New Mining policy : 'ಈ ತಿಂಗಳ ಅಂತ್ಯದ ವೇಳೆಗೆ ಜಾರಿಯಾಗಲಿದೆ ಹೊಸ ಗಣಿಗಾರಿಕೆ ನೀತಿ'

ಏಪ್ರಿಲ್ 30 ರಂದು ಬೆಂಗಳೂರಿನಲ್ಲಿ 'ಗಣಿ ಅದಾಲತ್' ಸಂದರ್ಭದಲ್ಲಿ 'ಕರ್ನಾಟಕ ಹಟ್ಟಿ ಗೋಲ್ಡ್ ಮೈನ್ಸ್  ಲಿಮಿಟೆಡ್' ಎಂದು ಮರುನಾಮಕರಣ

Last Updated : Apr 9, 2021, 06:28 PM IST
  • ಕರಾವಳಿ ಜಿಲ್ಲೆಗಳ ಅವಶ್ಯಕತೆಗಳನ್ನು ಕೇಂದ್ರೀಕರಿಸುವ ಹೊಸ ರಾಜ್ಯ ಗಣಿಗಾರಿಕೆ ನೀತಿಯನ್ನು ಈ ತಿಂಗಳ ಅಂತ್ಯದೊಳಗೆ ಜಾರಿ
  • ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಣಿ
  • ಏಪ್ರಿಲ್ 30 ರಂದು ಬೆಂಗಳೂರಿನಲ್ಲಿ 'ಗಣಿ ಅದಾಲತ್' ಸಂದರ್ಭದಲ್ಲಿ 'ಕರ್ನಾಟಕ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್' ಎಂದು ಮರುನಾಮಕರಣ
New Mining policy : 'ಈ ತಿಂಗಳ ಅಂತ್ಯದ ವೇಳೆಗೆ ಜಾರಿಯಾಗಲಿದೆ ಹೊಸ ಗಣಿಗಾರಿಕೆ ನೀತಿ' title=

ಮಂಗಳೂರು: ಕರಾವಳಿ ಜಿಲ್ಲೆಗಳ ಅವಶ್ಯಕತೆಗಳನ್ನು ಕೇಂದ್ರೀಕರಿಸುವ ಹೊಸ ರಾಜ್ಯ ಗಣಿಗಾರಿಕೆ ನೀತಿಯನ್ನು ಈ ತಿಂಗಳ ಅಂತ್ಯದೊಳಗೆ ಜಾರಿ ಮಾಡಲಾಗುವುದು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಣಿ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವ ಮುರುಗೇಶ್ ನಿರಣಿ(Murugesh Nirani),  ಹೊಸ ರಾಜ್ಯ ಗಣಿಗಾರಿಕೆ ನೀತಿಯ ಕರಡನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು, ತಜ್ಞರು ಮತ್ತು ಪತ್ರಕರ್ತರಿಗೆ ಕಳುಹಿಸಿಲಾಗುತ್ತದೆ. ಅವರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ತಿಳಿಸಬಹುದು ಎಂದು ಹೇಳಿದ್ದಾರೆ. 

ಇದನ್ನೂ ಓದಿ :Govind Karjol: ರಾಜ್ಯದ ಉಪಮುಖ್ಯಮಂತ್ರಿಗೆ 'ಕೊರೋನಾ ಪಾಸಿಟಿವ್'..।

ಐದು ಎಕರೆಗಿಂತ ಕಡಿಮೆ ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಗಣಿ ಸುರಕ್ಷತೆ ನಿರ್ದೇಶನಾಲಯದ ಜನರಲ್ ಅವರ ಸ್ಫೋಟಕ ಪರವಾನಗಿಯಿಂದ ವಿನಾಯಿತಿ ನೀಡುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ(Udupi)ಯಲ್ಲಿನ ಕಲ್ಲುಗಣಿ ಮಾಲೀಕರ ಬೇಡಿಕೆಯನ್ನು ಗಣಿ ಇಲಾಖೆ ಸ್ವೀಕರಿಸಿದೆ ಎಂದು ಸಚಿವರು ಹೇಳಿದರು.

ಐದು ಎಕರೆಗಿಂತ ಹೆಚ್ಚು ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು 90 ದಿನಗಳಲ್ಲಿ ಪರವಾನಗಿ ಪಡೆಯಲು ವಕಾಶ ನೀಡಲಾಗಿದೆ ಎಂದು ತಳಿಸಿದ್ದಾರೆ.

ಇದನ್ನೂ ಓದಿ :BS Yediyurappa: 'ಸಾರಿಗೆ ಸಿಬ್ಬಂದಿಗಳೇ ಹಠಮಾರಿಗಳಾಗಬೇಡಿ, ಮುಷ್ಕರ ಕೈಬಿಡಿ'

ಹಟ್ಟಿ ಚಿನ್ನದ ಗಣಿಯಲ್ಲಿ ವಾರ್ಷಿಕವಾಗಿ ಸುಮಾರು 1.7 ಟನ್ ಚಿನ್ನ ಪಡೆಯಲಾಗುತ್ತಿದ್ದು, ಏಪ್ರಿಲ್ 30 ರಂದು ಬೆಂಗಳೂರಿನಲ್ಲಿ 'ಗಣಿ ಅದಾಲತ್' ಸಂದರ್ಭದಲ್ಲಿ 'ಕರ್ನಾಟಕ ಹಟ್ಟಿ ಗೋಲ್ಡ್ ಮೈನ್ಸ್  ಲಿಮಿಟೆಡ್'(Karnataka Hatti gold mines Limited) ಎಂದು ಮರುನಾಮಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Bengaluru in Section 144: ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ! ಜಿಮ್, ಸ್ವಿಮಿಂಗ್ ಫೂಲ್ ಏಪ್ರಿಲ್ 20 ರವರೆಗೆ ಬಂದ್!

ಗಣಿಗಾರಿಕೆ ಮಾಡಿದ ಚಿನ್ನ(Gold)ವನ್ನು ಒಂದು ಕಡೆ ರಾಜ್ಯ ಲಾಂಛನದೊಂದಿಗೆ ನಾಣ್ಯಗಳ ರೂಪದಲ್ಲಿ ಮತ್ತು ಇನ್ನೊಂದೆಡೆ ರಾಜ್ಯದ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಚಿತ್ರಿಸಿ ಮಾರಾಟ ಮಾಡಲು ಇಲಾಖೆ ಯೋಜಿಸುತ್ತಿದೆ ಎಂದು ಹೇಳಿದ್ದಾರೆ.

ಹೊಸ ಗಣಿಗಾರಿಕೆ ನೀತಿ(New mining policy)ಯಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವ ಜನರಿಗೆ  ಸಾರಿಗೆ ವೆಚ್ಚವನ್ನು ಹೊರತುಪಡಿಸಿ ಪ್ರತಿ ಟನ್‌ಗೆ 100 ರೂ. ಕಡಿತದಲ್ಲಿ ಮರಳು ನೀಡಲು ಪ್ರಸ್ತಾಪಿಸಿದರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ :Bus strike: ಸಾರಿಗೆ ನೌಕರರ ಮುಷ್ಕರ; ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದ ಸಿಎಂ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News