ಪಿಜಿಗೆ ನುಗ್ಗಿ ಚಾಕುವಿನಿಂದ ಇರಿದು ಯುವತಿ ಕತ್ತು ಕೊಯ್ದ ಹಂತಕ..! ಭೀಕರ ಕೊಲೆ.. ಸಿಸಿಟಿವಿಯಲ್ಲಿ ಸೆರೆ

ಒಂದೇ ಒಂದು ಕ್ಷಣ ಕೂಡ ಬಿಡದೇ ಚಾಕುವಿನಿಂದ ಚುಚ್ಚಿ ಹೊರಟೇ ಬಿಟ್ಟಿದ್ದ.. ರಕ್ತದ ಮಡುವಿನಲ್ಲಿ ಒದ್ದಾಡಿದ ಕೃತಿ ಕುಮಾರಿ ನರಳಿ ನರಳಿ ಪ್ರಾಣಬಿಟ್ಟಿದ್ಳು. ಅಲ್ಲಿದ್ದ ಇತರ ಯುವತಿಯರು ಆಕೆಯ ಕೊನೆ ಘಳಿಗೆ ನೋಡ್ತಿದ್ರು ಹತ್ತಿರ ಸುಳಿದಿರ್ಲಿಲ್ಲ.. ಮುಂದೆನಾಯ್ತು..? ರೋಚಕ ಸುದ್ದಿ ಇಲ್ಲಿದೆ..

Written by - VISHWANATH HARIHARA | Edited by - Krishna N K | Last Updated : Jul 26, 2024, 08:21 PM IST
    • ಕೋರಮಂಗಲ ಪಿಜಿಯಲ್ಲಿ ನಡೆದ ಯುವತಿಯ ಕೊಲೆ
    • ಬ್ಯಾಗ್ ಜೊತೆಗೆ ಲೇಡಿಸ್ ಪಿಜಿಗೆ ಎಂಟ್ರಿ ಕೊಟ್ಟಿದ್ದ ಆಸಾಮಿ
    • ಹಂತಕನ ಅಟ್ಟಹಾಸ ಹೇಗಿತ್ತು ಅನ್ನೋದನ್ನೇ ತೋರಿಸ್ತೀವಿ ನೋಡಿ
ಪಿಜಿಗೆ ನುಗ್ಗಿ ಚಾಕುವಿನಿಂದ ಇರಿದು ಯುವತಿ ಕತ್ತು ಕೊಯ್ದ ಹಂತಕ..! ಭೀಕರ ಕೊಲೆ.. ಸಿಸಿಟಿವಿಯಲ್ಲಿ ಸೆರೆ title=

ಬೆಂಗಳೂರು : ಕೋರಮಂಗಲ ಪಿಜಿಯಲ್ಲಿ ನಡೆದ ಯುವತಿಯ ಕೊಲೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಬ್ಯಾಗ್ ಜೊತೆಗೆ ಲೇಡಿಸ್ ಪಿಜಿಗೆ ಎಂಟ್ರಿ ಕೊಟ್ಟಿದ್ದ ಆಸಾಮಿ ಎರಡೇ ನಿಮಿಷದಲ್ಲಿ ಕೆಲಸ ಮುಗಿಸಿ ಹೊರಟಿದ್ದ. ಅಲ್ಲೇ ಓಡಾಡ್ತಿದ್ದ ಯುವತಿಯರು ಸಹ ಭಯಭೀತರಾಗಿ ಆಕೆಯ ಸಹಾಯಕ್ಕೂ ಸಹ ಹೋಗಿಲ್ಲ. ಹಾಗಾದ್ರೆ ಹಂತಕನ ಅಟ್ಟಹಾಸ ಹೇಗಿತ್ತು ಅನ್ನೋದನ್ನೇ ತೋರಿಸ್ತೀವಿ ನೋಡಿ.

ಈ ದೃಶ್ಯಗಳನ್ನು ನೋಡುತ್ತಿದ್ದರೆ ಅನ್ನಿಸೋದು ಎಷ್ಟು ಭಯಾನಕ.. ಭೀಕರ.. ಭೀಬತ್ಸ ಅಂತಾ.. ಹೆಣ್ಣು ಅಂತಾನು ನೋಡದೇ ಆಸಾಮಿ ಅದ್ಹೇಗೆ ಅಟ್ಟಹಾಸ ಮೆರೆಯುತ್ತಿದ್ದಾನೆ ನೋಡಿ.. ಒಂದೇ ಒಂದು ಕ್ಷಣ ಕೂಡ ಬಿಡದೇ ಚಾಕುವಿನಿಂದ ಚುಚ್ಚಿ ಹೊರಟೇ ಬಿಟ್ಟಿದ್ದ.. ರಕ್ತದ ಮಡುವಿನಲ್ಲಿ ಒದ್ದಾಡಿದ ಕೃತಿ ಕುಮಾರಿ ನರಳಿ ನರಳಿ ಪ್ರಾಣಬಿಟ್ಟಿದ್ಳು. ಆದ್ರೆ ವಿಪರ್ಯಾಸ ಅಂದ್ರೆ ಪಿಜಿ ಯಲ್ಲಿರೊ ಯುವತಿಯರು ಆಕೆಯ ಕೊನೆ ಘಳಿಗೆ ನೋಡ್ತಿದ್ರು ಹತ್ತಿರ ಸುಳಿದಿರ್ಲಿಲ್ಲ.. ಅಂಗಲಾಚಿ ಬೇಡಿದ್ರು ಹತ್ತಿರ ಸುಳಿದಿರ್ಲಿಲ್ಲ..

ಇದನ್ನೂ ಓದಿ:ಪಬ್ಲಿಸಿಟಿ ಆಸೆಗೆ ಬಿದ್ದು ಮೂಕಸನ್ನೆಯನ್ನ ಅವಹೇಳನ ಮಾಡಿದ್ದ ರೆಡಿಯೋ ಜಾಕಿ ಸೇರಿ ಇಬ್ಬರ ಬಂಧನ

ಹೌದು.. 23 ರ ರಾತ್ರಿ 11.13 ರ ಸಮಯ. ಕೋರಮಂಗಲದಲ್ಲಿರುವ ಭಾರ್ಗವಿ ಸ್ಟೇಯಿಂಗ್ ಹೋಮ್ಸ್ ಲೇಡಿಸ್ ಪಿಜಿಗೆ ಭೋಪಾಲ್ ಮೂಲದ ಆರೋಪಿ ಅಭಿಷೇಕ್ ಎಂಟ್ರಿಯಾಗಿದ್ದ. ಹೀಗೆ ಬಂದವನು ಕೃತಿಕುಮಾರಿ ಉಳಿದುಕೊಂಡಿದ್ದ ಮೂರನೇ ಫ್ಲೋರ್ ನ ರೂಂ ಬಳಿ ಬಂದಿದ್ದ. ಬಂದವನೇ ತಾನು ತಂದಿದ್ದ ಚಾಕುವಿನಿಂದ ಆಕೆಗೆ ಇರಿಯಲು ಶುರು ಮಾಡಿದ್ದ. ರೂಮ್ ನಿಂದ ಹೊರಗೆ ಎಳೆತಂದು ಎದೆ, ಹೊಟ್ಟೆ ಭಾಗಕ್ಕೆ ಸೇರಿ ಹಲವು ಕಡೆ ಇರಿದು ಬಳಿಕ ಕತ್ತುಕೊಯ್ದು ಎರಡೇ ನಿಮಿಷದಲ್ಲಿ ಕೆಲಸ ಮುಗಿಸಿ ಅಲ್ಲಿಂದ ಪರಾರಿ ಆಗಿದ್ದ. ಪ್ರಾಣ ಉಳಿಸಿಕೊಳ್ಳಲು ಓದ್ದಾಡಿರೋ ಕೃತಿ ಕುಮಾರಿ ರಕ್ತದ ಮಡುವಿನಲ್ಲಿದ್ದು ಸಹಾಯಹಸ್ತ ಚಾಚಿದ್ರು ಆದ್ರೆ ಪಿಜಿಯಲ್ಲಿದ್ದ ಮೂವರು ಯುವತಿಯರು  ಹತ್ತಿರ ಕೂಡ ಸುಳಿದಿಲ್ಲ. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್ ಗಾಗಿ ಹುಡುಕಾಟ ನಡೆಸ್ತಿದ್ದಾರೆ. ಕೊಲೆ ಮಾಡಿದ ಬಳಿಕ ಈ ಆರೋಪಿ ಬಟ್ಟೆ ಬದಲಿಸಿಕೊಂಡು ಭೋಪಾಲ್ ಗೆ ಪರಾರಿಯಾಗಿರೋ ಸಾಧ್ಯತೆ ಇದೆ. ಆರೋಪಿ ಬಂಧನಕ್ಕಾಗಿ ಕೋರಮಂಗಲ ಪೊಲೀಸರು ಭೋಪಾಲ್ ಗೆ ತೆರಳಿದ್ದಾರೆ. ‌ಆರೋಪಿ ಬಂಧನ ಬಳಿಕ ಕೃತಿ ಕುಮಾರಿ ಕೊಲೆಗೆ ನಿಖರ ಕಾರಣ ಏನು ಅನ್ನೋದು ಗೊತ್ತಾಗಲಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News