ದೂರುದಾರರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಹೆಸ್ಕಾಂಗೆ ನಿರ್ದೇಶನ

 ಧಾರವಾಡದ ವಾಸಿ ಉಷಾ ಆರ್.ಎಮ್. ಎಂಬುವವರು ಶಕ್ತಿ ನಗರದ ಅನುಗ್ರಹ ಮನೆ ನಂ.97 ರಲ್ಲಿ ವಾಸವಿದ್ದು ಅದರಲ್ಲಿ ಒಟ್ಟು 6 ಮನೆ ಬಾಗಗಳಿದ್ದವು. ಅವುಗಳ ಪೈಕಿ 2 ರಲ್ಲಿ ದೂರುದಾರಳು ಮತ್ತು ಅವಳ ಮಗ ವಾಸಿಸುತ್ತಿದ್ದರು.ಉಳಿದ 4 ಮನೆಗಳಲ್ಲಿ ಬಾಡಿಗೆದಾರರು ಇದ್ದರು.

Written by - Zee Kannada News Desk | Last Updated : Feb 7, 2024, 11:04 PM IST
  • ಬಾಕಿ ವಿದ್ಯುತ್ ಶುಲ್ಕ ಎದುರುದಾರ ಹೆಸ್ಕಾಮನವರಿಗೆ ದೂರುದಾರಳು ಕಟ್ಟಿ ಬಂದು ವರದಿ ಮಾಡಿದರು
  • 2 ವಿದ್ಯುತ್ ಮೀಟರಗಳಿಗೆ ಸರಬರಾಜು ಬಂದ್ ಮಾಡದಂತೆ ಎದುರುದಾರ ಹೆಸ್ಕಾಮನವರಿಗೆ ಆಯೋಗ ಆದೇಶಿಸಿದೆ
  • ಇನ್ನು ಮುಂದೆ ವಿದ್ಯು ಬಳಕೆಯ ಶುಲ್ಕ ತಪ್ಪದೇ ಕಟ್ಟಿಕೊಂಡು ಹೋಗುವಂತೆ ದೂರುದಾರರಿಗೆ ಸೂಚಿಸಿದೆ
ದೂರುದಾರರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಹೆಸ್ಕಾಂಗೆ ನಿರ್ದೇಶನ title=
ಸಾಂಧರ್ಭಿಕ ಚಿತ್ರ

ಧಾರವಾಡ: ಧಾರವಾಡದ ವಾಸಿ ಉಷಾ ಆರ್.ಎಮ್. ಎಂಬುವವರು ಶಕ್ತಿ ನಗರದ ಅನುಗ್ರಹ ಮನೆ ನಂ.97 ರಲ್ಲಿ ವಾಸವಿದ್ದು ಅದರಲ್ಲಿ ಒಟ್ಟು 6 ಮನೆ ಬಾಗಗಳಿದ್ದವು. ಅವುಗಳ ಪೈಕಿ 2 ರಲ್ಲಿ ದೂರುದಾರಳು ಮತ್ತು ಅವಳ ಮಗ ವಾಸಿಸುತ್ತಿದ್ದರು.ಉಳಿದ 4 ಮನೆಗಳಲ್ಲಿ ಬಾಡಿಗೆದಾರರು ಇದ್ದರು.

ಇದನ್ನೂ ಓದಿ: Thalapathy Vijay: ಏನೇ ಆದ್ರೂ ನಾನು ವಿಜಯ್’ಗೆ ಓಟು ಹಾಕಲ್ಲ! ಮುಲಾಜಿಲ್ಲದೆ ಬಹಿರಂಗ ಹೇಳಿಕೆ ಕೊಟ್ಟ ಆ ಸ್ಟಾರ್ ನಟ ಯಾರು?

ಗಂಡ ಹೆಂಡತಿಯ ಮಧ್ಯೆ ವ್ಯಾಜ್ಯ ಇದ್ದುದರಿಂದ ಬಾಡಿಗೆದಾರರು ಮನೆ ಖಾಲಿ ಮಾಡಿದ್ದರು. 6 ಮೀಟರಗಳ ವಿದ್ಯುತ್ ಬಳಕೆಯ ಶುಲ್ಕವನ್ನು ಕಟ್ಟಿಲ್ಲದ ಕಾರಣ ಧಾರವಾಡ ವಿದ್ಯಾಗಿರಿ ಹೆಸ್ಕಾಮ್ ನವರು ವಿದ್ಯುತ್ ಸರಬರಾಜನ್ನು ಬಂದ್ ಮಾಡಲು ಕ್ರಮ ಕೈಗೊಂಡಿದ್ದರು. ತಮ್ಮ ವಾಸ್ತವ್ಯದ 2 ಮನೆಗಳ ವಿದ್ಯುತ್ ಸರಬರಾಜು ನಿಲ್ಲಿಸಿದರೆ ತನಗೆ ತೊಂದರೆಯಾಗುತ್ತದೆ ಅಂತಾ ಹೇಳಿ ಆ ರೀತಿ ಮಾಡದಂತೆ ವಿದ್ಯಾಗಿರಿ ಹೆಸ್ಕಾಮ್ ರವರಿಗೆ ಆದೇಶ ನೀಡಬೇಕೆಂದು ದೂರುದಾರಳು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:21/06/2023 ರಂದು ಈ ದೂರನ್ನು ಸಲ್ಲಿಸಿದ್ದರು.ದೂರುದಾರಳು ಮತ್ತು ಅವರ ಗಂಡನಿಗೆ ಸಂಬಂಧಿಸಿದ ಒಟ್ಟು 6 ವಿದ್ಯುತ್ ಬಳಕೆಯ ಮೀಟರಗಳಿದ್ದು ಅವುಗಳ ವಿದ್ಯುತ್ ಬಿಲ್ಲನ್ನು ಕಟ್ಟಿಲ್ಲ. ವಿದ್ಯುತ್ ಬಳಕೆಯ ಬಾಕಿ ಬಿಲ್ಲ ಕಟ್ಟದೇ ದೂರುದಾರರಿಗೆ ಯಾವುದೇ ರೀತಿ ಸಹಾಯ ಮಾಡಲಾಗುವುದಿಲ್ಲ ಅಂತಾ ಎದುರುದಾರ ಹೆಸ್ಕಾಮನವರು ಆಕ್ಷೇಪಣೆ ಎತ್ತಿದ್ದರು.

ಇದನ್ನೂ ಓದಿ: “ನಾನು ಬಿಗ್ ಬಾಸ್’ಗೆ ಹೋಗೋಕೆ ಕಾರಣ ಅವರು”- ಕಡೆಗೂ ‘ಆ’ ವ್ಯಕ್ತಿ ಯಾರೆಂದು ಸತ್ಯ ಬಾಯ್ಬಿಟ್ಟ ಸಂಗೀತ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ಸದಸ್ಯರಾದ ವಿ.ಅ. ಬೋಳಶೆಟ್ಟಿ ದೂರುದಾರಳು ಬಾಕಿ ಇರುವ ವಿದ್ಯುತ್ ಬಳಕೆಯ ಶುಲ್ಕ ಕಟ್ಟಲು ತಯಾರು ಇರುವುದಾಗಿ ಮತ್ತು ತಾನು ಉಪಯೋಗಿಸುತ್ತಿರುವ ಮೀಟರ ನಂ.14735 ಹಾಗೂ 73261ಗಳ ವಿದ್ಯುತ್ ಬಳಕೆಯ ಶುಲ್ಕವನ್ನು ನಿಯಮಿತವಾಗಿ ಕಟ್ಟುವುದಾಗಿ ಹೇಳಿದರು. ಬಾಕಿ ವಿದ್ಯುತ್ ಶುಲ್ಕ ಎದುರುದಾರ ಹೆಸ್ಕಾಮನವರಿಗೆ ದೂರುದಾರಳು ಕಟ್ಟಿ ಬಂದು ವರದಿ ಮಾಡಿದರು. ದೂರುದಾರಳೂ ಹೆಣ್ಣು ಮಗಳಾದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಅವಳ ಹಾಗೂ ಅವಳ ಮಗನ ಬಳಕೆಯ 2 ವಿದ್ಯುತ್ ಮೀಟರಗಳಿಗೆ ಸರಬರಾಜು ಬಂದ್ ಮಾಡದಂತೆ ಎದುರುದಾರ ಹೆಸ್ಕಾಮನವರಿಗೆ ಆಯೋಗ ಆದೇಶಿಸಿದೆ. ಇನ್ನು ಮುಂದೆ ವಿದ್ಯು ಬಳಕೆಯ ಶುಲ್ಕ ತಪ್ಪದೇ ಕಟ್ಟಿಕೊಂಡು ಹೋಗುವಂತೆ ದೂರುದಾರರಿಗೆ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News