Sudha Murthy : ಪಂಜಾಬಿ ಆದ್ರೂ ರಾಯರ ದಿನ ʼಗುರುವಾರʼ ನನ್ನ ಅಳಿಯ ಉಪವಾಸ ಮಾಡ್ತಾನೆ..!

Sudha Murthy : ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾಮೂರ್ತಿ ಅವರ ಮಾತುಗಳು ಯುವ ಪೀಳಿಗೆಗೆ ಸ್ಪೂರ್ತಿ ಅಂದ್ರೆ ತಪ್ಪಾಗಲ್ಲ. ಸಂಪ್ರದಾಯದಿಂದ ಹಿಡಿದು ಶೈಕ್ಷಣಿಕವಾಗಿ ಸಂದೇಶ ನೀಡುವ ಅವರ ನುಡಿಗಳನ್ನು ಕೇಳುವುದೇ ಒಂದು ಸೊಗಸು. ಇದೀಗ ದೇವಸ್ಥಾನವೊಂದರಲ್ಲಿ ಸುಧಾ ಅಮ್ಮ ತಮ್ಮ ಅಳಿಯ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಮಗಳು ಅಕ್ಷತಾ ಮೂರ್ತಿಯವರ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Apr 28, 2023, 04:26 PM IST
  • ಸುಧಾಮೂರ್ತಿ ಅವರ ಮಾತುಗಳು ಯುವ ಪೀಳಿಗೆಗೆ ಸ್ಪೂರ್ತಿ ಅಂದ್ರೆ ತಪ್ಪಾಗಲ್ಲ.
  • ಸಂಪ್ರದಾಯದಿಂದ ಹಿಡಿದು ಶೈಕ್ಷಣಿಕವಾಗಿ ಸಂದೇಶ ನೀಡುವ ಅವರ ನುಡಿಗಳನ್ನು ಕೇಳುವುದೇ ಒಂದು ಸೊಗಸು.
  • ಇದೀಗ ಸುಧಾ ಅಮ್ಮ ತಮ್ಮ ಅಳಿಯ ಹಾಗೂ ಮಗಳು ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ.
Sudha Murthy : ಪಂಜಾಬಿ ಆದ್ರೂ ರಾಯರ ದಿನ ʼಗುರುವಾರʼ ನನ್ನ ಅಳಿಯ ಉಪವಾಸ ಮಾಡ್ತಾನೆ..! title=

Sudha Murthy on Rishi sunak :  ತಮ್ಮ ಸರಳತೆಗೆ ಹೆಸರಾಗಿರುವ ಸುಧಾ ಮೂರ್ತಿ ಅಮ್ಮ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪರರ ಕಷ್ಟಕ್ಕೆ ಮೀಡಿಯುವ ತಾಯಿ ಹೃದಯಿ ಸುಧಾ ಅಮ್ಮನವರ ಸ್ಪೂರ್ತಿ ನೀಡುವ ಮಾತುಗಳ ವಿಡಿಯೋಗಳು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ನೋಡುಗರ ಮನ ಗೆಲ್ಲುತ್ತಿದೆ.

ಹೌದು.. ಮಾನವೀಯ ಕಾರ್ಯಗಳಿಂದಾಗಿ ದೇಶಾದ್ಯಂತ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಸುಧಾಮೂರ್ತಿ ಅವರ ಮಾತುಗಳು ಯುವ ಪೀಳಿಗೆಗೆ ಸ್ಪೂರ್ತಿ ಅಂದ್ರೆ ತಪ್ಪಾಗಲ್ಲ. ಸಂಪ್ರದಾಯದಿಂದ ಹಿಡಿದು ಶೈಕ್ಷಣಿಕವಾಗಿ ಸಂದೇಶ ನೀಡುವ ಅವರ ನುಡಿಗಳನ್ನು ಕೇಳುವುದೇ ಒಂದು ಸೊಗಸು. ಇದೀಗ ದೇವಸ್ಥಾನವೊಂದರಲ್ಲಿ ಸುಧಾ ಅಮ್ಮ ತಮ್ಮ ಅಳಿಯ ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಮಗಳು ಅಕ್ಷತಾ ಮೂರ್ತಿಯವರ ಬಗ್ಗೆ ಮಾತನಾಡಿರುವ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದೆ.  

ಇದನ್ನೂ ಓದಿ: "ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಶಕ್ತಿಯೇ ನನ್ನ ಗೆಲುವಿಗೆ ಕಾರಣ"

ಸುಧಾ ಅಮ್ಮ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ಈಗಾಗಿ ಅವರು ಮನೆಗೆಯಲ್ಲಿ ಕೈಗೊಳ್ಳುವ ಯಾವುದೇ ಶುಭಕಾರ್ಯವನ್ನು ಗುರುವಾರದಂದೇ ಮಾಡುತ್ತಾರಂತೆ. ವಿಶೇಷ ಅಂದ್ರೆ, ನಾರಾಯಣಮೂರ್ತಿಯವರು ಇನ್‌ಫೋಸಿಸ್ ಅನ್ನು ಪ್ರಾರಂಭ ಮಾಡಿದ್ದೇ ರಾಯರ ದಿನವಾದ ಗುರುವಾರದಂದು ಅಂತೆ. ಮಗಳ ಮದುವೆಯೂ ಸಹ ಗುರುವಾರದಂದೇ ನಡೆದಿತ್ತು ಎಂದು ವೈರಲ್‌ ಆಗಿರುವ ವಿಡಿಯೋದಲ್ಲಿ ಸುಧಾಮೂರ್ತಿಯವರು ಹೇಳುತ್ತಿರುವುದನ್ನು ಕಾಣಬಹುದು.

ಅಲ್ಲದೆ, ಅವರ ಅಳಿಯ ರಿಷಿ ಸುನಕ್ ಅವರು, ಪಂಜಾಬಿ. ಆತನೂ ಬಹಳ ಧಾರ್ಮಿಕ ವ್ಯಕ್ತಿ. ಒಂದು ದಿನ ಬಂದು ನಮ್ಮನ್ನ ಕೇಳಿದ, ನೀವು ಎನೇ ಶುಭ ಕಾರ್ಯ ಮಾಡಿದ್ರೂ ಸಹ ಗುರುವಾರದಂದೇ ಮಾಡ್ತೀರಲ್ಲ ಏಕೆ ಅಂತ.. ಆಗ ನಾವು ಗುರು ರಾಘವೇಂದ್ರ ಸ್ವಾಮಿಗಳ ಭಕ್ತರು ಗುರುವಾರವನ್ನು ಶುಭ ದಿನ ಅಂತ ನಂಬುತ್ತೇವೆ ಎಂದು ಹೇಳಿದೆ. ಆಗ ಆತ ಗುರುವಾರ ಒಳ್ಳೆಯ ದಿನ ಅಂತ ನಂಬಿ ಇಂದಿಗೂ ಪ್ರತಿ ಗುರುವಾರದಂದು ಉಪವಾಸ ಮಾಡ್ತಾನೆ ಅಂತ ಸುಧಾ ಅಮ್ಮ ಹೇಳಿದರು.

ಇದನ್ನೂ ಓದಿ: ಸಿಎಂ ತವರು ಜಿಲ್ಲೆ ಹಾವೇರಿಗೆ ಇಂದು ಅಮಿತ್‌ ಶಾ ಎಂಟ್ರಿ

ಗಂಡ ಹೆಂಡತಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತ, ನಾ ನನ್ನ ಗಂಡನನ್ನು ಬ್ಯುಸಿನೆಸ್ ಮಾಡಿದೆ. ನನ್ನ ಮಗಳು ತನ್ನ ಗಂಡನನ್ನು ಪ್ರಧಾನಿ ಮಾಡಿದರು ಅಂತ ಹೆಮ್ಮೆಯಿಂದ ಹೇಳಿಕೊಂಡರು. ಸದ್ಯ ಸುಧಾ ಮೂರ್ತಿಯವರ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದೇವರ ಮೇಲೆ ಭಕ್ತಿ, ಪತ್ನಿ ಪತಿಯ ಪ್ರಾಮುಖ್ಯತೆ ಸುಧಾಮೂರ್ತಿಯವರ ಮಾತಿನಿಂದ ತಿಳಿದುಕೊಳ್ಳಬಹುದು. ಅಲ್ಲದೆ, ಒಂದು ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರ್ತಾಳೆ ಎನ್ನುವುದಕ್ಕೆ ಸುಧಾ ಅಮ್ಮನ ಮಾತು ಸಾಕ್ಷಿಯಂತಿವೆ.

ಅಲ್ಲದೆ, ಸುಧಾ ಮೂರ್ತಿಯವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಅವರು ಸದಾ ನರಸಿಂಹನ ಸ್ಮರಣೆಯನ್ನು ಮಾಡುತ್ತಿರುತ್ತಾರಂತೆ. ಹೀಗೆ ದೈವ ಭಕ್ತಿ ಮತ್ತು ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ಫೋಸಿಸ್ ಟೆಕ್ ಕಂಪನಿಯ ಸ್ಥಾಪಕರಾಗಿರುವ ನಾರಾಯಣ ಮೂರ್ತಿ ಯವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರಿಗೆ ಅಕ್ಷತಾ ಮೂರ್ತಿ ಮತ್ತು ರೋಹನ್‌ ಮೂರ್ತಿ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಪ್ರಚಾರ

ಅಕ್ಷತಾ ಮೂರ್ತಿಯವರ ಪತಿ ರಿಷಿ ಸುನಕ್ ಅವರು ಪ್ರಸ್ತುತ ಇಂಗ್ಲೆಂಡ್‌ ದೇಶದ ಪ್ರಧಾನಿಯಾಗಿದ್ದಾರೆ. ಈ ಜೋಡಿ 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಅನುಷ್ಕಾ ಸುನಕ್ ಮತ್ತು ಕೃಷ್ಣ ಸುನಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅಕ್ಷತಾ ಮೂರ್ತಿ ಸುಮಾರು 730 ಮಿಲಿಯನ್ ಪೌಂಡ್ ವೈಯಕ್ತಿಕ ಸಂಪತ್ತಿಗೆ ಒಡತಿಯಾಗಿದ್ದಾರೆ. ಕೋಟಿಗಟ್ಟಲೆ ಆಸ್ತಿ ಹೆಸರು ಎಲ್ಲವೂ ಇದ್ದರೂ ಸಹ ಅಪ್ಪ ಅಮ್ಮನಂತೆ ಸರಳ ಜೀವನ ನಡೆಸುತ್ತಿದ್ದಾರೆ. ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News