ಅಧಿಕಾರ ಸಿಗುತ್ತಿದ್ದಂತೆಯೇ ಕುಮಾರಸ್ವಾಮಿ ಯೂಟರ್ನ್ ಸ್ವಾಮಿಯಾಗಿದ್ದಾರೆ!: ಕಾಂಗ್ರೆಸ್

ʼಪ್ರಾದೇಶಿಕತೆ ಎನ್ನುತ್ತಿದ್ದವರು ಈಗ ಅದನ್ನು ಮರೆತಿದ್ದಾರೆ. ಪ್ರಾದೇಶಿಕ ಭಾಷೆಯ ಬಗ್ಗೆ ಮಾತಾಡುತ್ತಿದ್ದವರು ಹಿಂದಿಯನ್ನು ಅಪ್ಪಿ ಒಪ್ಪಿ ಮುದ್ದಾಡುತ್ತಿದ್ದಾರೆ. ನೈಸರ್ಗಿಕ ಸಂಪತ್ತನ್ನು ಕಾಪಾಡಬೇಕು ಎನ್ನುತ್ತಿದ್ದವರು ಗಣಿಗಾರಿಕೆಗೆ ಸಹಿ ಹಾಕುತ್ತಿದ್ದಾರೆʼ ಎಂದು ಕಾಂಗ್ರೆಸ್‌ ಟೀಕಿಸಿದೆ. 

Written by - Puttaraj K Alur | Last Updated : Jun 19, 2024, 07:56 PM IST
  • ಅಧಿಕಾರ ಸಿಗುತ್ತಿದ್ದಂತೆಯೇ ಕುಮಾರಸ್ವಾಮಿ ಯೂಟರ್ನ್ ಸ್ವಾಮಿಯಾಗಿ ಬದಲಾಗಿದ್ದಾರೆ
  • ಪ್ರಾದೇಶಿಕ ಭಾಷೆಯ ಬಗ್ಗೆ ಮಾತಾಡುತ್ತಿದ್ದವರು ಹಿಂದಿಯನ್ನು ಅಪ್ಪಿ ಒಪ್ಪಿ ಮುದ್ದಾಡುತ್ತಿದ್ದಾರೆ
  • ಪ್ರಾದೇಶಿಕತೆ ಎನ್ನುತ್ತಿದ್ದವರು ಈಗ ಅದನ್ನು ಮರೆತಿದ್ದಾರೆ ಎಂದು ಟೀಕಿಸಿದ ಕಾಂಗ್ರೆಸ್
ಅಧಿಕಾರ ಸಿಗುತ್ತಿದ್ದಂತೆಯೇ ಕುಮಾರಸ್ವಾಮಿ ಯೂಟರ್ನ್ ಸ್ವಾಮಿಯಾಗಿದ್ದಾರೆ!: ಕಾಂಗ್ರೆಸ್ title=
ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ!

ಬೆಂಗಳೂರು: ಕೇಂದ್ರದ NDA ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಜೆಡಿಎಸ್‌ ನಾಯಕನ ವಿರುದ್ಧ ಕಿಡಿಕಾರಿದೆ. ಎಚ್.ಡಿ.ಕುಮಾರಸ್ವಾಮಿಯವರಿಗೆ ಅಧಿಕಾರ ಸಿಗುತ್ತಿದ್ದಂತೆಯೇ ಯೂಟರ್ನ್ ಸ್ವಾಮಿಯಾಗಿ ಬದಲಾಗಿದ್ದಾರೆ!ʼ ಎಂದು ವ್ಯಂಗ್ಯವಾಡಿದೆ.

ʼಪ್ರಾದೇಶಿಕತೆ ಎನ್ನುತ್ತಿದ್ದವರು ಈಗ ಅದನ್ನು ಮರೆತಿದ್ದಾರೆ. ಪ್ರಾದೇಶಿಕ ಭಾಷೆಯ ಬಗ್ಗೆ ಮಾತಾಡುತ್ತಿದ್ದವರು ಹಿಂದಿಯನ್ನು ಅಪ್ಪಿ ಒಪ್ಪಿ ಮುದ್ದಾಡುತ್ತಿದ್ದಾರೆ. ನೈಸರ್ಗಿಕ ಸಂಪತ್ತನ್ನು ಕಾಪಾಡಬೇಕು ಎನ್ನುತ್ತಿದ್ದವರು ಗಣಿಗಾರಿಕೆಗೆ ಸಹಿ ಹಾಕುತ್ತಿದ್ದಾರೆʼ ಎಂದು ಕಾಂಗ್ರೆಸ್‌ ಟೀಕಿಸಿದೆ. 

ಇದನ್ನೂ ಓದಿ: ಶಾಲಾ ಮಕ್ಕಳಿಂದ 2 ಲಕ್ಷ ಗಿಡ ನೆಡುವ ಹಸಿರು ರಕ್ಷಕ ಅಭಿಯಾನ: ಡಿಸಿಎಂ ಡಿಕೆ ಶಿವಕುಮಾರ್

ಜನಪರ ಯೋಜನೆ ರೂಪಿಸುವ ಯೋಗ್ಯತೆಯಿಲ್ಲ!

ʼಪಂಚ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು, ಈ ಯೋಜನೆಗಳನ್ನು ಜನರ ಏಳಿಗೆಗಾಗಿ ಜಾರಿ ಮಾಡಿದ್ದೇ ಹೊರತು ಮತಗಳಿಕೆಯ ಉದ್ದೇಶಕ್ಕಾಗಿ ಮಾತ್ರವಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎನ್ನುವ ಬಿಜೆಪಿ ಪಕ್ಷದ ಅಪಪ್ರಚಾರ ಹಾಸ್ಯಾಸ್ಪದವಾಗುತ್ತದೆ. ಬಿಜೆಪಿಗೆ ಜನಪರ ಯೋಜನೆಗಳನ್ನು ರೂಪಿಸುವ ಯೋಗ್ಯತೆ ಇಲ್ಲ, ನಾವು ಜಾರಿ ಮಾಡಿದ್ದನ್ನು ನೋಡಿ ಸಹಿಸುವ ಮನಸ್ಥಿತಿಯೂ ಇಲ್ಲʼವೆಂದು ಕಾಂಗ್ರೆಸ್‌ ಕಿಡಿಕಾರಿದೆ. 

1.52 ಲಕ್ಷ ಹುದ್ದೆಗಳು ಖಾಲಿ

ರೈಲ್ವೆ ಅಭಿವೃದ್ಧಿ ಎಂದರೆ ವಂದೇ ಭಾರತ್ ರೈಲು ಬಿಡುವುದು ಎಂದು ತಿಳಿದಿರುವ ಕೇಂದ್ರ ಸರ್ಕಾರವು ರೈಲ್ವೆ ಸುರಕ್ಷತೆ, ಸಿಬ್ಬಂದಿ ನೇಮಕ ಮುಂತಾದ ವಿಷಯಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆ. 1.52 ಲಕ್ಷ ಹುದ್ದೆಗಳು ಖಾಲಿ ಇವೆ, ಇವುಗಳನ್ನು ಭರ್ತಿ ಮಾಡಿ ಕಾರ್ಯಕ್ಷಮತೆ ಹೆಚ್ಚಿಸುವ ಯಾವ ಕೆಲಸವನ್ನೂ ಕೇಂದ್ರ ಸರ್ಕಾರ ಮಾಡಿಲ್ಲ. ಸಿಗ್ನಲಿಂಗ್ ವ್ಯವಸ್ಥೆಯನ್ನೂ ಗಟ್ಟಿಗೊಳಿಸಿಲ್ಲ. ರೈಲ್ವೆ ಟಿಕೆಟ್ ದರ ಹೆಚ್ಚುಸುವ ಕೇಂದ್ರ ಸರ್ಕಾರ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ಆಸಕ್ತಿ ತೋರುತ್ತಿಲ್ಲ. ಇದೆಲ್ಲದರ ಪರಿಣಾಮವೇ ಸಾಲು ಸಾಲು ಅಪಘಾತಗಳುʼ ಎಂದು ಕಾಂಗ್ರೆಸ್‌ ಟೀಕಿಸಿದೆ. 

ಇದನ್ನೂ ಓದಿ: ಎರಡು ದಿನಗಳ ದಕ್ಷಿಣ ಭಾರತ ಉತ್ಸವಕ್ಕೆ ಅರಮನೆ ಮೈದಾನ ಸಜ್ಜು : ಪ್ರವಾಸೋದ್ಯಮ ಇಲಾಖೆ ಮತ್ತು ಎಫ್.ಕೆ.ಸಿ.ಸಿಐ ನಿಂದ ಆಯೋಜನೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News