Horoscope: ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ, ಕನ್ಯಾ ರಾಶಿಯ ಮೇಲೆ ಯಾವ ಗ್ರಹದ ಕಣ್ಣು, ಇಲ್ಲಿದೆ ಇಂದಿನ ಭವಿಷ್ಯ

Aaj Ka Rashifal 4 august 2022 Thursday: ಇಂದು ಕರ್ಕ ರಾಶಿಯ ಜಾತಕದ ಜನರಿಗೆ ಗ್ರಹಗಳು ಪರೀಕ್ಷೆಯೊಡ್ಡಲಿವೆ. ಸಿಂಹ ರಾಶಿಯವರು ತಮ್ಮ ದಿನಚರಿಯನ್ನು ಸರಿಪಡಿಸಬೇಕು. ತುಲಾ, ಕುಭ, ಮೀನ ರಾಶಿಯ ಜನರಿಗೆ ಖುಷಿ ಸಿಗಲಿದೆ. ಹಾಗಾದರೆ ಬನ್ನಿ ಗ್ರಹಗಳ ಈ ವಕ್ರ, ನೇರ ನಡೆಗಳ ಲಾಭ-ನಷ್ಟ  ಯಾವ ರಾಶಿಯ ಮೇಲೆ ಇಂದು ಹೇಗೆ ಇರಲಿದೆ ತಿಳಿದುಕೊಳ್ಳೋಣ,  

Written by - Nitin Tabib | Last Updated : Aug 4, 2022, 09:16 AM IST
  • ಇಂದು ಕರ್ಕ ರಾಶಿಯ ಜಾತಕದ ಜನರಿಗೆ ಗ್ರಹಗಳು ಪರೀಕ್ಷೆಯೊಡ್ಡಲಿವೆ.
  • ಸಿಂಹ ರಾಶಿಯವರು ತಮ್ಮ ದಿನಚರಿಯನ್ನು ಸರಿಪಡಿಸಬೇಕು.
  • ತುಲಾ, ಕುಭ, ಮೀನ ರಾಶಿಯ ಜನರಿಗೆ ಖುಷಿ ಸಿಗಲಿದೆ.
Horoscope: ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ, ಕನ್ಯಾ ರಾಶಿಯ ಮೇಲೆ ಯಾವ ಗ್ರಹದ ಕಣ್ಣು, ಇಲ್ಲಿದೆ ಇಂದಿನ ಭವಿಷ್ಯ title=
Today Horoscope

ಮೇಷ ರಾಶಿ- ಮನಸ್ಸು ಅತೃಪ್ತಿಯಿಂದ ಕೂಡಿರಲಿದೆ. ಮನಸ್ಸನ್ನು ಕಲಕುವ ವಿಷಯಗಳಿಂದ ಅಂತರ ಕಾಯ್ದುಕೊಳ್ಳಿ. ಮನಸ್ಸಿನ ನಿಯಂತ್ರಣಕ್ಕೆ, ಸ್ವಲ್ಪ ದೇವರ ಆರಾಧನೆ ನಡೆಸಿ, ಕುಟುಂಬ ಸದಸ್ಯರ ಜೊತೆಗೆ ಕಾಲ ಕಲೆಯಿರಿ, ಮನಸ್ಸಿಗೆ ಮುದ ನೀಡುವ ಚಲನಚಿತ್ರವನ್ನು ನೋಡುವುದು ಉತ್ತಮ. ಕೈಕಟ್ಟಿ ಕುಳಿತರೆ ವೃತ್ತಿಜೀವನ ಸುಧಾರಿಸುವುದಿಲ್ಲ. ನೀವು ಅದನ್ನು ಬೆಳಗಿಸಲು ಬಯಸುತ್ತಿದ್ದರೆ, ನೀವು ಆದಷ್ಟು ಹೆಚ್ಚು ಶ್ರಮಿಸಬೇಕು. ವ್ಯವಹಾರದಲ್ಲಿ ಜಾಗರೂಕತೆಯನ್ನು ಕಾಪಾಡಿಕೊಳ್ಳಿ. ತಿನ್ನುವಾಗ ಮತ್ತು ಕುಡಿಯುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಹೊಟ್ಟೆ ನೋವು ಸಂಭವಿಸಬಹುದು. ನಡವಳಿಕೆಯಲ್ಲಿ ಬಿಗಿತ ಇದ್ದರೆ ಜೀವನ ಸಂಗಾತಿಯೊಂದಿಗೆ ಉದ್ವಿಗ್ನತೆ ಉಂಟಾಗಬಹುದು. ಸ್ನೇಹಿತರು ನಿಮ್ಮ ಹಿತೈಷಿಗಳನ್ನು ದ್ವೇಷಿಸಬೇಡಿ.

ವೃಷಭ ರಾಶಿ- ಸಹೋದರನಿಗಿಂತ ದೊಡ್ಡ ಸ್ನೇಹಿತ ಮತ್ತು ಸಹೋದರನಿಗಿಂತ ದೊಡ್ಡ ಶತ್ರು ಇಲ್ಲ, ಹೀಗಾಗಿ ನಿಮ್ಮ ಸಹೋದರನೊಂದಿಗಿನ ಹದಗೆಟ್ಟ ಸಂಬಂಧವನ್ನು ತಕ್ಷಣವೇ ಸರಿಪಡಿಸಿ. ಮನಸ್ಸಿಗೆ ಸಂತೋಷವಾಗುತ್ತದೆ. ಸಂಬಂಧ ಹಾಳಾಗಲು ಬಿಡಬೇಡಿ. . ಕಚೇರಿ ವಾತಾವರಣವೂ ಉತ್ತಮವಾಗಿರುತ್ತದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ಹಾಳಾಗುತ್ತಿರುವ ಕೆಲಸವನ್ನು ಸರಿಪಡಿಸಿ. ವ್ಯಾಪಾರಸ್ಥರು ವ್ಯವಹಾರದಲ್ಲಿ ವಿವಾದಗಳನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಮೃದು ಧೋರಣೆ ಇರಲಿ. ಕೀಲುಗಳಲ್ಲಿ ನೋವಿನ ಸಮಸ್ಯೆ ಎದುರಾಗಬಹುದು ಎಚ್ಚರ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರಿ. ಅದು ನಿಮಗೆ ಪ್ರಯೋಜನ ನೀಡಲಿದೆ.

ಮಿಥುನ ರಾಶಿ- ಮನಸ್ಸಿನ ತೊಂದರೆಗಳು ನಿಮ್ಮನ್ನು ಕಾಡಲಿವೆ . ನಿಮ್ಮ ಬುದ್ಧಿವಂತಿಕೆಯಿಂದ ಅವುಗಳನ್ನು ಪರಿಹರಿಸುವ ನಿಮ್ಮ ಪ್ರಯತ್ನವು ಯಶಸ್ವಿಯಾಗದಿದ್ದರೆ, ನಿಮ್ಮ ಪ್ರೀತಿಪಾತ್ರರ ಸಲಹೆಯನ್ನು ಪರಿಗಣಿಸಿ. ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನೀವು ಹೊಸ ವ್ಯವಹಾರವನ್ನು ಆರಂಭಿಸಲು ಯೋಜಿಸಬಹುದು. ರಕ್ತದೊತ್ತಡವನ್ನು ಸಮತೋಲನದಲ್ಲಿಡಿ. ತಾಯಿಯ ಆರೋಗ್ಯದತ್ತ ಗಮನಹರಿಸಿ. ನಿಯಮಿತವಾಗಿ ಅವರಿಗೆ ಸೇವೆ ಮಾಡಿ. ಸ್ವಲ್ಪ ಎಚ್ಚರ ತಪ್ಪಿದರೂ ಅವರ ಸಣ್ಣ ರೋಗ ದೊಡ್ಡದಾಗಬಹುದು. ಬಡವರಿಗೆ ಊಟ ನೀಡಿ.

ಕರ್ಕ ರಾಶಿ- ಗ್ರಹಗಳು ಇಂದು ನಿಮ್ಮ ಪರೀಕ್ಷೆ ನಡೆಸಲಿವೆ. ಆದ್ದರಿಂದ ನಿಮ್ಮ ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ. ಮುಂಜಾಗ್ರತೆ ವಹಿಸದೆ ಇದ್ದರೆ, ಕೆಲಸಗಕು ಬಿಗಡಾಯಿಸುವ ಸಾಧ್ಯತೆ ಇದೆ.  ಬಾಕಿಯಿರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಿ ಇಲ್ಲದಿದ್ದರೆ ಬಾಸ್ ನಿಮ್ಮ ಮೇಲೆ ಕೆಂಗಣ್ಣು ಬೀರುವ ಸಾಧ್ಯತೆ ಇದೆ. ಸ್ಪರ್ಧೆಗೆ ಹೆಚ್ಚು ಸಿದ್ಧತೆ ನಡೆಸಬೇಕಾದೀತು. ವ್ಯಾಪಾರದಲ್ಲಿ ನಷ್ಟವಾಗುವ ಸಂಭವವಿದೆ. ನಿರ್ಜಲೀಕರಣದ ಬಗ್ಗೆ ಎಚ್ಚರವಿರಲಿ. ಸಹೋದರನೊಂದಿಗೆ ವಿವಾದ ಉಂಟಾಗಬಹುದು. ಅದನ್ನು ತಪ್ಪಿಸಲು, ಪರಸ್ಪರ ಮಾತನಾಡುವುದು ಉತ್ತಮ. ಸಂವಹನದ ಕೊರತೆಯ ಸಂದರ್ಭದಲ್ಲಿ, ತಪ್ಪುಗ್ರಹಿಕೆಯು ಹೆಚ್ಚುತ್ತಲೇ ಇರುತ್ತದೆ. ಸಾಧ್ಯವಾದರೆ, ರೋಗಿಗಳಿಗೆ ಹಣ, ಔಷಧಿ ಅಥವಾ ಇನ್ನಾವುದೇ ವಿಧದಲ್ಲಿ ಸಹಾಯ ಮಾಡಿ.

ಸಿಂಹ ರಾಶಿ- ರಾತ್ರಿ ತಡವಾಗಿ ಮಲಗುವವರು, ಹಗಲಿನಲ್ಲಿ ಸೂರ್ಯೋದಯದ ನಂತರವೂ ನಿದ್ರಿಸುತ್ತಿರುತ್ತಾರೆ, ಹೊತ್ತಿಲ್ಲದ ಹೊತ್ತಿಗೆ ಬೇಕಾಬಿಟ್ಟಿ ಆಹಾರ ಸೇವಿಸುತ್ತಿದ್ದರೆ, ನಿಮ್ಮ ದಿನಚರಿಯನ್ನು ಸುಧಾರಿಸಿಕೊಳ್ಳಿ. ಏಕೆಂದರೆ, ಮೆಲ್ಲಗೆ ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಇದೇ ರೀತಿ ಮುಂದುವರಿದರೆ ಗಂಭೀರ ಕಾಯಿಲೆಗಳ ಸುಳಿಯಲ್ಲಿ ಸಿಲುಕಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಬಹು ಕಾರ್ಯಕ್ಕೆ ಸಿದ್ಧರಾಗಿರಿ. ನೀವು ಎಲ್ಲೋ ಬಂಡವಾಳವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಮಯ ಉತ್ತಮವಾಗಿದೆ. ಪೋಷಕರ ಆರೋಗ್ಯದ ಕಾಳಜಿ ವಹಿಸಿ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಸ್ನೇಹಿತರು ನಿಮ್ಮ ಬಳಿಗೆ ಬರುತ್ತಲೇ ಇರುತ್ತಾರೆ, ಆದ್ದರಿಂದ ಕಾಳಜಿ ವಹಿಸಿ ಮತ್ತು ಉತ್ತಮ ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ.

ಕನ್ಯಾ ರಾಶಿ- ನಕಾರಾತ್ಮಕ ಗ್ರಹಗಳು ಇಂದು ನಿಮ್ಮ ಸಂಬಂಧಗಳಲ್ಲಿ ಹುಳಿ ಹಿಂಡಲು ಕೈಲಾದಷ್ಟು ಪ್ರಯತ್ನಿಸಲಿವೆ, ಆದರೆ ನೀವು ಜಾಗರೂಕರಾಗಿದ್ದರೆ, ಸಂಬಂಧಗಳಲ್ಲಿ  ಮಾಧುರ್ಯತೆ ಇರಲಿದೆ. ಇದಕ್ಕಾಗಿ, ನಿಮ್ಮ ನಡವಳಿಕೆಯನ್ನು ಸರಿಯಾಗಿ ಇರಿಸಿಕೊಳ್ಳಬೇಕು, ನಿಮ್ಮ ಪ್ರೀತಿಪಾತ್ರರ ಸಣ್ಣ ತಪ್ಪುಗಳನ್ನು ನೀವು ನಿರ್ಲಕ್ಷಿಸಬೇಕಾಗುತ್ತದೆ. ಇಂದು ಯಶಸ್ಸಿಗಾಗಿ ನೀವು ಕಠಿಣ ಪರಿಶ್ರಮವನ್ನು ಮಾಡಬೇಕಾಗಿದೆ, ದೃಢತೆಯ ಫಲವು ನಿಮಗೆ ಸಿಗಲಿದೆ. ನಿಮಗೆ ಸರ್ಕಾರಿ ನೌಕರಿ ಸಿಗದಿದ್ದರೆ ಸುಸ್ತಾಗಿ ಕುಳಿತುಕೊಳ್ಳಬೇಡಿ, ಅದಕ್ಕಾಗಿ ಪ್ರಯತ್ನ ಮುಂದುವರೆಸಿ. ವ್ಯಾಪಾರ ವರ್ಗ ನಿಮಗೆ ಸಂಪೂರ್ಣ ತಿಳಿದಿರಲಿ, ಯಾರಾದರೂ ನಿಮ್ಮ ವ್ಯಾಪಾರವನ್ನು ಪ್ರವೇಶಿಸಬಹುದು. ಆರೋಗ್ಯ ಉತ್ತಮವಾಗಿರಲಿದೆ.

ತುಲಾ ರಾಶಿ- ಇಂದು ಯಾವುದೇ ಕ್ಷೇತ್ರದಲ್ಲಿ ನೀವು ತೆಗೆದುಕೊಂಡ ನಿರ್ಧಾರಗಳು ಸಂಪೂರ್ಣವಾಗಿ ಸರಿಯಾಗಿರುತ್ತವೆ, ಏಕೆಂದರೆ ನಿಮ್ಮ ಆತ್ಮವಿಶ್ವಾಸವು ಅದರಲ್ಲಿ ನಿಮಗೆ ಗೋಚರಿಸಲಿದೆ. ಈ ಸಮಯದ ಲಾಭವನ್ನು ಪಡೆದುಕೊಳ್ಳಿ ಮತ್ತು ಸಂಪೂರ್ಣ ಯೋಜನೆಯೊಂದಿಗೆ ನಿಮ್ಮ ಕೆಲಸವನ್ನು ಪ್ರಾರಂಭಿಸಿ. ಸಹೋದ್ಯೋಗಿಗಳೊಂದಿಗೆ ಆರೋಗ್ಯಕರ ಸ್ಪರ್ಧೆ ಇದ್ರಲಿದೆ. ಇದು ವಿವಾದದ ರೂಪ ಪಡೆಯದಂತೆ ನೋಡಿಕೊಳ್ಳಿ. ಕಛೇರಿ ಕೆಲಸದಲ್ಲಿ ಹೆಚ್ಚಿನ ಗಮನ ನೀಡಬೇಕು. ವ್ಯಾಪಾರ ವರ್ಗದವರು ಚಿಂತನಶೀಲರಾಗಿ ಮುನ್ನಡೆಯಬೇಕಾಗುತ್ತದೆ. ಆತುರದಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ. ಆರೋಗ್ಯ ಸಾಮಾನ್ಯವಾಗಿರಲಿದೆ, ಕೆಲಸ ಕಾರ್ಯದಲ್ಲಿ ಮನೆಯ ಅಗತ್ಯಗಳನ್ನು ಮರೆಯಬಾರದು. ಯುವಕರಿಗೆ ಯಾವುದೋ ಒಂದು ಚಿಂತೆ ಬಾಧಿಸಲಿದೆ. ತಾಳ್ಮೆಯಿಂದಿರಿ.

ವೃಶ್ಚಿಕ ರಾಶಿ- ಕೆಲಸದಲ್ಲಿ ನಿಮಗೆ ನಿರೀಕ್ಷಿತ ಯಶಸ್ಸು ಸಿಗದಿದ್ದರೆ, ನಿಮ್ಮ ಮನಸ್ಸಿನ ಎಲ್ಲಾ ಚಿಂತೆಗಳನ್ನು ಹೊರಹಾಕಿ ಮತ್ತು ಹೊಸದಾಗಿ ಪ್ರಯತ್ನಿಸಿ. ನಿಮ್ಮ ಕೆಲಸಗಳು ಪೂರ್ಣಗೊಳ್ಳುವ ಲಕ್ಷಣಗಳು ನಿಮಗೆ ಗೋಚರಿಸಲಿವೆ. ಬ್ಯಾಂಕ್ ಉದ್ಯೋಗಿಗಳಿಗೆ ಲಾಭದ ಎಲ್ಲಾ ಸಾಧ್ಯತೆಗಳಿವೆ. ಪ್ರಗತಿಗೆ ಉತ್ತಮ ಅವಕಾಶಗಳನ್ನು ಸಹ ಪಡೆಯುವಿರಿ. ಈ ಅವಕಾಶಗಳ ಸದುಪಯೋಗ ಪಡೆದುಕೊಳ್ಳಿ. ಇಂದು ವ್ಯಾಪಾರ ವರ್ಗದವರು ವಿದೇಶಿ ವಸ್ತುಗಳ ವ್ಯಾಪಾರದಿಂದ ಉತ್ತಮ ಲಾಭ ಪಡೆಯುತ್ತಾರೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿರ್ಲಕ್ಷ್ಯತನ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಕುಟುಂಬ ಸದಸ್ಯರ ಜೊತೆಗೆ ಪೂಜೆ-ಅರ್ಚನೆಯಲ್ಲಿ ಭಾಗವಹಿಸಿ. ಧಾರ್ಮಿಕ ಯಾತ್ರೆಯ ಯೋಗವಿದೆ. ಸುತ್ತಲೂ ಕಸ ಸಂಗ್ರಹವಾಗಲು ಬಿಡಬೇಡಿ, ರೋಗಗಳು ಸಂಭವಿಸುವ ಸಾಧ್ಯತೆ ಇದೆ.

ಧನು ರಾಶಿ- ಕೋಪ ದೇಹ ಮತ್ತು ಮನಸ್ಸನ್ನು ಸುಡುತ್ತದೆ ಮತ್ತು ಛಾಯೆ ತಂಪು ನೀಡುತ್ತದೆ, ಹೀಗಾಗಿ ಇಂದು ನೀವು ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಬೇಕು ಮತ್ತು ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಬೇಕು, ಏಕೆಂದರೆ ಇಂದು ನೀವು ಅತಿಯಾದ ಕೋಪವನ್ನು ತೋರುವ ಸಾಧ್ಯತೆ ಇದೆ. ಇದು ನಿಮ್ಮನ್ನು ದುರದೃಷ್ಟದ ಆಳವಾದ ಪ್ರಪಾತಕ್ಕೆ ಕೊಂಡೊಯ್ಯಬಹುದು. ನಿಮ್ಮ ಶಕ್ತಿಯನ್ನು ಚೆನ್ನಾಗಿ ಬಳಸಿಕೊಳ್ಳಿ. ಕೋಪದಿಂದ ಅದನ್ನು ನಾಶ ಮಾಡಬೇಡಿ. ಪ್ರಚಾರ ಸಿಗುವ ಎಲ್ಲಾ ಸಾಧ್ಯತೆಗಳಿವೆ. ವಿರಾಮ ನೀಡಿದ ಕೆಲಸಗಳನ್ನು ಮಾಡಲು ಸಾಧ್ಯವಾಗಲಿದೆ, ವ್ಯಾಪಾರಿಗಳು ಸಕ್ರಿಯರಾಗಿರಬೇಕು. ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯರ ಸಲಹೆಯ ಮೇರೆಗೆ ಔಷಧಿಯನ್ನು ಸೇವಿಸಬೇಕು. ಖುದ್ದಾಗಿ ಯಾವುದೇ ಔಷಧಿಯನ್ನು ಟ್ರೈ ಮಾಡಬೇಡಿ. ಬಾಳ ಸಂಗಾತಿಗೆ  ದೈಹಿಕ ನೋವು ಇರುವ ಸಾಧ್ಯೆ ಇದೆ. ಸ್ಪರ್ಧೆಗೆ ತಯಾರಿ ನಡೆಸುವವರು ಕಠಿಣ ಪರಿಶ್ರಮ ಮಾಡಬೇಕು.

ಮಕರ ರಾಶಿ- ಇಂದು ನಿಮ್ಮ ಮನಸ್ಸು ಚಂಚಲವಾಗಿರಲಿದೆ. ಅದನ್ನು ನಿಯಂತ್ರಿಸದಿದ್ದರೆ ಅದು ನಿಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುಬಹುದು. ಮನಸ್ಸಿನ ದಿಗ್ಭ್ರಮೆಯಿಂದಾಗಿ ನೀವು ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಹೀಗಾಗಿ ನಿಮ್ಮ ನಿರ್ಧಾರಗಳಿಗೆ ಹಿರಿಯರ  ಅಭಿಪ್ರಾಯವನ್ನು ಸೇರಿಸುವುದು ಉತ್ತಮ. ವರ್ಗಾವಣೆಯಾಗುವ ಸಾಧ್ಯತೆ ಇದೆ. ಆರ್ಥಿಕ ದೃಷ್ಟಿಕೋನದಿಂದ ಇಂದು ಲಾಭದಾಯಕ ದಿನವಾಗಿದೆ, ನೀವು ಎಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ವೈದ್ಯರು ನಿಮಗೆ ಕೆಲ ಸಂಗತಿಗಳನ್ನು ತ್ಯಜಿಸಲು ಹೇಳಿದರೆ, ಅವರ ಸಲಹೆಯನ್ನು ಸಂಪೂರ್ಣವಾಗಿ ಅನುಸರಿಸಿ. ಮದುವೆಯಾಗ ಬಯಸುವ ಹುಡುಗರು ದೇವಿಯ ಆರಾಧನೆ ಕೈಗೊಳ್ಳಬೇಕು. ವಿವಾಹಿತರು ನಿಮ್ಮ ಮಗುವಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಮಗುವಿನ ಶಿಕ್ಷಣದತ್ತ ಗಮನ ಹರಿಸಿ, ಬಡವರಿಗೆ ಓದಲು ಸಹಾಯ ಮಾಡಿ.

ಕುಂಭ ರಾಶಿ- ಉಜ್ವಲ ಭವಿಷ್ಯಕ್ಕಾಗಿ ಹೊಸ ಯೋಜನೆಯನ್ನು ಮಾಡುತ್ತಿದ್ದರೆ, ಅದು ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಆ  ಕೆಲಸದಲ್ಲಿ ಹಿಂಜರಿಯಬೇಡಿ. ಇದು ನಿಮ್ಮ ಭವಿಷ್ಯಕ್ಕಾಗಿ ಹೊಸ ಮಾರ್ಗಗಳನ್ನು ತೆರೆಯಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ದಿನವು ಉತ್ತಮವಾಗಿದೆ, ನಿಮ್ಮ ಗ್ರಹಗಳು ಈ ನಿಟ್ಟಿನಲ್ಲಿ ಉತ್ತಮ ಮನಸ್ಥಿತಿಯಲ್ಲಿರುವಂತೆ ಗೋಚರಿಸುತ್ತಿವೆ ಕಾಣುತ್ತಿವೆ. ಹೃದ್ರೋಗಿಗಳು ಇಂದು ಬಹಳ ಎಚ್ಚರಿಕೆಯಿಂದ ಇದ್ರಬೇಕು. ಆತಂಕ ತಪ್ಪಿಸಬೇಕು. ನಿಮ್ಮನ್ನು ಅತಿಯಾಗಿ ಯೋಚಿಸುವಂತೆ ಮಾಡುವ ಯಾವುದೇ ವಿಷಯವನ್ನು ಚರ್ಚಿಸಬೇಡಿ. ವಯಸ್ಸಾದ ವ್ಯಕ್ತಿಯೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಸಮಾಜ ಬಾಂಧವರು, ಗಿಡ ಮರಗಳನ್ನು ನೆಟ್ಟರೆ ಉತ್ತಮ.

ಇದನ್ನೂ ಓದಿ-ಈ ದಿನದಂದು ಬದಲಾಗಲಿದೆ ನಾಲ್ಕು ರಾಶಿಯವರ ಅದೃಷ್ಟ : ಸೂರ್ಯ ಶುಕ್ರರು ಬೆಳಗಲಿದ್ದಾರೆ ಭವಿಷ್ಯ

ಮೀನ ರಾಶಿ- ಮನಸ್ಸು ಸಂತೋಷದಿಂದ ಕೂದಿರಲಿದೆ. ಲಾಭದ ಸಂಪೂರ್ಣ ಸಾಹ್ಯತೆ ಇದೆ. ಉದ್ಯೋಗಸ್ಥರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರೆಸಬೇಕು. ಏಕೆಂದರೆ ಪ್ರಗತಿಗೆ ದಾರಿಗಳು ತೆರೆದುಕೊಳ್ಳುತ್ತಿವೆ. ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುವ ಐಟಿ ಕ್ಷೇತ್ರದ ಯುವಕರು ಸ್ವಲ್ಪ ಹೆಚ್ಚು ಪರಿಶ್ರಮ ಪಡಬೇಕು. ಇಂದು ಅವರಿಗೆ ಯಶಸ್ಸಿನ ಸಂಪೂರ್ಣ ಸಾಮರ್ಥ್ಯ ಕಂಡುಬರಲಿದೆ. ಸ್ವಂತ ಶಕ್ತಿಯಿಂದ ವ್ಯಾಪಾರ ಮಾಡುವುದು ಕಷ್ಟವಾಗುತ್ತಿದ್ದರೆ, ಎಲ್ಲದರಲ್ಲೂ ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ, ನಮ್ರತೆಯನ್ನು ಕಾಪಾಡಿಕೊಳ್ಳಿ. ಸೌಮ್ಯವಾದ ಅನಾರೋಗ್ಯವಿದ್ದರೆ ವಿಶ್ರಮಿಸಬೇಡಿ, ಯೋಗ ಮಾಡಿ. ವಿವಾಹಕ್ಕೆ ಬಂದ ಮಕ್ಕಳ ವಿವಾಹದ ಕುರಿತು ಚರ್ಚೆ ನಡೆಸಬಹುದು. ಸಾಮಾಜಿಕ ಕಾರ್ಯಕ್ರಮಗಳಿಗೆ ಸಮಯ ನೀಡಬೇಕಾಗಬಹುದು.

ಇದನ್ನೂ ಓದಿ-Planet Retrograde 2022: ಮುಂದಿನ 108 ದಿನಗಳ ಕಾಲ ಈ ರಾಶಿಗಳ ಜನರಿಗೆ ಭಾರಿ ಧನಾಗಮನ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News