ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟ ಬ್ಲೂ ಬಾಯ್ : ರಾತ್ರಿಯೆಲ್ಲ ಚಿಂತೆಯಲ್ಲೇ ಕಳೆದ ಪ್ರಜ್ವಲ್ 

Prajwal Revanna case updates : ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ  ಬಂಧಿನಾಗಿರುವ ಪ್ರಜ್ವಲ್‌ ರೇವಣ್ಣರ ಎಸ್‌‍ಐಟಿ ಕಸ್ಟಡಿ ನಾಳೆಗೆ ಮುಗಿಯಲಿದೆ. ನಾಳೆ ಎಸ್ಐಟಿ ಅಧಿಕಾರಿಗಳು  ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮತ್ತೆ ಕಸ್ಟಡಿ ಕೇಳುವ ಸಾಧ್ಯತೆಯಿದೆ.. ಹಾಗಾದ್ರೇ ಒಂದು ವಾರ ಪ್ರಜ್ವಲ್ ರೇವಣ್ಣ ವಿಚಾರಣೆ ಹೇಗೆ ನಡಿತು.? ಲೋಕಸಭಾ ಚುನಾವಣೆಯಲ್ಲಿ ಸೋತ ಪ್ರಜ್ವಲ್ ಸ್ಥಿತಿ ಹೇಗಿದೆ ಎಂಬುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

Written by - VISHWANATH HARIHARA | Last Updated : Jun 5, 2024, 06:24 PM IST
    • ನಾಳೆ ಪ್ರಜ್ವಲ್ ರೇವಣ್ಣನ ಎಸ್ಐಟಿ ಕಸ್ಟಡಿ ಅಂತ್ಯ..!
    • ಮತ್ತಷ್ಟು ದಿನ ಕಸ್ಟಡಿಗೆ ಪಡೆಯಲು ಎಸ್ಐಟಿ ಚಿಂತ‌ನೆ
    • ಒಂದು ವಾರ ಪ್ರಜ್ವಲ್ ರೇವಣ್ಣ ವಿಚಾರಣೆ ಹೇಗೆ ನಡಿತು.?
ಲೋಕಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟ ಬ್ಲೂ ಬಾಯ್ : ರಾತ್ರಿಯೆಲ್ಲ ಚಿಂತೆಯಲ್ಲೇ ಕಳೆದ ಪ್ರಜ್ವಲ್  title=

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಾಗಿದೆ. ಚು‌ನಾವಣೆಯಲ್ಲಿ ನಾನು ಸೋತೆ ಎಂದು ಗೊತ್ತಾಗಿನಿಂದ ಪ್ರಜ್ವಲ್ ಮೌನಕ್ಕೆ ಜಾರಿದ್ದರಂತೆ. ಮೊದ ಮೊದಲಿಗೆ ಗೆಲ್ಲುವ ವಿಶ್ವಾಸ ಹೊಂದಿದ್ದ ಪ್ರಜ್ವಲ್ ಕೊನೆಯಲ್ಲಿ ನಿರಾಸೆಯಾಗಿದೆ. ಶ್ರೇಯಸ್ ಪಟೇಲ್ ಗೆಲ್ತಿದ್ದಂತೆ ಪ್ರಜ್ವಲ್ ಮೌನಕ್ಕೆ ಜಾರಿ ಚಿಂತಾಕ್ರಾಂತನಾಗಿದ್ನಂತೆ. ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡದೆ ಮುಂದಿನ ದಿನಗಳ ಬಗ್ಗೆ ಯೋಚಿಸುತ್ತ ಪ್ರಜ್ವಲ್ ಕಾಲ ಕಳೆದಿರುವ ಮಾಹಿತಿ ಲಭ್ಯವಾಗಿದೆ.

ಇನ್ನೂ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ನನ್ನು ಎಸ್‌‍ಐಟಿ ವಶಕ್ಕೆ ಪಡೆದು ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ೬ ದಿನಗಳ ಕಾಲ ಕಸ್ಟಡಿಗೆ ಪಡಿದುಕೊಂಡಿದ್ರೂ.. ಕಳೆದ ಒಂದು ವಾರದಿಂದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳು ವಿಚಾರಣೆ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಮೋದಿಯವರಿಗೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ಮುತ್ಸದ್ದಿತನ ಇದೆ: ಬಸವರಾಜ ಬೊಮ್ಮಾಯಿ

ವಿಚಾರಣೆ ವೇಳೆಯಲ್ಲಿ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ.. ಈ ವಿಡಿಯೋ ಯಾವುದು ಎಂದು ನನಗೆ ಗೊತ್ತಿಲ್ಲ. ಈ ವಿಡಿಯೋದಲ್ಲಿ ಇರೋರು ಯಾರು ಅಂತಾನೂ ಗೋತ್ತಿಲ್ಲ. ಇದು ರಾಜಕೀಯವಾಗಿ ನನ್ನ ವಿರುದ್ಧ ಮಾಡಿರುವ ಷಡ್ಯಂತರ ಅಂತಾ ಹೇಳಿದ್ದಾರೆ. ಜೊತೆಗೆ ವಿಡಿಯೋ ರಿಕಾರ್ಡ್ ಮಾಡಿರೋ ಮೊಬೈಲ್ ಬಗ್ಗೆ ಪ್ರಶ್ನಿಸಿದಕ್ಕೆ ಆ ಮೊಬೈಲ್ ಕಳೆದು ಹೋಗಿದೆ.. ಈ ಹಿಂದೆ ಹೊಳೆನರಸಿಪುರು ಪೊಲೀಸ್ ಠಾಣೆಯಲ್ಲಿ ನನ್ನ ಪಿಎ ದೂರು ನೀಡಿದ್ದಾರೆ.‌ ಪೊಲೀಸರು ಹುಡುಕಾಟ ನಡೆಸಿದ್ರೂ ಆ ಮೊಬೈಲ್ ಪತ್ತೆಯಾಗಿಲ್ಲ ಎಂದು ಮೊಂಡತನದ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಲು ಸಮರ್ಥರೇ ಅಥವಾ ಇಲ್ಲವೇ ಎಂಬುದನ್ನು ತನಿಖೆಯಲ್ಲಿ ಪತ್ತೆ ಹಚ್ಚಲು ಪುರುಷತ್ವ ಪರೀಕ್ಷೆಗೆ ಕೋರ್ಟ್​ ಒಪ್ಪಿಗೆ ನೀಡಿದ. ಬಳಿಕ ಇಂದು ಎಸ್​ಐಟಿ ಅಧಿಕಾರಿಗಳು ಇಂದು ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪುರುಷತ್ವ ಪರೀಕ್ಷೆ ನಡೆಸಿದ್ದಾರೆ. 

ಇನ್ನು ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ ಈಗಾಗಲೇ ವಿಚಾರಣೆ ನಡಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಟ್ಟಿಲ್ಲ.. ಅಲ್ಲದೇ ಆರೋಪಿ ಪ್ರಜ್ವಲ್ ಹೇಳಿಕೆ ಆಧಾರದ ಮೇಲೆ ಸ್ಥಳ ಮಹಜರು ಮಾಡಬೇಕಾಗುತ್ತದೆ. ಸ್ಥಳ ಮಹಜರು ಮಾಡುವುದು ಬಹುತೇಕ ಡೌಟ್ ಅನಿಸುತ್ತದೆ..  ಇನ್ನು ಎಸ್ಐಟಿ ಅಧಿಕಾರಿಗಳು ಒಂದು ವಾರದ ತನಿಖಾ ರಿಪೋರ್ಟ್ ಅನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ನೀಡಿ ಮತ್ತೆ ಪ್ರಜ್ವಲ್ ರೇವಣ್ಣರನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ತನಿಖೆಯಲ್ಲಿ ಸರಿಯಾಗಿ ಉತ್ತರ ನೀಡಿದೇ ಹೋದ್ರೆ ಸಂತ್ರಸ್ತೆ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಎಸ್ಐಟಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News