ಮುಂದಿನ ಮೂರು ತಿಂಗಳವರೆಗೆ ಈ ರಾಶಿಯವರನ್ನು ಇನ್ನಿಲ್ಲದಂತೆ ಕಾಡಲಿದ್ದಾನೆ ಮಂಗಳ

ಆಗಸ್ಟ್ 10 ರಂದು ಮಂಗಳನು ​​ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮಂಗಳ ಗ್ರಹದ ಈ ಸಂಕ್ರಮವು ಕೆಲವರಿಗೆ ಲಾಭದಾಯಕವಾಗಿದ್ದರೆ, ಇನ್ನು ಕೆಲವರಿಗೆ ಭಾರೀ ತೊಂದರೆ ನೀಡಲಿದೆ.  

Written by - Ranjitha R K | Last Updated : Aug 12, 2022, 01:41 PM IST
  • ಆಗಸ್ಟ್ 10 ರಂದು ಮಂಗಳ ಗ್ರಹದ ರಾಶಿ ಪರಿವರ್ತನೆ
  • ನಾಲ್ಕು ರಾಶಿಯವರಿಗೆ ಭಾರೀ ಕಷ್ಟ ನೀಡಲಿದ್ದಾನೆ ಮಂಗಳ
  • ಯಾವುದೇ ಕೆಲಸ ಮಾಡಿದರೂ ಕೈ ಸುಟ್ಟು ಹೋದೀತು
 ಮುಂದಿನ ಮೂರು ತಿಂಗಳವರೆಗೆ ಈ ರಾಶಿಯವರನ್ನು ಇನ್ನಿಲ್ಲದಂತೆ ಕಾಡಲಿದ್ದಾನೆ ಮಂಗಳ title=
Mangala gochara (file photo)

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಯಾವುದೇ ಒಂದು ಗ್ರಹವು ರಾಶಿಯನ್ನು  ಬದಲಾಯಿಸಿದಾಗ, ಅದರ ಶುಭ ಮತ್ತು ಅಶುಭ ಪರಿಣಾಮಗಳು ವ್ಯಕ್ತಿಯ ಜೀವನದ ಮೇಲೆ ಕಂಡುಬರುತ್ತವೆ. ಆಗಸ್ಟ್ 10 ರಂದು ಮಂಗಳ ಗ್ರಹವು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಿದೆ. ಮಂಗಳ ಸಂಚಾರದ ಪರಿಣಾಮವು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡುಬರುತ್ತದೆ. ಕೆಲವು ರಾಶಿಯವರ ಮೇಲೆ ಇದು ಶುಭ ಪರಿಣಾಮವನ್ನು ಬೀರಿದರೆ ಇನ್ನು ಕೆಲವು ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಕ ಈ ಕೆಳಗೆ ಹೇಳಲಾದ ರಾಶಿಯವರು ಮುಂದಿನ ಮೂರು  ತಿಂಗಳು ಅಂದರೆ ಅಕ್ಟೋಬರ್ 16 ರವರೆಗೆ ವಿಪರೀತ ಕಷ್ಟವನ್ನು ಅನುಭವಿಸಬೇಕಾಗುತ್ತದೆ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳ ಸಂಕ್ರಮಣವನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ.  ಕೆಲವು ರಾಶಿಯವರ ಜೀವನದ ಮೇಲೆ ಈ ಸಮಯವು ಕೆಟ್ಟ ಪರಿಣಾಮವನ್ನು ಬೀರಲಿದೆ. ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಕಂಡುಬರುತ್ತದೆ. ಜ್ಯೋತಿಷ್ಯದಲ್ಲಿ, ಮಂಗಳವನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಮಂಗಳವು ಮೇಷ ಮತ್ತು ವೃಶ್ಚಿಕ ರಾಶಿಯ  ಅಧಿಪತಿ ಗ್ರಹ ಕೂಡಾ ಹೌದು. ಮಂಗಳ ಗ್ರಹವು ಒಂದೇ ರಾಶಿಯಲ್ಲಿ 45 ದಿನಗಳವರೆಗೆ ಇರುತ್ತಾನೆ.  

ಇದನ್ನೂ ಓದಿ : ಈ ವಿಚಿತ್ರ ಕನಸುಗಳು ಶ್ರೀಮಂತರಾಗುವ, ಸಂತೋಷದ ವೈವಾಹಿಕ ಜೀವನದ ಸೂಚನೆಯಂತೆ!

ಮೇಷ ರಾಶಿ :  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯವರಿಗೆ ಈ ಸಮಯದಲ್ಲಿ ಅಪೇಕ್ಷಿತ ಫಲಿತಾಂಶಗಳು ಸಿಗುವುದಿಲ್ಲ. ಕೋಪ ಹೆಚ್ಚುತ್ತದೆ. ಈ ಕಾರಣದಿಂದಾಗಿ,ಯಾರೊಂದಿಗಾದರೂ ಜಗಳವಾಡಬಹುದು.  ಹಣಕ್ಕೆ ಸಂಬಂಧಿಸಿದಂತೆ ಪ್ರತಿಕೂಲ ಫಲಿತಾಂಶಗಳೇ ಗೋಚರಿಸಲಿದೆ.  ಈ ಸಮಯದಲ್ಲಿ, ವಿವಾಹಿತರಲ್ಲಿ ಅಹಂಕಾರವು ಹೆಚ್ಚಾಗುತ್ತದೆ. ಇದರ ಪರಿಣಾಮ ವೈವಾಹಿಕ ಜೀವನದ ಮೇಲೆ ಬೀಳಲಿದೆ. 

ಮಿಥುನ  : ಈ ಅವಧಿಯಲ್ಲಿ, ಮಿಥುನ ರಾಶಿಯ ಜನರು ಸಹೋದರ ಮತ್ತು ಸಹೋದರಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಆರೋಗ್ಯದ ಮೇಲೂ ಪರಿಣಾಮ ಕಂಡು ಬರಲಿದೆ.    ಆರೋಗ್ಯ ಹದಗೆಡಬಹುದು. ಗಂಭೀರ ಸಮಸ್ಯೆಗಳು ಕಾಡಬಹುದು. ಅದೇ ಸಮಯದಲ್ಲಿ, ಪತಿ ಮತ್ತು ಪತ್ನಿ ನಡುವೆ ಸಣ್ಣ ಸಣ್ಣ ವಿಚಾರಗಳಿಗೂ ಮನಸ್ತಾಪ ಉಂಟಾಗಬಹುದು.  

ತುಲಾ ರಾಶಿ  : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಮಯವು ಸವಾಲಿನದ್ದಾಗಿರುತ್ತದೆ. ನೀವು ಮಾನಸಿಕವಾಗಿ ಎದುರಿಸಲು ಸಿದ್ದವಗಿರದ ಕೆಲವು ಘಟನೆಗಳು ಘಟಿಸಬಹುದು. ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸುವಿರಿ. ಮುಂಬರುವ ಸಮಯದಲ್ಲಿ, ನೀವು ಮಾತು ಮತ್ತು  ಮಾತಿನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಇದೇ ಜಗಳಕ್ಕೆ ಕಾರಣವಾಗಬಹುದು. 

ಇದನ್ನೂ ಓದಿ :    ಜನ್ಮಾಷ್ಟಮಿಗೂ ಮುನ್ನ ಈ ನಾಲ್ಕು ರಾಶಿಯವರ ಮೇಲೆ ಸೂರ್ಯ ದೇವ ಹರಿಸಲಿದ್ದಾನೆ ಕೃಪಾ ಕಟಾಕ್ಷ

ಮೀನ  :  ಈ ರಾಶಿಯ ಜನರು 3 ತಿಂಗಳ ಕಾಲ ಸ್ವಲ್ಪ ಎಚ್ಚರದಿಂದಿರಬೇಕು. ವೆಚ್ಚಗಳನ್ನು ನಿಯಂತ್ರಿಸಿ. ಈ ಸಮಯದಲ್ಲಿ, ನೀವು ಹೆಚ್ಚು ಖರ್ಚು ಮಾಡಬಹುದು. ಅದರ ಪರಿಣಾಮವು ಆರ್ಥಿಕ ಪರಿಸ್ಥಿತಿಯ ಮೇಲೆ ಕಂಡುಬರುತ್ತದೆ. ಮಂಗಳ ಸಾಗಣೆಯು ಸಹೋದರನೊಂದಿಗಿನ ಸಂಬಂಧವನ್ನು ಹಾಳುಮಾಡುತ್ತದೆ. ಆದ್ದರಿಂದ ವ್ಯಕ್ತಿಯೊಂದಿಗೆ ಮಾತನಾಡುವಾಗ ಸಂಯಮದಿಂದ ವರ್ತಿಸಿ. ತಂದೆಯೊಂದಿಗಿನ ಸಂಬಂಧವು ಹದಗೆಡಬಹುದು. 

 ( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News