Morning Astro Tips: ಬ್ರಹ್ಮ ಮುಹೂರ್ತದಲ್ಲಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಜೀವನವೇ ಹಾಳಾದೀತು!!

Morning Astro Tips: ಧಾರ್ಮಿಕ ಗ್ರಂಥಗಳಲ್ಲಿ, ಬೆಳಿಗ್ಗೆ ಎದ್ದು ಒಳ್ಳೆಯ ಕೆಲಸ ಮಾಡಬೇಕೆಂದು ಹೇಳಲಾಗಿದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಮತ್ತು ವ್ಯಕ್ತಿಯ ದಿನ ಉತ್ತಮವಾಗಿರುತ್ತದೆ.  

Written by - Chetana Devarmani | Last Updated : Jun 13, 2022, 06:41 PM IST
  • ಕಣ್ಣು ತೆರೆದ ತಕ್ಷಣ ದೇವರ ದರ್ಶನ, ದೇವರಿಗೆ ನಮಸ್ಕಾರ ಮಾಡುವುದು, ಅಂಗೈಯನ್ನು ನೋಡುವುದು ಉತ್ತಮ
  • ಇತ್ಯಾದಿ ಶುಭ ಕಾರ್ಯಗಳಿಂದ ಮುಂಜಾನೆಯನ್ನು ಪ್ರಾರಂಭಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ
  • ಮುಂಜಾನೆ ಮಾಡುವ ಕೆಲಸ ವ್ಯಕ್ತಿಗೆ ಸಕಾರಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ
Morning Astro Tips: ಬ್ರಹ್ಮ ಮುಹೂರ್ತದಲ್ಲಿ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಜೀವನವೇ ಹಾಳಾದೀತು!!  title=
ಮುಂಜಾನೆ

Astro Tips For Early Morning: ಕಣ್ಣು ತೆರೆದ ತಕ್ಷಣ ದೇವರ ದರ್ಶನ, ದೇವರಿಗೆ ನಮಸ್ಕಾರ ಮಾಡುವುದು, ಅಂಗೈಯನ್ನು ನೋಡುವುದು ಇತ್ಯಾದಿ ಶುಭ ಕಾರ್ಯಗಳಿಂದ ಮುಂಜಾನೆಯನ್ನು ಪ್ರಾರಂಭಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮುಂಜಾನೆ ಮಾಡುವ ಕೆಲಸ ವ್ಯಕ್ತಿಗೆ ಸಕಾರಾತ್ಮಕತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ದಿನವಿಡೀ ಮನಸ್ಸನ್ನು ತಾಜಾವಾಗಿರಿಸಿಕೊಳ್ಳಲು ಸಹಾಯಕ. ಹಾಗಾಗಿ ಬೆಳಗ್ಗಿನ ಕಾರ್ಯಗಳಿಗೆ ವಿಶೇಷ ಒತ್ತು ನೀಡಲಾಗಿದೆ.

ಇದನ್ನೂ ಓದಿ: Tips to sleep better: ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕೆಂದರೆ ಈ ಟಿಪ್ಸ್ ಬಳಸಿ

ಬೆಳಗ್ಗೆ ಎದ್ದ ನಂತರ ಏನು ಮಾಡಬೇಕು, ಏನು ಮಾಡಬಾರದು ಈ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ವಿಷಯಗಳನ್ನು ಕಾಳಜಿ ವಹಿಸದಿದ್ದರೆ ಅಥವಾ ನಿರ್ಲಕ್ಷಿಸಿದರೆ, ಅವು ನಿಮ್ಮ ಇಡೀ ದಿನವನ್ನು ಹಾಳುಮಾಡಬಹುದು. ಬ್ರಹ್ಮ ಮುಹೂರ್ತದಲ್ಲಿ ಎದ್ದು ಯಾವ ಕಾರ್ಯಗಳನ್ನು ತಪ್ಪಿಸಬೇಕು ಎಂದು ತಿಳಿಯೋಣ.

ಬೆಳಗ್ಗೆ ಮರೆತೂ ಕೂಡ ಈ ಕೆಲಸ ಮಾಡಬೇಡಿ:

ಬೆಳಗ್ಗೆ ಕಣ್ಣು ತೆರೆದ ತಕ್ಷಣ ಕನ್ನಡಿ ನೋಡಬಾರದು ಎಂಬ ಧಾರ್ಮಿಕ ನಂಬಿಕೆ ಇದೆ. ನಿಮ್ಮ ಮುಖವನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ನೀವು ಮಲಗುವ ಸ್ಥಳದಲ್ಲಿ ಕಾಡು ಪ್ರಾಣಿಗಳ ಚಿತ್ರಗಳು ಇರಬಾರದು. ಕಣ್ಣು ತೆರೆದ ತಕ್ಷಣ ಕಾಡು ಪ್ರಾಣಿಗಳನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ವ್ಯಕ್ತಿಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ. ಅಲ್ಲದೆ, ಒಬ್ಬ ವ್ಯಕ್ತಿಯು ಯಾರೊಂದಿಗಾದರೂ ವಿವಾದಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.

ಬೆಳಿಗ್ಗೆ ತನ್ನ ನೆರಳನ್ನು ಸಹ ನೋಡಬಾರದು ಎಂದು ನಂಬಲಾಗಿದೆ. ಈ ರೀತಿ ಮಾಡುವುದರಿಂದ ಭಯ ಮತ್ತು ಒತ್ತಡ ಉಂಟಾಗಬಹುದು. ಹಾಗಾಗಿ ತಪ್ಪಿಯೂ ಬೆಳಗ್ಗೆ ಎದ್ದು ಈ ತಪ್ಪುಗಳನ್ನು ಮಾಡಬೇಡಿ. ಬೆಳಿಗ್ಗೆ ಕಣ್ಣು ತೆರೆದಾಗ ಮೊದಲು ದೇವರನ್ನು ನೋಡಬೇಕು. ಕೈಮುಗಿದು ನಮಸ್ಕರಿಸಿ. ಇದರ ನಂತರ, ನಿಮ್ಮ ಎರಡೂ ಅಂಗೈಗಳನ್ನು ನೋಡಿ.

ಅಂಗೈಗಳನ್ನು ನೋಡುತ್ತಾ ಈ ಮಂತ್ರವನ್ನು ಪಠಿಸಿ:

ʻಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯಮ ಸರಸ್ವತೀ

ಕರ ಮೂಲೇ ತು ಗೋವಿಂದಃ, ಪ್ರಭಾತೇ ಕರ ದರ್ಶನಂʼ

ಮುಂಜಾನೆ ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಹಸ್ತದ ಮುಂಗೈಯಲ್ಲಿ ಲಕ್ಷ್ಮಿ, ಮಧ್ಯದಲ್ಲಿ ಸರಸ್ವತಿ ಮತ್ತು ಮೂಲದಲ್ಲಿ ವಿಷ್ಣು ನೆಲೆಸಿದ್ದಾರೆ ಎಂದು ಶಾಸ್ತ್ರಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ, ಅಂಗೈಯ ದೃಷ್ಟಿ ಮಂಗಳಕರವೆಂದು ಪರಿಗಣಿಸಲಾಗಿದೆ.

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಇದನ್ನೂ ಓದಿ: Disha Patni: ದಿಶಾ ಪಟಾನಿ ಬಿಕಿನಿ ಲುಕ್‌ ಕಂಡು ಜೋರಾಯ್ತು ಯುವಕರ ಎದೆಬಡಿತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News