ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಕಾಂಗ್ರೆಸ್ ಆಕ್ರೋಶ

ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ 3 ವರ್ಷದಿಂದ ಸ್ಥಗಿತಗೊಂಡಿದೆ ಎಂದರೆ ನಿಮಗೆ ನಾಚಿಕೆಗೇಡಿನ ವಿಚಾರವಲ್ಲವೇ? ಎಂದು ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

Written by - Puttaraj K Alur | Last Updated : Nov 21, 2022, 03:12 PM IST
  • 3 ವರ್ಷಗಳಿಂದ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಕಾಮಗಾರಿ ಸ್ಥಗಿತಗೊಳಿಸಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ
  • ರಸ್ತೆ ಗುಂಡಿ ಮುಚ್ಚುವುದಿಲ್ಲ, ಆರಂಭಗೊಂಡ ಕಾಮಗಾರಿ ಮುಗಿಸುವುದಿಲ್ಲ & ಜನರ ಗೋಳನ್ನೂ ಕೇಳುವುದಿಲ್ಲ
  • 40% ಕಮಿಷನ್ನಿಗಾಗಿ ಈ ಪರಿ ಜನರಿಗೆ ಹಿಂಸೆ ನೀಡುತ್ತಿರುವುದಕ್ಕೆ ಕೊಂಚವೂ ಪಾಪಪ್ರಜ್ಞೆ ಕಾಡುವುದಿಲ್ಲವೇ?
ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಕಾಂಗ್ರೆಸ್ ಆಕ್ರೋಶ title=
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಆಕ್ರೋಶ!

ಬೆಂಗಳೂರು: ನಿಷ್ಕ್ರಿಯತೆಗೆ ಮತ್ತು ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಕಾಮಗಾರಿಯನ್ನು 3 ವರ್ಷಗಳಿಂದ ಸ್ಥಗಿತಗೊಳಿಸಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಸಿಎಂ ಬಸವರಾಜ ಬೊಮ್ಮಾಯಿಯವರು ಉತ್ತರಿಸುವರೇ?’ ಎಂದು ಪ್ರಶ್ನಿಸಿದೆ.

ರಸ್ತೆ ಗುಂಡಿಗಳನ್ನೂ ಮುಚ್ಚುವುದಿಲ್ಲ, ಆರಂಭಗೊಂಡ ಕಾಮಗಾರಿಯನ್ನೂ ಮುಗಿಸುವುದಿಲ್ಲ. ಜನರ ಗೋಳನ್ನೂ ಕೇಳುವುದಿಲ್ಲ. ಹೆಬ್ಬಾಳ ಮೇಲ್ಸೇತುವೆಯ ಅಗಲೀಕರಣ ಕಾಮಗಾರಿಗೆ ಹಿಂದಿನ ಸರ್ಕಾರವೇ ಅನುಮೋದನೆ ನೀಡಿತ್ತು, ಕಾಮಗಾರಿಯೂ ಆರಂಭವಾಗಿತ್ತು. ಆದರೆ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಕಳೆದ 3 ವರ್ಷದಿಂದ ಅಗಲೀಕರಣ ಕಾಮಗಾರಿ ನಿಂತಿದ್ದೇಕೆ ಬೊಮ್ಮಾಯಿಯವರೇ? 40% ಕಮಿಷನ್‌ಗಾಗಿಯೇ? ಖಜಾನೆ ದಿವಾಳಿಯಾಗಿದೆಯೇ? ಇಚ್ಛಾಶಕ್ತಿ ಇಲ್ಲವೇ?’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರ ಹೆಡೆಮುರಿ ಕಟ್ಟುತ್ತೇವೆ: ಕಟೀಲ್

‘ಬೆಂಗಳೂರು ಉಸ್ತುವಾರಿಯನ್ನು, ನಗರಾಭಿವೃದ್ಧಿ ಖಾತೆಯನ್ನು ಹಾಗೂ ಮುಖ್ಯಮಂತ್ರಿ ಪದವಿಯನ್ನೂ ಹೊಂದಿರುವ ಬೊಮ್ಮಾಯಿಯವರೇ, ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ 3 ವರ್ಷದಿಂದ ಸ್ಥಗಿತಗೊಂಡಿದೆ ಎಂದರೆ ನಿಮಗೆ ನಾಚಿಕೆಗೇಡಿನ ವಿಚಾರವಲ್ಲವೇ? 40% ಕಮಿಷನ್ನಿಗಾಗಿ ಈ ಪರಿ ಜನರಿಗೆ ಹಿಂಸೆ ನೀಡುತ್ತಿರುವುದಕ್ಕೆ ಕೊಂಚವೂ ಪಾಪಪ್ರಜ್ಞೆ ಕಾಡುವುದಿಲ್ಲವೇ?’ ಅಂತಾ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.

ಖಾಲಿ ಕುರ್ಚಿಗೆ ಶ್ರೀರಾಮುಲು ಭಾಷಣ!

ಖಾಲಿ ಕುರ್ಚಿಗೆ ಭಾಷಣ ಮಾಡಿದ ಬಿ.ಶ್ರೀರಾಮುಲು ಅವರೇ, "ತಾಕತ್ತಿದ್ದರೆ ಬನ್ನಿ" ಎಂದು ಜನರಿಗೆ ಸವಾಲು ಹಾಕುತ್ತಿರುವಿರಾ? ಅಥವಾ ನಿಮ್ಮ ಕಿರುಚಾಟ, ಅಪಭ್ರಂಶದ ಭಾಷಣ ಕೇಳಲು ತಾಕತ್ತು ಇರಬೇಕು ಎಂದು ಹೇಳುತ್ತಿರುವಿರಾ?! ಬಿಜೆಪಿಗರಿಗೆ ಈಗ ಉಲ್ಬಣಿಸುತ್ತಿರುವ ದಮ್ಮು ತಾಕತ್ತಿನ ಕಾಯಿಲೆಗೆ ಜನ ಚುನಾವಣೆಯಲ್ಲಿ ಸರಿಯಾದ ಚಿಕಿತ್ಸೆ ನೀಡಲಿದ್ದಾರೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಮತ ಬ್ಯಾಂಕ್ ರಾಜಕಾರಣ ನಡೆಯುವುದಿಲ್ಲ : ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News