ಮೆಣಸಿನ ಕಾಯಿ ಮತ್ತು ನಿಂಬೆ ಹಣ್ಣು ಕಟ್ಟುವುದರ ಹಿಂದೆ ಮೌಢ್ಯ ಅಲ್ಲ ವೈಜ್ಞಾನಿಕ ಕಾರಣವೂ ಇದೆ

Hanging Lemon and Chillies:ನಿಂಬೆ ಮೆಣಸಿನಕಾಯಿಯನ್ನು ನೇತು ಹಾಕುವುದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳು ದೂರವಿಡುತ್ತದೆ ಎನ್ನುವ ನಂಬಿಕೆಯೇ ಈ ಆಚರಣೆಯ ಹಿಂದಿರುವ ನಂಬಿಕೆ. ಆದರೆ ಇದರ ಹೊರತಾಗಿ ಇನ್ನೊಂದು ಕಾರಣವಿದೆ.ಅದೇ  ವೈಜ್ಞಾನಿಕ ಕಾರಣ.   

Written by - Ranjitha R K | Last Updated : Jan 29, 2024, 04:17 PM IST
  • ನಾವು ಅನೇಕ ಸಂಪ್ರದಾಯಗಳನ್ನು ಅನುಸರಿಸುತ್ತೇವೆ.
  • ಇದು ಕೇವಲ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.
  • ವೈಜ್ಞಾನಿಕ ದೃಷ್ಟಿಕೋನದಿಂದಲೂ ಈ ಆಚರಣೆಗಳು ಬಹಳ ಉಪಯುಕ್ತವಾಗಿದೆ.
ಮೆಣಸಿನ ಕಾಯಿ ಮತ್ತು ನಿಂಬೆ ಹಣ್ಣು ಕಟ್ಟುವುದರ ಹಿಂದೆ ಮೌಢ್ಯ ಅಲ್ಲ ವೈಜ್ಞಾನಿಕ ಕಾರಣವೂ ಇದೆ  title=

Hanging Lemon and Chillies : ನಾವು ಅನೇಕ ಸಂಪ್ರದಾಯಗಳನ್ನು ಅನುಸರಿಸುತ್ತೇವೆ. ಇದು ಕೇವಲ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ವೈಜ್ಞಾನಿಕ ದೃಷ್ಟಿಕೋನದಿಂದಲೂ ಈ ಆಚರಣೆಗಳು ಬಹಳ ಉಪಯುಕ್ತವಾಗಿದೆ. ಆದರೆ ನಾವು ಅನುಸರಿಸುವ ಅದೆಷ್ಟೋ ಸಂಪ್ರದಾಯಗಳು, ಆಚರಣೆಗಳ ಹಿಂದಿರುವ ಈ ವೈಜ್ಞಾನಿಕ ಕಾರಣಗಳ ಬಗ್ಗೆ ನಮಗೆ ತಿಳಿದಿರುವುದೇ ಇಲ್ಲ. ಮನೆ, ವ್ಯಾಪಾರ ಮಾಡುವ ಸ್ಥಳ,  ಸಂಸ್ಥೆಗಳು ಮತ್ತು ವಾಹನಗಳ ಹೊರಗೆ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತುಹಾಕುವುದನ್ನು ನಾವು ಗಮನಿಸಿರುತ್ತೇವೆ. ಈ ಕ್ರಮವನ್ನು ನಾವು ಶತಮಾನಗಳಿಂದ ಅನುಸರಿಸಿಕೊಂಡು ಬಂದಿದ್ದೇವೆ. ಸಾಮಾನ್ಯವಾಗಿ ಈ ಕ್ರಮವನ್ನು ಜನರು  ಮೂಢನಂಬಿಕೆಯೊಂದಿಗೆ ಜೋಡಿಸುತ್ತಾರೆ. ನಿಂಬೆ ಮೆಣಸಿನಕಾಯಿಯನ್ನು ನೇತು ಹಾಕುವುದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಗಳು ದೂರವಿಡುತ್ತದೆ ಎನ್ನುವ ನಂಬಿಕೆಯೇ ಈ ಆಚರಣೆಯ ಹಿಂದಿರುವ ನಂಬಿಕೆ.   ಆದರೆ ಇದರ ಹೊರತಾಗಿ ಇನ್ನೊಂದು ಕಾರಣವಿದೆ.ಅದೇ  ವೈಜ್ಞಾನಿಕ ಕಾರಣ. 

ಪ್ರಗತಿಗೆ ಯಾವುದೇ ಅಡ್ಡಿಯಾಗಬಾರದು :
ನಿಂಬೆ ಮತ್ತು ಮೆಣಸಿನಕಾಯಿಯನ್ನು ಕಟ್ಟುವುದರಿಂದ ವ್ಯಾಪಾರ, ಮನೆ, ಕಾರು ಇತ್ಯಾದಿಗಳಿಗೆ ದುಷ್ಟ ಕಣ್ಣುಗಳು ಬಾಧಿಸುವುದಿಲ್ಲ ಎನ್ನುವ ನಂಬಿಕೆ ಹೆಚ್ಚು. ಪ್ರಗತಿ, ಸಂಪತ್ತು ಮತ್ತು ಸಮೃದ್ಧಿಯಲ್ಲಿ ಯಾವುದೇ ಅಡ್ಡಿಯಿರುವುದಿಲ್ಲ. ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು, ಜನರು ತಮ್ಮ ಮನೆ ಅಥವಾ ಅಂಗಡಿಯ ಮುಖ್ಯ ಬಾಗಿಲಿಗೆ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತುಹಾಕುತ್ತಾರೆ. ವೈಜ್ಞಾನಿಕ ದೃಷ್ಟಿಕೋನದಿಂದ, ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತು ಹಾಕುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. 

ಇದನ್ನೂ ಓದಿ : Ragi Vegetable Soup: ಆರೋಗ್ಯಕರ ರಾಗಿ ತರಕಾರಿ ಸೂಪ್ ಮಾಡುವುದು ಹೇಗೆ..? ತಿಳಿಯಿರಿ

ನಿಂಬೆ ಮೆಣಸು ನೇತಾಡುವ ಪ್ರಯೋಜನಗಳು :
ವೈಜ್ಞಾನಿಕ ದೃಷ್ಟಿಕೋನದಿಂದ, ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತು ಹಾಕುವುದರಿಂದ ಅನೇಕ ಪ್ರಯೋಜನಗಳಿವೆ. ನಿಂಬೆ ಒಂದು ಹುಳಿ ಪದಾರ್ಥವಾಗಿದ್ದರೆ  ಮೆಣಸಿನಕಾಯಿ ಮಸಾಲೆ. ನಿಂಬೆಯ ಹುಳಿ ಮತ್ತು ಮೆಣಸಿನಕಾಯಿಯ ಖಾರದಿಂದಾಗಿ, ಅದನ್ನು ಬಾಗಿಲಿಗೆ ನೇತುಹಾಕಿದಾಗ, ಅದರ ಹುಳಿ ಮತ್ತು ಕಟುವಾದ ವಾಸನೆಯ ಪರಿಣಾಮವಾಗಿ ನೊಣಗಳು, ಸೊಳ್ಳೆಗಳು ಮತ್ತು ಕೀಟಗಳನ್ನು ಪ್ರವೇಶಿಸದಂತೆ ತಡೆಯುತ್ತದೆ. ಈ ಮೂಲಕ ಮನೆ ಮಂದಿ ಅನೇಕ ರೀತಿಯ ರೋಗಗಳಿಂದ ದೂರವಿರುವುದು ಸಾಧ್ಯವಾಗುತ್ತದೆ. 

ಕೆಟ್ಟ ದೃಷ್ಟಿ ಬೀಳುವುದಿಲ್ಲ :
ಯಾರೇ ಆಗಲಿ ಹುಳಿ ನಿಂಬೆ ಮತ್ತು  ಖಾರ ಮೆಣಸಿನಕಾಯಿಯನ್ನು ನೋಡಿದ ತಕ್ಷಣ,  ಆ ವ್ಯಕ್ತಿ ಅದರ ರುಚಿಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಇದರಿಂದಾಗಿ ಆ ವ್ಯಕ್ತಿಯ  ಗಮನವು ವಿಚಲಿತಗೊಳ್ಳುತ್ತದೆ. ಈ ರೀತಿಯಾಗಿ ದುಷ್ಟ ಕಣ್ಣುಗಳಿರುವ ವ್ಯಕ್ತಿಯ ಏಕಾಗ್ರತೆಗೆ ತಪ್ಪುತ್ತದೆ. ಅದಕ್ಕಾಗಿಯೇ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತು ಹಾಕುವುದರಿಂದ ದುಷ್ಟ ಕಣ್ಣುಗಳು ಮನೆಯ ಮೇಲೆ ಬೀಳದಂತೆ ತಡೆಯುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : ಕಪ್ಪು ಮತ್ತು ದಪ್ಪ ಹುಬ್ಬುಗಳು ಬೇಕೇ..? ಈ ಸಲಹೆಗಳನ್ನು ಅನುಸರಿಸಿ

ನಿಂಬೆಯು ಸುತ್ತಮುತ್ತಲಿನ ಪರಿಸರಕ್ಕೆ ತಾಜಾತನವನ್ನು ನೀಡುತ್ತದೆ. ನಿಂಬೆ ಮೆಣಸಿನಕಾಯಿ ಕೀಟನಾಶಕ ಗುಣಗಳನ್ನು ಹೊಂದಿದ್ದು, ಇದು ಪರಿಸರವನ್ನು ಶುದ್ಧವಾಗಿಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News