Vastu Tips: ಕಷ್ಟಪಟ್ಟು ಕೆಲಸ ಮಾಡಿದ್ರೂ ಕೈಯಲ್ಲಿ ಏನೂ ಉಳಿಯುತ್ತಿಲ್ಲವೇ? ಈ ಕೆಲಸ ಮಾಡಿ

ಕಷ್ಟಪಟ್ಟು ಕೆಲಸ ಮಾಡಿದರೂ ನಿಮ್ಮ ಜೀವನದಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆಯಾಗದಿದ್ದರೆ ಮತ್ತು ನೀವು ನಿರಂತರವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ದೊಡ್ಡ ತಲೆನೋವಾಗುತ್ತದೆ. ಇದಕ್ಕ ಉತ್ತಮ ಪರಿಹಾರ ಇಲ್ಲಿದೆ ನೋಡಿ.  

Written by - Puttaraj K Alur | Last Updated : Feb 25, 2023, 07:37 AM IST
  • ನೀವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೆ ನಾಗಕೇಸರ ಹೂವನ್ನು ಶಿವಲಿಂಗಕ್ಕೆ ಅರ್ಪಿಸಬೇಕು
  • ದಾರಿದ್ರ್ಯ ನಿವಾರಣೆಗೆ ಹಳದಿ ಬಟ್ಟೆಯಲ್ಲಿ ನಾಗಕೇಸರ ಕಾಳು, ತಾಮ್ರದ ತುಂಡು, ನಾಣ್ಯ & ಅಕ್ಕಿಯ ಕಾಳು ಕಟ್ಟಿಡಬೇಕು
  • ನಿಮ್ಮ ಕುಟುಂಬ ಆರ್ಥಿಕವಾಗಿ ಸಮೃದ್ಧವಾಗಲು ಶುಕ್ರವಾರ ನಾಗಕೇಸರ ಬೀಜಗಳೊಂದಿಗೆ 5 ನಾಣ್ಯಗಳನ್ನು ಪೂಜಿಸಬೇಕು
Vastu Tips: ಕಷ್ಟಪಟ್ಟು ಕೆಲಸ ಮಾಡಿದ್ರೂ ಕೈಯಲ್ಲಿ ಏನೂ ಉಳಿಯುತ್ತಿಲ್ಲವೇ? ಈ ಕೆಲಸ ಮಾಡಿ title=
ನಾಗಕೇಸರಿಯ ಅದ್ಭುತ ತಂತ್ರಗಳು

ನವದೆಹಲಿ: ತನ್ನ ಕುಟುಂಬದ ಒಳಿತಿಗಾಗಿ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾನೆ. ಇದಕ್ಕಾಗಿ ಅನೇಕ ತೊಂದರೆ ಮತ್ತು ಅವಮಾನ ಎದುರಿಸುತ್ತಾನೆ. ಹೀಗೆ ಕಷ್ಟಪಟ್ಟು ಶ‍್ರಮವಹಿಸಿ ಕೆಲಸ ಮಾಡಿದರೂ ಅಂದುಕೊಂಡ ಫಲಿತಾಂಶ ಸಿಗದೇ ಬಡತನದ ವಿಷವರ್ತುಲದಲ್ಲಿ ಸಿಕ್ಕಿ ಹಾಕಿಕೊಳ್ಳುವವರೇ ಅನೇಕರಿದ್ದಾರೆ. ಇಂತವರಿಗೆ ಜ್ಯೋತಿಷ್ಯವು ಅನೇಕ ಪರಿಣಾಮಕಾರಿ ಪರಿಹಾರಗಳನ್ನು ನೀಡಿದೆ. ಇಂದು ನಾವು ನಾಗಕೇಸರಿಗೆ ಸಂಬಂಧಿಸಿದ ಅಂತಹ 3 ಅದ್ಭುತ ತಂತ್ರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

ನಾಗಕೇಸರಿಯ ಅದ್ಭುತ ತಂತ್ರಗಳು    

ಶಿವಲಿಂಗಕ್ಕೆ ನಾಗಕೇಸರಿ ಹೂ ಅರ್ಪಿಸಿ: ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ನಾಗಕೇಸರ ಹೂವುಗಳನ್ನು ಸಂಗ್ರಹಿಸಿ ಮತ್ತು ಹುಣ್ಣಿಮೆಯ ದಿನದಂದು ಶಿವಲಿಂಗಕ್ಕೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಹಣದ ಹರಿವು ಹೆಚ್ಚುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳು ಕ್ರಮೇಣ ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: Panch Yog 2023: 5 ಮಹಾ ಯೋಗಗಳಿಂದ ಈ 4 ರಾಶಿಯ ಜೀವನದಲ್ಲಿ ಅದೃಷ್ಟ & ಸಮೃದ್ಧಿ ಹೆಚ್ಚಾಗುತ್ತದೆ

ಹೊಸ ಆದಾಯದ ಮೂಲ ಸಿಗುತ್ತದೆ: ಮನೆಯಲ್ಲಿನ ದಾರಿದ್ರ್ಯ ನಿವಾರಣೆಗೆ ಗುರುವಾರದಂದು ಹಳದಿ ಬಟ್ಟೆಯಲ್ಲಿ ನಾಗಕೇಸರ ಕಾಳುಗಳು, ತಾಮ್ರದ ತುಂಡು, ನಾಣ್ಯ, ಅರಿಶಿನ ಮುದ್ದೆ ಮತ್ತು ಅಕ್ಕಿಯ ಕಾಳುಗಳನ್ನು ಕಟ್ಟಿಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಬಳಿಕ ಅದನ್ನು ಹಣ ಇಡುವ ಜಾಗದಲ್ಲಿಡಬೇಕು. ಈ ಪರಿಹಾರದಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗುತ್ತದೆ.

ಮನೆಗೆ ಹಣದ ಹರಿವು ಹೆಚ್ಚಾಗುತ್ತದೆ: ನಿಮ್ಮ ಕುಟುಂಬವು ಆರ್ಥಿಕವಾಗಿ ಸಮೃದ್ಧವಾಗಲು, ಶುಕ್ರವಾರದಂದು ನಾಗಕೇಸರ ಬೀಜಗಳೊಂದಿಗೆ 5 ನಾಣ್ಯಗಳನ್ನು ಪೂಜಿಸಬೇಕು. ಇದರ ನಂತರ ಆ ಬೀಜಗಳು ಮತ್ತು ನಾಣ್ಯಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಬೋರ್ಡ್ನಲ್ಲಿ ಇರಿಸಬೇಕು. ಕೆಲವೇ ದಿನಗಳಲ್ಲಿ ನೀವು ಇದರ ಪವಾಡ ನೋಡುತ್ತೀರಿ. ಇದರಿಂದ ಹಣದ ಒಳಹರಿವು ವೇಗವಾಗಿ ಹೆಚ್ಚಾಗುತ್ತದೆ.

ಇದನ್ನೂ ಓದಿ: Today Horoscope: ಈ ರಾಶಿಯವರಿಗೆ ಆಕಸ್ಮಿಕ ಧನಲಾಭವಾಗಲಿದೆ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News