ದೇವಸ್ಥಾನಕ್ಕೆ ಬಂದು ದೇವರನ್ನೇ ಕದ್ದ ಖದೀಮರು.!

ದೇವಸ್ಥಾನಕ್ಕೆ ಬಂದ ಕಳ್ಳರು ಅಬ್ಭಬ್ಬ ಅಂದ್ರೆ ಏನೇನ್ ಕದಿತಾರೆ. ದೇವರ ಮೇಲಿನ ಬಂಗಾರ, ಬೆಳ್ಳಿಯ ವಸ್ತುಗಳು, ದೇವಸ್ಥಾನದ ಹುಂಡಿತಯನ್ನ ಕದೀತಾರೆ. ಆದರೆ ಇಲ್ಲೊಂದು ದೇವಸ್ಥಾನಕ್ಕೆ ಬಂದ ಖದೀಮರು ದೇವರ ಮೂರ್ತಿಯನ್ನೇ ಕದ್ದಿದ್ದಾರೆ.

Written by - Zee Kannada News Desk | Last Updated : May 23, 2022, 05:46 PM IST
  • ದೇವಸ್ಥಾನಕ್ಕೆ ಬಂದು ದೇವರನ್ನೇ ಕದ್ದ ಖದೀಮರು
  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಘಟನೆ
  • ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
ದೇವಸ್ಥಾನಕ್ಕೆ ಬಂದು ದೇವರನ್ನೇ ಕದ್ದ ಖದೀಮರು.! title=
ದೇವಸ್ಥಾನ

ಬೆಳಗಾವಿ: ದೇವಸ್ಥಾನಕ್ಕೆ ಬಂದ ಕಳ್ಳರು ಅಬ್ಭಬ್ಬ ಅಂದ್ರೆ ಏನೇನ್ ಕದಿತಾರೆ. ದೇವರ ಮೇಲಿನ ಬಂಗಾರ, ಬೆಳ್ಳಿಯ ವಸ್ತುಗಳು, ದೇವಸ್ಥಾನದ ಹುಂಡಿತಯನ್ನ ಕದೀತಾರೆ. ಆದರೆ ಇಲ್ಲೊಂದು ದೇವಸ್ಥಾನಕ್ಕೆ ಬಂದ ಖದೀಮರು ದೇವರ ಮೂರ್ತಿಯನ್ನೇ ಕದ್ದಿದ್ದಾರೆ.

ಇದನ್ನೂ ಓದಿ: 2023ರ ಚುನಾವಣೆಯ ನಂತರ ಕಾಂಗ್ರೆಸ್ ಖಾಲಿ ಖಾಲಿ!: ಬಿಜೆಪಿ ವ್ಯಂಗ್ಯ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಬೀರೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರ ಗ್ಯಾಂಗ್ ದೇವಸ್ಥಾನದ ಗರ್ಭ ಗುಡಿಯಲ್ಲಿದ್ದ ದೇವರ ಮೂರ್ತಿಯನ್ನು ಕದ್ದು ಪರಾರಿಯಾಗಿದ್ದಾರೆ. 

ನಿನ್ನೆ ತಡರಾತ್ರಿ ಮಳೆ ಬರುತ್ತಿದ್ದ ಕಾರಣ ಊರಿನಲ್ಲಿ ಯಾರು ಸಹ ಹೊರ ಬಂದಿರಲಿಲ್ಲ. ರಾತ್ರಿ ಸರಿ ಸುಮಾರು 12 ರಿಂದ 3 ಗಂಟೆಯ ಒಳಗೆ ದೇವಸ್ಥಾನಕ್ಕೆ ನುಗ್ಗಿದ ಖದೀಮರ ತಂಡ ದೇವಸ್ಥಾನಕ್ಕೆ ನುಗ್ಗಿ ಬೀರೇಶ್ವರನ ಮೂರ್ತಿಯನ್ನು ಕಳ್ಳತನ ‌ಮಾಡಿದ್ದಾರೆ. ಇದು ಗ್ರಾಮದ ಅತ್ಯಂತ ಪುರಾತನ ದೇವಸ್ಥಾನ ಆಗಿರುವುದರಿಂದ ಇಲ್ಲಿ ಖದೀಮರು ನಿಧಿಗಾಗಿ ಆಗಾಗ ಇಂತಹ ಕೃತ್ಯಗಳನ್ನು ಮಾಡುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. 

ಇದನ್ನೂ ಓದಿ: ಎಸ್‌ಡಿಎಂ‌ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮಾ‌ ನಿಧನ

ಆದರೆ ಈ ಬಾರಿ ಖದೀಮರು ದೇವರ ಮೂರ್ತಿಯನ್ನೆ ಕದ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News