Holi 2023: ಹೋಳಿ ಹಬ್ಬದ ಬಳಿಕ ಈ ಮೂರು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ, ಕಾರಣ ಇಲ್ಲಿದೆ

Jupiter In Aries 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ದೇವಗುರು ಬೃಹಸ್ಪತಿ ಮೇಷ ಗೋಚರ ನೆರವೇರಲಿದೆ. ಗುರುವಿನ ಈ ಗೋಚರ 3 ರಾಶಿಗಳ ಜಾತಕದವರ ಭಾಗ್ಯದ ಬಾಗಿಲನ್ನೇ ತೆರೆಯಲಿದೆ.  

Written by - Nitin Tabib | Last Updated : Jan 30, 2023, 01:54 PM IST
  • ಹೋಳಿ ಹಬ್ಬದ ಬಳಿಕ ದೇವಗುರು ಬೃಹಸ್ಪತಿಯ ಮೇಷ ಗೋಚರ ನೆರವೇರಲಿದೆ.
  • ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
  • ಆದರೆ, ಮೂರು ರಾಶಿಗಳ ಜನರ ಜೀವನದಲ್ಲಿ ಇದರಿಂದ ಅಪಾರ ಧನಲಾಭ ಹರಿದು ಬರಲಿದೆ.
Holi 2023: ಹೋಳಿ ಹಬ್ಬದ ಬಳಿಕ ಈ ಮೂರು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ, ಕಾರಣ ಇಲ್ಲಿದೆ title=
ಹೋಳಿ ಹಬ್ಬ 2023

Bruhaspati Gochar 2023: ಜ್ಯೋತಿಷ್ಯದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳು ತಮ್ಮ ರಾಶಿಯನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ನಡೆ ಹಾಗೂ ರಾಶಿ ಬದಲಾವಣೆ ಮಾನವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ರಾಶಿಗಳ ಪಾಲಿಗೆ ಈ ಗೋಚರಗಳು ಶುಭ ಸಾಬೀತಾದರೆ, ಕೆಲ ರಾಶಿಗಳ ಜನರ ಪಾಲಿಗೆ ಈ ಗೋಚರಗಳು ಅಶುಭ ಸಾಬೀತಾಗುತ್ತವೆ. ಈ ಬಾರಿಯ ಹೋಳಿ ಹಬ್ಬದ ಬಳಿಕ ದೇವಗುರು ಬೃಹಸ್ಪತಿಯ ಮೇಷ ಗೋಚರ ನೆರವೇರಲಿದೆ. ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಮೂರು ರಾಶಿಗಳ ಜನರ ಜೀವನದಲ್ಲಿ ಇದರಿಂದ ಅಪಾರ ಧನಲಾಭ ಹರಿದು ಬರಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

ಸಿಂಹ ರಾಶಿ
ಗುರುವಿನ ಈ ಮೇಷ ಗೋಚರ ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ಗುರುವು ನಿಮ್ಮ ರಾಶಿಯಿಂದ ಒಂಬತ್ತನೇ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ಅದೃಷ್ಟದ ಬೆಂಬಲ ನಿಮ್ಮೊಂದಿಗಿರಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಬಹುದು. ಈ ಸಮಯವು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಇದೇ ವೇಳೆ, ನಿಮ್ಮ ನಿಂತು ಹೋಗಿರುವ  ಕೆಲಸಗಳೂ ಕೂಡ ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಇದರೊಂದಿಗೆ, ಈ ಅವಧಿಯಲ್ಲಿ ನೀವು ಕೆಲಸ ಮತ್ತು ವ್ಯಾಪಾರಕ್ಕಾಗಿ ಪ್ರಯಾಣ ಬೆಳೆಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ, ಇದು ನಿಮಗೆ ಆಹ್ಲಾದಕರ ಮತ್ತು ಪ್ರಯೋಜನಕಾರಿ ಎಂದು ಸಾಬೀತಾಗುವ ಸಾಧ್ಯತೆ ಇದೆ.

ತುಲಾ ರಾಶಿ
ಬೃಹಸ್ಪತಿಯ ಗುರು ಗೋಚರ ತುಲಾ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಗುರುವು ನಿಮ್ಮ ಸಂಕ್ರಮಣದ ಜಾತಕದ ಸಪ್ತಮ ಭಾವದಲ್ಲಿ ಪ್ರವೇಶಿಸುತ್ತಾನೆ. ಇದು ಪಾರ್ಟನರ್ಷಿಪ್ ಮತ್ತು ವೈವಾಹಿಕ ಜೀವನದ ಸ್ಥಾನ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಅವಧಿಯು ಹಣಕಾಸಿನ ವಿಷಯಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿರಲಿದೆ. ಇದರೊಂದಿಗೆ ವಿವಾಹಿತರ ಜೀವನದಲ್ಲಿ ಸಂತೋಷವು ಹೆಚ್ಚಾಗಲಿದೆ. ನೀವು ಪರಸ್ಪರ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗಲಿದೆ. ಮತ್ತೊಂದೆಡೆ, ಅವಿವಾಹಿತರು, ತಮ್ಮ ಮದುವೆಯ ಬಗ್ಗೆ ಯೋಚಿಸಬಹುದು. ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಸಂಬಂಧಗಳು ಕೂಡಿ ಬರುವ ಸಾಧ್ಯತೆ ಇವೆ.  ಪಾಲುದಾರಿಕೆಯೊಂದಿಗೆ ನೀವು ಯಾವುದೇ ಕೆಲಸ ಆರಂಭಿಸಲು ಬಯಸುತ್ತಿದ್ದರೆ, ಈ ಅವಧಿ ನಿಮಗೆ ಸಾಕಷ್ಟು ಅನುಕೂಲಕರವಾಗಿದೆ.

ಇದನ್ನೂ ಓದಿ-ನವಾಂಶ ಜಾತಕದ ಉಚ್ಛ ಭಾವದಲ್ಲಿ ಶನಿಯ ಸಂಚಾರ, 4 ರಾಶಿಗಳ ಜಾತಕದವರಿಗೆ ಭಾರಿ ಧನಲಾಭ

ಧನು ರಾಶಿ
ಗುರುಗ್ರಹದ ರಾಶಿ ಪರಿವರ್ತನೆ ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ಗುರುವು ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ಸಾಗಲಿದ್ದಾನೆ. ಇದು ಸಂತಾನ, ಪ್ರಗತಿ ಮತ್ತು ಪ್ರೇಮ ವಿವಾಹದ ಕಾರಕ ಸ್ಥಾನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ  ನಿಮ್ಮ ಕೆಲಸ-ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಮತ್ತೊಂದೆಡೆ, ಉನ್ನತ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ.  ಈ ಸಮಯವು ಪ್ರೇಮ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಇದರೊಂದಿಗೆ ಶನಿ ಸಾಡೇಸಾತಿಯಿಂದ ಮುಕ್ತಿಯೂ ಲಭಿಸಿದ ಕಾರಣ ಪ್ರಗತಿಯ ಹೊಸ ಮಾರ್ಗಗಳು ಎಪ್ರಿಲ್ ನಿಂದ ತೆರೆದುಕೊಳ್ಳಲಿವೆ.

ಇದನ್ನೂ ಓದಿ-ಶನಿ ಅಧಿಪತ್ಯದ ಈ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಪವರ್ಫುಲ್ ರಾಜಯೋಗ, 3 ರಾಶಿಗಳ ಜನರಿಗೆ ಭಾರಿ ಲಾಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News