ರೇಡ್‌ಗೆ ಬಂದ ಲೋಕಾ ಅಧಿಕಾರಿಗಳಿಗೆ ಆಟವಾಡಿಸಿದ ಜಿಪಂ ಅಧಿಕಾರಿ

ತುಮಕೂರಿನ ಆದರ್ಶ ನಗರದಲ್ಲಿರುವ ಜಿಲ್ಲಾ ಪಂಚಾಯತ್ ಅಧಿಕಾರಿಯೊಬ್ಬ ರೇಡ್‌ ಮಾಡಲು ಬಂದಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಮನೆ ಬೀಗ ತೆಗೆಯದೆ ಆಟ ಆಡಿಸಿದ್ದಾನೆ. 

Written by - Yashaswini V | Last Updated : Aug 18, 2023, 08:06 AM IST
  • ಮನೆಯ ಬೀಗ ತೆಗೆಯದೇ ದಾಳಿಗೆ ಸಹಕರಿಸದ ಅಧಿಕಾರಿ
  • ಲೋಕಾಯುಕ್ತ ಅಧಿಕಾರಿಗಳನ್ನೆ ವೇಟ್‌ ಮಾಡಿಸಿ ನಾಪತ್ತೆ
  • ಕಾದು ಸುಸ್ತಾದ ಅಧಿಕಾರಿಗಳಿಂದ ಇಡೀ ಮನೆಗೆ ಬಿತ್ತು ಬೀಗ
ರೇಡ್‌ಗೆ ಬಂದ ಲೋಕಾ ಅಧಿಕಾರಿಗಳಿಗೆ ಆಟವಾಡಿಸಿದ ಜಿಪಂ ಅಧಿಕಾರಿ title=

Lokayukta Raid: ನಿನ್ನೆ (ಗುರುವಾರ, 17 ಆಗಸ್ಟ್ 2023) ರಾಜ್ಯದ 48 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಮೆಗಾ ರೇಡ್ ನಡೆದಿದೆ. ರಾಜ್ಯಾದ್ಯಂತ ಸುಮಾರು 200 ಅಧಿಕಾರಿಗಳಿಂದ ನಡೆಸಿದ ದಾಳಿಯಲ್ಲಿ ಕಳ್ಳ ಕುಬೇರರ ಮನೆಯಲ್ಲಿ ಬಚ್ಚಿಟ್ಟಿದ್ದ ಕೋಟಿ, ಕೋಟಿ ಆಸ್ತಿಯನ್ನು ಸೀಜ್ ಮಾಡಲಾಗಿದೆ. ಆದರೆ, ಇಲ್ಲೊಬ್ಬ ಜಿಲ್ಲಾ ಪಂಚಾಯತ್ ಅಧಿಕಾರಿ ರೇಡ್‌ಗೆ ಬಂದ ಲೋಕಾ ಅಧಿಕಾರಿಗಳಿಗೆ ಆಟವಾಡಿಸಿದ ಘಟನೆಯೂ ನಡೆದಿದೆ. 

ಹೌದು, ತುಮಕೂರಿನ ಆದರ್ಶ ನಗರದಲ್ಲಿರುವ ಜಿಲ್ಲಾ ಪಂಚಾಯತ್ ಅಧಿಕಾರಿಯೊಬ್ಬ ರೇಡ್‌ ಮಾಡಲು ಬಂದಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಮನೆ ಬೀಗ ತೆಗೆಯದೆ ಆಟ ಆಡಿಸಿದ್ದಾನೆ.  ತುಮಕೂರು ಜಿಲ್ಲಾ ಪಂಚಾಯ್ತಿಯ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೂವನಹಳ್ಳಿ ನಾಗರಾಜ್ ಎಂಬಾತನೆ ಲೋಕಾಯುಕ್ತ ಅಧಿಕಾರಿಗಳಿಗೆ ಸರಿಯಾಗಿ ಸಹಕರಿಸದ ಅಧಿಕಾರಿ. 

ಇದನ್ನೂ ಓದಿ- ಪ್ರಚಾರದಲ್ಲಿರಲು ಆರೋಪ : ಎಚ್ಡಿಕೆಗೆ ಸಂಸದ ಡಿ.ಕೆ.ಸುರೇಶ್ ಟಾಂಗ್

ಹೌದು, ನಿನ್ನೆ ರಾಜ್ಯಾದ್ಯಂತ ಒಟ್ಟು 48 ಕಡೆ ರೇಡ್ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ತುಮಕೂರಿನ ಆದರ್ಶ ನಗರದಲ್ಲಿರುವ ತುಮಕೂರು ಜಿಲ್ಲಾ ಪಂಚಾಯ್ತಿಯ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿ ಬೂವನಹಳ್ಳಿ ನಾಗರಾಜ್ ಎಂಬುವರ ಮನೆ ಮೇಲೂ ದಾಳಿ ನಡೆಸಲು ಮುಂದಾಗಿತ್ತು. ಬೆಳ್ಳಂಬೆಳಗ್ಗೆ ಲೋಕಾಯುಕ್ತದ 10 ಅಧಿಕಾರಿಗಳ ತಂಡ ಈತನ ಮನೆ ಕದ ತಟ್ಟಿತ್ತು. ಬೆಳಗ್ಗೆ 6 ಗಂಟೆಯಿಂದ ಮನೆಯ ಗೇಟ್ ಬಳಿ ಕಾದು ಕಾದು ಅಧಿಕಾರಿಗಳು ಹೈರಾಣಾದರು. ಆದರೆ, ಲೋಕಾಯುಕ್ತ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೇ ಬೂವನಹಳ್ಳಿ ನಾಗರಾಜು ನಾಪತ್ತೆಯಾಗಿದ್ದಾರೆ. 

ಇದನ್ನೂ ಓದಿ- ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ

ಇನ್ನೂ ತುಮಕೂರಿನ ಆದರ್ಶ ನಗರದಲ್ಲಿರುವ ಬೃಹತ್ ಬಂಗಲೆ ಬಳಿ ಬೆಳಗ್ಗೆ 6 ಗಂಟೆಯಿಂದ ಮನೆಯ ಗೇಟ್ ಬಳಿ ಕಾದು ಕಾದು ಬೇಸತ್ತ ಬೆಂಗಳೂರು ಲೋಕಾಯುಕ್ತ ಎಸ್.ಪಿ ಅಶೋಕ್ ನೇತೃತ್ವದ ತಂಡ, ದಾಳಿಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಯ ಐಷಾರಾಮಿ ಬಂಗಲೆಗೆ ಬೀಗ ಜಡಿದು ಸೀಜ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News