ಸಂತೋಷ ‌ಮನೆಯಿಂದ ಇಬ್ಬರು ಹೋಗುವ ದೃಶ್ಯ ಸೆರೆಯಾಗಿದೆ. 

ಇದನ್ನೂ ಓದಿ:ಮಹತ್ವಾಕಾಂಕ್ಷೆಯ ಕಾವೇರಿ 5 ನೇ ಹಂತದ ಯೋಜನೆಗೆ ಸಿಎಂ ಚಾಲನೆ

ಅಕ್ಟೋಬರ್ 9ರಂದು ಕೊಲೆ ನಡೆದಿದ್ದು, ಇಂದು ಸ್ಮಶಾನದಲ್ಲಿ ಹೂತಿದ್ದ ಸಂತೋಷ ಮೃತದೇಹ ಹೊರತೆಗೆಯಲಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಸಾಬೀತಾದರೆ ಆರೋಪಿಗಳನ್ನು ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಮಾಳ‌ ಫೆಸ್ಬುಕ್ ಗೆಳೆಯ ಮಂಗಳೂರು ಮೂಲದವ ಎಂಬ ಮಾಹಿತಿ ಸಿಕ್ಕಿದ್ದು, ಅವರ ಬಂಧನಕ್ಕೂ ವಿಶೇಷ ತಂಡ ರಚಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News