ಈ ಹೊತ್ತಲ್ಲಿ ನೀರು ಕುಡಿದರೆ ವಿಷವಾಗಿ ಪರಿಣಮಿಸಬಹುದು, ಎಂದಿಗೂ ಈ ತಪ್ಪು ಮಾಡದಿರಿ

 ಆಚಾರ್ಯ ಚಾಣಕ್ಯರು ಆಯುರ್ವೇದವನ್ನು ತಿಳಿದಿದ್ದರು. ಉತ್ತಮ ಆರೋಗ್ಯಕ್ಕಾಗಿ ಕೆಲವು ವಿಷಯಗಳನ್ನು ಹೇಳಿದ್ದಾರೆ. ದೇಹಕ್ಕೆ ಬಹಳ ಮುಖ್ಯವಾಗಿರುವುದು ನೀರು. ಈ ನೀರಿನ ಬಗ್ಗೆ ಚಾಣಕ್ಯ ವಿಶೇಷ ಸಲಹೆ ನೀಡಿದ್ದಾರೆ. 

Written by - Ranjitha R K | Last Updated : Feb 15, 2022, 08:42 AM IST
  • ಈ ಸಮಯದಲ್ಲಿ ನೀರು ಕುಡಿಯಬೇಡಿ
  • ನೀರು ವಿಷದಂತೆ ಹಾನಿ ಮಾಡುತ್ತದೆ
  • ನೀರು ಕುಡಿಯಲು ಸರಿಯಾದ ಸಮಯ ತಿಳಿಯಿರಿ
ಈ ಹೊತ್ತಲ್ಲಿ ನೀರು ಕುಡಿದರೆ ವಿಷವಾಗಿ ಪರಿಣಮಿಸಬಹುದು, ಎಂದಿಗೂ ಈ ತಪ್ಪು ಮಾಡದಿರಿ title=
ನೀರು ಕುಡಿಯಲು ಸರಿಯಾದ ಸಮಯ ತಿಳಿಯಿರಿ (file photo)

ನವದೆಹಲಿ : ಆಚಾರ್ಯ ಚಾಣಕ್ಯ ಅವರು ಅರ್ಥಶಾಸ್ತ್ರ, ರಾಜತಾಂತ್ರಿಕತೆ, ರಾಜಕೀಯ ಮಾತ್ರವಲ್ಲದೆ ಜೀವನಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಹೇಳಿದ್ದಾರೆ (Chanakya Niti). ಚಾಣಕ್ಯ ನೀತಿಯಲ್ಲಿ ಬರೆದ ವಿಷಯಗಳು ಉತ್ತಮ ಆರೋಗ್ಯ, ಸಂತೋಷ-ಯಶಸ್ವಿ ಜೀವನ,  ಸಂಬಂಧಗಳು, ಅಪಾರ ಸಂಪತ್ತನ್ನು ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಅವರು ಉತ್ತಮ ಆರೋಗ್ಯದ ಬಗ್ಗೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ (Health tips in Chanakya niti). ಆಚಾರ್ಯ ಚಾಣಕ್ಯರು ಆಯುರ್ವೇದವನ್ನು (Ayurveda) ತಿಳಿದಿದ್ದರು. ಉತ್ತಮ ಆರೋಗ್ಯಕ್ಕಾಗಿ ಕೆಲವು ವಿಷಯಗಳನ್ನು ಹೇಳಿದ್ದಾರೆ. ದೇಹಕ್ಕೆ ಬಹಳ ಮುಖ್ಯವಾಗಿರುವುದು ನೀರು. ಈ ನೀರಿನ ಬಗ್ಗೆ ಚಾಣಕ್ಯ ವಿಶೇಷ ಸಲಹೆ ನೀಡಿದ್ದಾರೆ. 

ಈ ಸಮಯದಲ್ಲಿ ನೀರು ಕುಡಿಯಬಾರದು :
ಚಾಣಕ್ಯ ನೀತಿಯಲ್ಲಿ (Chanakya Niti) ಹೇಳಿರುವ ಹಾಗೆ, ಸರಿಯಾದ ಸಮಯಕ್ಕೆ ನೀರನ್ನು ಯಾವಾಗಲೂ ಕುಡಿಯಬೇಕು. ತಪ್ಪಾದ ಸಮಯದಲ್ಲಿ ಕುಡಿಯುವ ನೀರು ವಿಷದಂತೆ. ಆಚಾರ್ಯ ಚಾಣಕ್ಯ ಹೇಳುವಂತೆ ಊಟ ಮಾಡಿದ ತಕ್ಷಣ ಕುಡಿದ ನೀರು ವಿಷವಂತೆ(Water Benefits). ಇದು ನಮ್ಮ ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಆಹಾರದ ಜೀರ್ಣಕ್ರಿಯೆಯಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಹಾಗಾಗಿ ಊಟವಾದ ತಕ್ಷಣ ನೀರು ಕುಡಿಯಬಾರದು (water after food).  

ಇದನ್ನೂ ಓದಿ : Astrology: ತಮ್ಮ ಕೆಲಸ ಸಾಧಿಸುವಲ್ಲಿ ನಿಪುಣರು ಈ ರಾಶಿಯ ಹುಡುಗಿಯರು!

ನೀರು ಕುಡಿಯಲು ಸರಿಯಾದ ಸಮಯ :
ಆಚಾರ್ಯ ಚಾಣಕ್ಯ ಹೇಳುವಂತೆ ಊಟ ಮಾಡಿದ ಅರ್ಧ ಗಂಟೆಯ ನಂತರ ನೀರು ಕುಡಿದರೆ ದೈಹಿಕ ಶಕ್ತಿ ಹೆಚ್ಚುತ್ತದೆ. ಆಹಾರವು ಜೀರ್ಣವಾದ ನಂತರ ಕುಡಿಯುವ ನೀರು ಅತ್ಯುತ್ತಮವಾಗಿರುತ್ತದೆ. ಮತ್ತು ಅದು ದೇಹಕ್ಕೆ ಔಷಧದಂತೆ ಕಾರ್ಯನಿರ್ವಹಿಸುತ್ತದೆ. ಊಟದ ನಡುವೆ ಒಂದು ಅಥವಾ ಎರಡು ಗುಟುಕು ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಆದರೆ ಊಟದ ಸಮಯದಲ್ಲಿ ಮತ್ತು ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯ ಕೆಡುತ್ತದೆ. 

ಇದನ್ನೂ ಓದಿ :  Guru Ast: ಈ ರಾಶಿಯಲ್ಲಿ ದೇವಗುರು ಬೃಹಸ್ಪತಿ ಅಸ್ತ, ಫೆ.19ರಿಂದ ಈ ನಾಲ್ಕು ರಾಶಿಗಳ ಜನರ ಸಂಕಷ್ಟ ಹೆಚ್ಚಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News