ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್ಗೆ ದಂಡ ವಿಧಿಸಿದ ಗ್ರಾಹಕರ ಆಯೋಗ

ಧಾರವಾಡದ ಮಹಿಷಿ ಪ್ಲಾಟ ವಾಸಿ ರಘುನಾಥ ಜೋಶಿ ರವರು ನಿವೃತ್ತಿ ಹೊಂದಿದ ನಂತರ ಎದುರುದಾರ ಕೇಶವ ಅನ್ನುವವರು ಬೆಂಗಳೂರಿನಲ್ಲಿ ಅಭಿವೃದ್ಧಿಗೊಳಿಸುತ್ತ್ತಿರುವ ಪ್ಲಾಟ್ ನಂ.11 ನ್ನು ದಿನಾಂಕ:11/11/2011 ರಂದು ರೂ.6,67,500/-ಗೆ ಖರೀದಿಸಿದ್ದರು. ಆ ಪೈಕಿ ರೂ.2,00,250/-ಗಳನ್ನು ಚೆಕ್ ಮೂಲಕ ಅಡ್ವಾನ್ಸ್ ನೀಡಿ ಎದುರುದಾರರಿಂದ ಖರೀದಿ ಕರಾರು ಪತ್ರ ಮಾಡಿಸಿಕೊಂಡಿದ್ದರು.

Written by - Manjunath N | Last Updated : Jul 17, 2023, 10:42 PM IST
  • ಬಾಕಿ ಮೊತ್ತದ ಹಣವನ್ನು ಖರೀದಿ ಪತ್ರ ನೋಂದಣಿ ಕಾಲಕ್ಕೆ ಕೊಡುವ ಕರಾರಿನೊಂದಿಗೆ ಒಪ್ಪಿ ಸಹಿ ಮಾಡಿದ್ದರೂ ಕೂಡ ಕರಾರಿನಂತೆ 6 ತಿಂಗಳಾದರೂ ಎದುರುದಾರರು ಪ್ಲಾಟ್ ಅಭಿವೃದ್ಧಿ ಮಾಡಿರಲಿಲ್ಲ.
  • ಸಾಕಷ್ಟು ಕಾಲಾವಕಾಶ ಕಳೆದರೂ ಎದುರುದಾರ ಪ್ಲಾಟ ನೋಂದಣಿ ಮಾಡಿಕೊಟ್ಟಿರಲಿಲ್ಲ ಹಾಗೂ ದೂರುದಾರರ ಮುಂಗಡ ಹಣವನ್ನು ವಾಪಸ್ಸು ಕೊಡಲಿಲ್ಲ
ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್ಗೆ ದಂಡ ವಿಧಿಸಿದ ಗ್ರಾಹಕರ ಆಯೋಗ title=
ಸಾಂದರ್ಭಿಕ ಚಿತ್ರ

ಧಾರವಾಡ: ಧಾರವಾಡದ ಮಹಿಷಿ ಪ್ಲಾಟ ವಾಸಿ ರಘುನಾಥ ಜೋಶಿ ರವರು ನಿವೃತ್ತಿ ಹೊಂದಿದ ನಂತರ ಎದುರುದಾರ ಕೇಶವ ಅನ್ನುವವರು ಬೆಂಗಳೂರಿನಲ್ಲಿ ಅಭಿವೃದ್ಧಿಗೊಳಿಸುತ್ತ್ತಿರುವ ಪ್ಲಾಟ್ ನಂ.11 ನ್ನು ದಿನಾಂಕ:11/11/2011 ರಂದು ರೂ.6,67,500/-ಗೆ ಖರೀದಿಸಿದ್ದರು. ಆ ಪೈಕಿ ರೂ.2,00,250/-ಗಳನ್ನು ಚೆಕ್ ಮೂಲಕ ಅಡ್ವಾನ್ಸ್ ನೀಡಿ ಎದುರುದಾರರಿಂದ ಖರೀದಿ ಕರಾರು ಪತ್ರ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ: ಮಹಾಘಟಬಂಧನ ಮೀಟಿಂಗ್‌: ಬೆಂಗಳೂರಿನಲ್ಲಿ ಕುಮಾರಸ್ವಾಮಿ ಆಕ್ರೋಶ

ಬಾಕಿ ಮೊತ್ತದ ಹಣವನ್ನು ಖರೀದಿ ಪತ್ರ ನೋಂದಣಿ ಕಾಲಕ್ಕೆ ಕೊಡುವ ಕರಾರಿನೊಂದಿಗೆ ಒಪ್ಪಿ ಸಹಿ ಮಾಡಿದ್ದರೂ ಕೂಡ ಕರಾರಿನಂತೆ 6 ತಿಂಗಳಾದರೂ ಎದುರುದಾರರು ಪ್ಲಾಟ್ ಅಭಿವೃದ್ಧಿ ಮಾಡಿರಲಿಲ್ಲ. ಸಾಕಷ್ಟು ಕಾಲಾವಕಾಶ ಕಳೆದರೂ ಎದುರುದಾರ ಪ್ಲಾಟ ನೋಂದಣಿ ಮಾಡಿಕೊಟ್ಟಿರಲಿಲ್ಲ ಹಾಗೂ ದೂರುದಾರರ ಮುಂಗಡ ಹಣವನ್ನು ವಾಪಸ್ಸು ಕೊಡಲಿಲ್ಲ.ಸೇವೆಯಿಂದ ನಿವೃತ್ತಿ ಹೊಂದಿ ಆರ್ಥಿಕ ತೊಂದರೆ ಅನುಭವಿಸುತ್ತಿರುವ ತನಗೆ ಎದುರುದಾರ/ಬಿಲ್ಡರವರಿಂದ ಸೇವಾ ನ್ಯೂನ್ಯತೆ ಆಗಿ ತೊಂದರೆಯಾಗಿದೆ ಅಂತಾ ಹೇಳಿ ದೂರುದಾರ ಎದುರುದಾರರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರಕ್ಕೆ ಚೆಲ್ಲಾಟ, ರೈತರಿಗೆ ಮರಣ ಸಂಕಟ: ಮಾಜಿ ಸಿಎಂ ಹೆಚ್‌ಡಿಕೆ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು 2011 ರಲ್ಲಿ ದೂರುದಾರನಿಂದ ರೂ.2,00,250/- ಹಣ ಪಡೆದುಕೊಂಡು ಎದುರುದಾರರು ಪ್ಲಾಟ ನಿರ್ಮಾಣ ಮಾಡದೇ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ದೂರುದಾರರಿಗೆ ಮೋಸ ಎಸಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ. ದೂರುದಾರರು ಸಂದಾಯ ಮಾಡಿದ ರೂ.2,00,250/- ಮತ್ತು ಅದರ ಮೇಲೆ ದಿನಾಂಕ:21/06/2011 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಣ ವಾಪಸ್ಸು ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಮ್ಯಾಕ್ಸ್‍ವರ್ತರಿಯಾಲಿಟಿಇಂಡಿಯಾದ ಚೆರಮನ್ ಮತ್ತು ಮ್ಯಾನೇಜರ್ ಡೈರೆಕ್ಟರ್ ಶ್ರೀ ಕೇಶವ ಕೆ. ರವರಿಗೆ ಆಯೋಗ ತನ್ನತೀರ್ಪಿನಲ್ಲಿ ಆದೇಶಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News