ನೀವೇ ಈ ರಾಜ್ಯದ ದೊಡ್ಡ ಸಮಸ್ಯೆ: ಲಾಠಿ ಚಾರ್ಜ್ ಮಾಡಿಸಬೇಕಾ ಎಂದ ಸಿಎಂಗೆ ಶ್ರೀರಾಮುಲು ತಿರುಗೇಟು

ಜನ ನಿಮಗೆ ಮತ ಹಾಕಿಲ್ಲ, ಮೋದಿಗೆ ಹಾಕಿದ್ದಾರೆ ಅನ್ನುವ ಸತ್ಯ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆಗಳು ಎಂದು ಶಾಸಕ ಬಿ.ಶ್ರೀರಾಮುಲು ಅವರು ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

Last Updated : Jun 26, 2019, 04:47 PM IST
ನೀವೇ ಈ ರಾಜ್ಯದ ದೊಡ್ಡ ಸಮಸ್ಯೆ: ಲಾಠಿ ಚಾರ್ಜ್ ಮಾಡಿಸಬೇಕಾ ಎಂದ ಸಿಎಂಗೆ ಶ್ರೀರಾಮುಲು ತಿರುಗೇಟು title=

ಬೆಂಗಳೂರು: ರಾಯಚೂರಿನಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ವೈಟಿಪಿಎಸ್ ಸಿಬ್ಬಂದಿಗಳ ವಿರುದ್ಧ ಕಿಡಿ ಕಾರಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವರ್ತನೆಯನ್ನು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಜನ ನಿಮಗೆ ಮತ ಹಾಕಿಲ್ಲ, ಮೋದಿಗೆ ಹಾಕಿದ್ದಾರೆ ಅನ್ನುವ ಸತ್ಯ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆಗಳು.  ಒಲ್ಲದ ಮುತ್ತೈದೆಯಂತೆ ಖುರ್ಚಿ ಮೇಲೆ ಕೂತು ಸಮಸ್ಯೆಗೆ ಪರಿಹಾರ ಕೇಳಿದರೆ ಲಾಠಿ ಚಾರ್ಜ್ ಮಾಡಿಸಬೇಕಾ ಅಂತ ಕೇಳುವ ನೀವೇ ಈ ರಾಜ್ಯದ ದೊಡ್ಡ ಸಮಸ್ಯೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ರಾಜ್ಯದ ಜನತೆಯ ಆಶೀರ್ವಾದ ಬಿಜೆಪಿಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಬುಧವಾರ ಗ್ರಾಮವಾಸ್ತವ್ಯಕ್ಕಾಗಿ ಸಿಎಂ ತೆರಳುತ್ತಿದ್ದ ಸಾರಿಗೆ ಬಸ್ಸನ್ನು ಯರಮರಸ್ ಬಳಿ ಮುತ್ತಿಗೆ ಹಾಕಿದ ವೈಟಿಪಿಎಸ್‌ ಕಾರ್ಮಿಕರು, ಬಾಕಿ ವೇತನ ಪಾವತಿ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೋಪಗೊಂಡ ಸಿಎಂ, ಮೋದಿಗೆ ವೋಟ್ ಹಾಕ್ತೀರ. ಕೆಲ್ಸಕ್ಕೆ ನಾನ್ ಬೇಕಾ? ಇದು ಕೇಳುವ ರೀತಿಯೇ? ನಿಮ್ಮ ಮೇಲೆ ಲಾಠಿ ಚಾರ್ಜ್ ಮಾಡಬೇಕಾ? ಎಂದು ಕಿಡಿ ಕಾರಿದ್ದರು. ಸಿಎಂ ಕುಮಾರಸ್ವಾಮಿ ಅವರ ಈ ಹೇಳಿಕೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

Trending News