ಮಂಡ್ಯ ಚುನಾವಣಾ ಪ್ರಚಾರದಿಂದ ರಮ್ಯ ಹೊರಗುಳಿಯುತ್ತಾರಾ?

ಮುಂದಿನ ಲೋಕಸಭಾ ಚುನಾವಣೆಯಿಂದಲೂ ಸಹ ರಮ್ಯಾ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

Last Updated : Apr 14, 2018, 11:03 AM IST
ಮಂಡ್ಯ ಚುನಾವಣಾ ಪ್ರಚಾರದಿಂದ ರಮ್ಯ ಹೊರಗುಳಿಯುತ್ತಾರಾ? title=

ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ಪ್ರಚಾರದಿಂದ ಮಾಜಿ ಸಂಸದೆ ಮತ್ತು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಹೊರಗುಳಿಯುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. 

ಮಂಡ್ಯ ಕ್ಷೇತ್ರದಿಂದ ನಟ, ಮಾಜಿ ಸಂಸದ ಅಂಬರೀಶ್ ಅವರಿಕೆ ಟಿಕೇಟ್ ನೀಡಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಂಬರೀಷ್​ ಮತ್ತು ವಲಸಿಗರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಹೀಗಾಗಿ ರಮ್ಯಾ ಮಂಡ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದು, ಅಭ್ಯರ್ಥಿಗಳ ಪರ ಪ್ರಚಾರದಿಂದಲೂ ದೂರ ಉಳಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಿಂದಲೂ ಸಹ ರಮ್ಯಾ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

Trending News