Shani Dev: ಒಂದು ರಾಶಿಯಲ್ಲಿ 3 ಗ್ರಹಗಳ ಸಂಗಮ: ಶನಿಬಲದಿಂದ ಈ ಜನರ ಜೀವನ ಅಲ್ಲೋಲ ಕಲ್ಲೋಲ!

Shani Dev: ಇಂದು ಶನಿ ದೇವರಿಗೆ ವಿಶೇಷವಾಗಿದೆ. 26 ನವೆಂಬರ್ 2022 ರಂದು, ಚಂದ್ರನು ಧನು ರಾಶಿಯಲ್ಲಿ ಸಾಗಲಿದ್ದಾನೆ. ಇದರಿಂದ ಅನೇಕ ರಾಶಿಗಳಿಗೆ ಉತ್ತಮ ಲಾಭ ಸಿಗಲಿದೆ ಎಂಬುದು ಜೋತಿಷ್ಯರ ಅಭಿಮತ. ಅಲ್ಲದೆ, ಸೂರ್ಯ, ಬುಧ ಮತ್ತು ಶುಕ್ರ ಕೂಡ ಈ ಅನುಕ್ರಮದಲ್ಲಿ ಸಂಗಮವಾಗುತ್ತಾರೆ.

Written by - Bhavishya Shetty | Last Updated : Nov 26, 2022, 08:06 AM IST
    • ಶನಿ ದೇವರನ್ನು ಪೂಜಿಸುವುದರಿಂದ ಮಾನವ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ತರುತ್ತದೆ
    • ಸೂರ್ಯ, ಬುಧ ಮತ್ತು ಶುಕ್ರ ಕೂಡ ಈ ಅನುಕ್ರಮದಲ್ಲಿ ಸಂಗಮವಾಗುತ್ತಾರೆ
    • ಹಲವು ರಾಶಿಗಳಿಗೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ
Shani Dev: ಒಂದು ರಾಶಿಯಲ್ಲಿ 3 ಗ್ರಹಗಳ ಸಂಗಮ: ಶನಿಬಲದಿಂದ ಈ ಜನರ ಜೀವನ ಅಲ್ಲೋಲ ಕಲ್ಲೋಲ! title=
Shani Margi

Shani Dev: ಶನಿವಾರ ಶನಿ ದೇವರಿಗೆ ಮಂಗಳಕರ ದಿನ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಶನಿವಾರದಂದು ಶನಿ ದೇವರನ್ನು ಪೂಜಿಸುವುದರಿಂದ ಮಾನವ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ತರುತ್ತದೆ ಎಂದು ಜೋತಿಷ್ಯರು ಹೇಳುತ್ತಾರೆ. ನವೆಂಬರ್ 26, 2022 ಅಂದರೆ ಇಂದು, ಶನಿವಾರದ ದಿನದಂದು ಪವಾಡ ಸಂಭವಿಸಲಿದೆ ಎಂದು ಜೋತಿಷ್ಯರು ಹೇಳುತ್ತಾರೆ.

ಇದನ್ನೂ ಓದಿ:

ಇಂದು ಶನಿ ದೇವರಿಗೆ ವಿಶೇಷವಾಗಿದೆ. 26 ನವೆಂಬರ್ 2022 ರಂದು, ಚಂದ್ರನು ಧನು ರಾಶಿಯಲ್ಲಿ ಸಾಗಲಿದ್ದಾನೆ. ಇದರಿಂದ ಅನೇಕ ರಾಶಿಗಳಿಗೆ ಉತ್ತಮ ಲಾಭ ಸಿಗಲಿದೆ ಎಂಬುದು ಜೋತಿಷ್ಯರ ಅಭಿಮತ. ಅಲ್ಲದೆ, ಸೂರ್ಯ, ಬುಧ ಮತ್ತು ಶುಕ್ರ ಕೂಡ ಈ ಅನುಕ್ರಮದಲ್ಲಿ ಸಂಗಮವಾಗುತ್ತಾರೆ. ಇದರೊಂದಿಗೆ ಶನಿದೇವನ ಕೃಪೆಗೆ ಪಾತ್ರರಾಗಿ ಉತ್ತಮ ಲಾಭ ಪಡೆಯುವ ಸಾಧ್ಯತೆಗಳಿವೆ. ಈ ಕ್ರಮದಲ್ಲಿ ಹಲವು ಪರಿಹಾರಗಳನ್ನು ಅನುಸರಿಸಬೇಕಾಗುತ್ತದೆ.

ಶನಿಗ್ರಹ ಪರಿಹಾರ:

ಶನಿಯ ದುಷ್ಟ ಪ್ರಭಾವವು ತೊಂದರೆಗಳನ್ನು ಉಂಟುಮಾಡುತ್ತದೆ: ಶನಿದೇವನ ಸ್ಥಾನಿಕ ಚಲನೆಯು 7 ದಿನಗಳವರೆಗೆ ಇರುತ್ತದೆ. ಆದರೆ, ಇದರಿಂದ ಹಲವು ರಾಶಿಗಳಿಗೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಜೋತಿಷ್ಯರು. ಇದಲ್ಲದೆ, ಶನಿಯ ಕೆಟ್ಟ ಪ್ರಭಾವದಿಂದ ಜಾತಕದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆರೋಗ್ಯ ಸಮಸ್ಯೆಗಳ ಸಾಧ್ಯತೆಯೂ ಇದೆ.

ಶನಿ ಪರಿಹಾರಗಳು:

ಶನಿದೇವನ ದುಷ್ಪರಿಣಾಮದಿಂದ ಸುಲಭವಾಗಿ ಪರಿಹಾರ ಪಡೆಯಲು, ಜ್ಯೋತಿಷ್ಯರು ಹೇಳಿದ ಕೆಲವು ಪರಿಹಾರಗಳನ್ನು ಅನುಸರಿಸಬೇಕು. ಮೇಲಾಗಿ ಈ ಪರಿಹಾರೋಪಾಯಗಳನ್ನು ನಿತ್ಯ ಅನುಸರಿಸಿದರೆ ಜೀವನದಲ್ಲಿ ಎದುರಾಗುವ ಎಲ್ಲ ಕಷ್ಟಗಳಿಗೂ ಪರಿಹಾರ ಸಿಗುತ್ತದೆ ಎಂಬುದು ಅಭಿಪ್ರಾಯ. ವಿಶೇಷವಾಗಿ ಹಣಕಾಸಿನ ಸಮಸ್ಯೆಗಳು ಸಹ ದೂರವಾಗುತ್ತವೆ.

ಈ ರಾಶಿಯವರು ಮುನ್ನೆಚ್ಚರಿಕೆ ವಹಿಸಿ:

ಶನಿಯ ಪ್ರಭಾವವು ವಿವಿಧ ರಾಶಿಚಿಹ್ನೆಗಳ ಮೇಲೆ ಚಲಿಸುತ್ತದೆ. ಆದರೆ ಇದು ಧನು ರಾಶಿ, ಮಕರ, ಕುಂಭ, ಮಿಥುನ ಮತ್ತು ತುಲಾ ರಾಶಿಯ ಮೇಲೂ ಬರುತ್ತದೆ. ಹಾಗಾಗಿ ಈ ರಾಶಿಚಕ್ರದವರು ವಿವಿಧ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ಜ್ಯೋತಿಷ್ಯರು ಹೇಳುತ್ತಾರೆ. ಇದಲ್ಲದೆ, ಅವರು ಶನಿ ದೇವರಿಗಾಗಿ ವಿಶೇಷ ಕಾರ್ಯಗಳನ್ನು ಕೈಗೊಳ್ಳಬೇಕು.

ಈ ಪರಿಹಾರಗಳನ್ನು ಮಾಡಿ:

ಶನಿದೇವನ ಕೃಪೆಗೆ ಪಾತ್ರರಾಗಲು ಶನಿವಾರದಂದು ಶನಿ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು. ಅದರಲ್ಲೂ ಅಮಲ ಮರದ ಕೆಳಗೆ ದೀಪಗಳನ್ನು ಹಚ್ಚಬೇಕು. ಹಾಗೆಯೇ ಶನಿ ದೇವರಿಗೆ ಇಷ್ಟವಾದ ವಸ್ತುಗಳನ್ನು ದಾನ ಮಾಡಬೇಕು. ಬಡವರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುವುದರಿಂದ ಶನಿಗ್ರಹದ ದುಷ್ಪರಿಣಾಮಗಳನ್ನು ಸುಲಭವಾಗಿ ನಿವಾರಿಸಬಹುದು.

ಇದನ್ನೂ ಓದಿ:

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಪರಿಶೀಲಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News