ಆನ್ ಲೈನ್ ಮೂಲಕ ವಸ್ತು ಖರೀದಿಸಿದ ವಿದ್ಯಾರ್ಥಿಗೆ ಮೋಸ: ರಿಲೈನ್ಸ್ ರಿಟೇಲ್ ಕಂಪನಿಗೆ ದಂಡ

 ಹಾವೇರಿ ಜಿಲ್ಲಾ ರಾಣೆಬೆನ್ನೂರಿನ ಕೌಶಿಕ್ ಕರೆಗೌಡರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಕಾಲೇಜಿನ ಸಮವಸ್ತ್ರದ ಸಲುವಾಗಿ ಎದುರುದಾರ ಮುಂಬೈನ ರಿಲೈನ್ಸ್‍ರಿಟೇಲ್ ಇವರ ಬಳಿ ಆನ್ ಲೈನ್ ಮೂಲಕ ಕಪ್ಪು ಬಣ್ಣದ ಪ್ಯಾಂಟನ್ನು ರೂ.849.50ಪೈಸೆ ಗಳಿಗೆ ಖರೀದಿಸಿದ್ದರು.

Written by - Manjunath N | Last Updated : Jun 6, 2024, 11:35 PM IST
  • ಡಿಲೆವರಿ ಪ್ಯಾಕನ್ನು ತೆರೆದು ನೋಡಿದಾಗ ಆ ಪ್ಯಾಂಟ ಹಳೆಯ ಮತ್ತು ಉಪಯೋಗಿಸಿರುವುದು ಕಂಡು ಬಂದು, ಎದುರುದಾರರ ಕಂಪನಿಯ ನಿಯಮದಂತೆ 14 ದಿನದೊಳಗೆ ಪ್ಯಾಂಟನ್ನು ಬದಲಾಯಿಸಿಕೊಡಲು ಕೋರಿದ್ದರು.
  • ಆದರೆ ಇಂದಿನವರೆಗೂ ಪ್ಯಾಂಟನ್ನು ಬದಲಾಯಿಸಿ ಕೊಡದೇ ಅಥವಾ ಅದರ ಮೌಲ್ಯವನ್ನು ಹಿಂದಿರುಗಿಸದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ.
ಆನ್ ಲೈನ್ ಮೂಲಕ ವಸ್ತು ಖರೀದಿಸಿದ ವಿದ್ಯಾರ್ಥಿಗೆ ಮೋಸ: ರಿಲೈನ್ಸ್ ರಿಟೇಲ್ ಕಂಪನಿಗೆ ದಂಡ title=

ಧಾರವಾಡ: ಹಾವೇರಿ ಜಿಲ್ಲಾ ರಾಣೆಬೆನ್ನೂರಿನ ಕೌಶಿಕ್ ಕರೆಗೌಡರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಕಾಲೇಜಿನ ಸಮವಸ್ತ್ರದ ಸಲುವಾಗಿ ಎದುರುದಾರ ಮುಂಬೈನ ರಿಲೈನ್ಸ್‍ರಿಟೇಲ್ ಇವರ ಬಳಿ ಆನ್ ಲೈನ್ ಮೂಲಕ ಕಪ್ಪು ಬಣ್ಣದ ಪ್ಯಾಂಟನ್ನು ರೂ.849.50ಪೈಸೆ ಗಳಿಗೆ ಖರೀದಿಸಿದ್ದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ ಪ್ರಕರಣ: ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

ಡಿಲೆವರಿ ಪ್ಯಾಕನ್ನು ತೆರೆದು ನೋಡಿದಾಗ ಆ ಪ್ಯಾಂಟ ಹಳೆಯ ಮತ್ತು ಉಪಯೋಗಿಸಿರುವುದು ಕಂಡು ಬಂದು, ಎದುರುದಾರರ ಕಂಪನಿಯ ನಿಯಮದಂತೆ 14 ದಿನದೊಳಗೆ ಪ್ಯಾಂಟನ್ನು ಬದಲಾಯಿಸಿಕೊಡಲು ಕೋರಿದ್ದರು.ಆದರೆ ಇಂದಿನವರೆಗೂ ಪ್ಯಾಂಟನ್ನು ಬದಲಾಯಿಸಿ ಕೊಡದೇ ಅಥವಾ ಅದರ ಮೌಲ್ಯವನ್ನು ಹಿಂದಿರುಗಿಸದೇ ಸೇವಾ ನ್ಯೂನ್ಯತೆ ಎಸಗಿರುತ್ತಾರೆ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:15/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಲೋಕ ಸಮರ ಫಲಿತಾಂಶ ಎಫೆಕ್ಟ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಲಿತ-ಲಿಂಗಾಯತ ನಾಯಕರ ಒತ್ತಡ?!

ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ತಮ್ಮ ಪ್ರಕರಣ ಸಾಬೀತು ಪಡಿಸಲು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ ಎದುರುದಾರರು ಹಣ ಪಡೆದು ಉಪಯೋಗಿಸಿದ ಹಳೆಯ ಪ್ಯಾಂಟನ್ನು ದೂರುದಾರರಾದ ಗ್ರಾಹಕನಿಗೆ ಮಾರಾಟ ಮಾಡಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯ ಪಟ್ಟು ತೀರ್ಪು ನೀಡಿ ದೂರುದಾರರು ಕೊಟ್ಟಂತಹ ಪ್ಯಾಂಟ ಮೌಲ್ಯದ ಜೊತೆಗೆ ರೂ. 10,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.5,000/- ಗಳನ್ನು ದೂರುದಾರರಿಗೆ ಕೊಡುವಂತೆ ರಿಲೈನ್ಸ್‍ರಿಟೈಲ ಕಂಪನಿಗೆ ಆಯೋಗ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News