ಬಿಜೆಪಿ ಆಡಳಿತಕ್ಕೂ ತಾಲಿಬಾನ್ ಆಡಳಿತಕ್ಕೂ ವ್ಯತ್ಯಾಸವಿಲ್ಲ: ಕಾಂಗ್ರೆಸ್ ಟೀಕೆ

ಬೈಲಹೊಂಗಲದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಮನೆಗೆ ತೆರಳಿ ಪುಷ್ಪವೃಷ್ಠಿ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

Written by - Zee Kannada News Desk | Last Updated : Sep 5, 2021, 03:34 PM IST
  • ‘ಮೊನ್ನೆ ಗುಂಡು ಹಾರಿಸಿದಾಗ ಪೊಲೀಸರು ಮೂಕಪ್ರೇಕ್ಷಕರು, ಇಂದು ಬಿಜೆಪಿ ಶಾಸಕರಿಗೆ ಪುಷ್ಪಾರ್ಚಕರು’
  • ಯುಪಿ, ಬಿಹಾರದಂತೆಯೇ ಪೊಲೀಸರನ್ನು ಬಿಜೆಪಿ ಸರ್ಕಾರ ತನ್ನ ಕಾಲಾಳುಗಳನ್ನಾಗಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪ
  • ಬಿಜೆಪಿ ಶಾಸಕರಿಗೆ ಪುಷ್ಪವೃಷ್ಠಿ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ
ಬಿಜೆಪಿ ಆಡಳಿತಕ್ಕೂ ತಾಲಿಬಾನ್ ಆಡಳಿತಕ್ಕೂ ವ್ಯತ್ಯಾಸವಿಲ್ಲ: ಕಾಂಗ್ರೆಸ್ ಟೀಕೆ title=
ಬಿಜೆಪಿ ಶಾಸಕರಿಗೆ ಪೊಲೀಸರು ಪುಷ್ಪಾರ್ಚನೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು (Photo Courtesy: Twitter/@INCKarnataka)

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ಆಡಳಿತ(BJP Govt.)ಕ್ಕೂ ತಾಲಿಬಾನ್ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂದು ಕರ್ನಾಟಕ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕಿತ್ತೂರಿನ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ದಂಪತಿಗೆ ಪೊಲೀಸರು ಪುಷ್ಪವೃಷ್ಠಿ ಮಾಡಿರುವ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ಮೊನ್ನೆ ಗುಂಡು ಹಾರಿಸಿದಾಗ ಪೊಲೀಸರು ಮೂಕಪ್ರೇಕ್ಷಕರು, ಇಂದು ಬಿಜೆಪಿ ಶಾಸಕರಿಗೆ ಪುಷ್ಪಾರ್ಚಕರು!’ ಅಂತಾ ಕಾಂಗ್ರೆಸ್(Congress) ವ್ಯಂಗ್ಯವಾಡಿದ್ದು ‘ಉತ್ತರ ಪ್ರದೇಶ, ಬಿಹಾರದಂತೆಯೇ ಪೊಲೀಸರನ್ನು ರಾಜ್ಯದ ಬಿಜೆಪಿ ಸರ್ಕಾರ ತನ್ನ ತನ್ನ ಕಾಲಾಳುಗಳನ್ನಾಗಿ ಮಾಡಿಕೊಂಡಿದೆ’ ಅಂತಾ ಆರೋಪಿಸಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಬಿಜೆಪಿ ಸರ್ಕಾರ ಶಾಪವಾಗಿದೆ: ಡಿ.ಕೆ.ಶಿವಕುಮಾರ್ ಆಕ್ರೋಶ

ಪೊಲೀಸರಿಂದಲೇ ಪುಷ್ಪವೃಷ್ಠಿ ಮಾಡಿಸಿಕೊಂಡಿರುವ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡ(Mahantesh Doddagoudar)ರ ವಿರುದ್ಧ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಉತ್ತರಿಸುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಶಾಸಕರಿಗೆ ಹೂ ಮಳೆ ಮಾಡಿದ್ದ ವಿಡಿಯೋ ವೈರಲ್

ಕೆಲ ದಿನಗಳ ಹಿಂದಷ್ಟೇ ಕಿತ್ತೂರಿನ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ(Mahantesh Doddagoudar) ತಮ್ಮ 48ನೇ ಜನ್ಮದಿನ ಆಚರಿಸಿಕೊಂಡಿದ್ದರು. ಮಹಾಂತೇಶ ದೊಡ್ಡಗೌಡರ ದಂಪತಿಗೆ ಪೊಲೀಸರು ಪುಷ್ಪವೃಷ್ಠಿ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಶಾಸಕನಿಗೆ ರಾಜ ಮರ್ಯಾದೆಗೈದ ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬೆಂಬಲಿಗರರೊಂದಿಗೆ ರಾಜಕಾರಣಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸಾಮಾನ್ಯ. ಆದರೆ ಸ್ಥಳೀಯ ಪೊಲೀಸ್ ಅಧಿಕಾರಿಗಳೇ ತಮ್ಮ ವೃತ್ತಿಬದ್ಧತೆ, ಕರ್ತವ್ಯವನ್ನು ಮರೆತು ಶಾಸಕನಿಗೆ ಅದ್ದೂರಿಯಾಗಿ ಪುಷ್ಪವೃಷ್ಟಿ ಮಾಡಿ ಸನ್ಮಾನ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿರುವುದು ತಾಲಿಬಾನ್ ಆಡಳಿತ: ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಶೋಕಾಸ್ ನೋಟಿಸ್ ಜಾರಿ

ಬೈಲಹೊಂಗಲದಲ್ಲಿರುವ ಬಿಜೆಪಿ ಶಾಸಕ(BJP MLA) ಮಹಾಂತೇಶ ದೊಡ್ಡಗೌಡರ ಮನೆಗೆ ತೆರಳಿ ಪುಷ್ಪವೃಷ್ಠಿ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿಯವರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ ಅಂತಾ ಹೇಳಲಾಗಿದೆ. ಬೈಲಹೊಂಗಲದ ಡಿವೈಎಸ್ಪಿ ಶಿವಾನಂದ ಕಟಗಿ, ಬೈಲಹೊಂಗಲ ಠಾಣೆ ಸಿಪಿಐ ಯು.ಬಿ.ಮಲ್ಲನ್ನವರ, ಪೇದೆ ಮಂಜುನಾಥ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News