New Year 2023: ಹೊಸ ವರ್ಷದಲ್ಲಿ ಭಾರಿ ಯಶಸ್ಸಿಗಾಗಿ ಹಸಿರು ಏಲಕ್ಕಿಯ ಈ ತಂತ್ರಗಳನ್ನು ಅನುಸರಿಸಿ

Green Cardamom Remedies: ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟಕ್ಕೂ ಕೂಡ ನೀವು ಮೆರಗು ನೀಡಲು ಬಯಸುತ್ತಿದ್ದರೆ, ಹಸಿರು ಏಲಕ್ಕಿಯ ಈ ತಂತ್ರಗಳು ನಿಮಗೆ ಸಹಕಾರಿಯಾಗಲಿವೆ. ಹಸಿರು ಏಲಕ್ಕಿಯ ಈ ಉಪಾಯಗಳು ಮನೆಯಿಂದ ಬಡತನವನ್ನು ಹೊಡೆದೋಡಿಸುತ್ತವೆ.  

Written by - Nitin Tabib | Last Updated : Dec 12, 2022, 05:17 PM IST
  • ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹಸಿರು ಏಲಕ್ಕಿಯ ಕೆಲವು ಖಚಿತವಾದ ಪರಿಹಾರಗಳು
  • ಮನೆಯಿಂದ ಬಡತನವನ್ನು ತೊಡೆದುಹಾಕಲು ಕೆಲಸ ಮಾಡುತ್ತವೆ.
  • ಈ ತಂತ್ರಗಳು ದಾರಿಯಲ್ಲಿ ಬರುವ ಅಡೆತಡೆಗಳನ್ನು ಸಹ ತೆಗೆದುಹಾಕುತ್ತವೆ.
New Year 2023: ಹೊಸ ವರ್ಷದಲ್ಲಿ ಭಾರಿ ಯಶಸ್ಸಿಗಾಗಿ ಹಸಿರು ಏಲಕ್ಕಿಯ ಈ ತಂತ್ರಗಳನ್ನು ಅನುಸರಿಸಿ title=
Green Cardamom Remedies

Cardamom Remedies For Year 2023: ಇಡೀ ವರ್ಷವನ್ನು ಸಮೃದ್ಧವಾಗಿಸಲು ಜನರು ವಿವಿಧ ಪರಿಹಾರಗಳು ಮತ್ತು ತಂತ್ರಗಳನ್ನು ಅನುಸರಿಸುತ್ತಾರೆ. ಹೀಗಾಗಿ ಒಂದು ವೇಳೆ ನಿಮ್ಮ ಜಾತಕದಲ್ಲಿಯೂ ಕೂಡ ಗ್ರಹಗಳ ಸ್ಥಾನಮಾನ ಸರಿಯಾಗಿಲ್ಲ ಎಂದಾದಲ್ಲಿ ಹೊಸ ವರ್ಷದಲ್ಲಿ ನೀವು ಜೋತಿಷ್ಯ ಶಾಸ್ತ್ರದ ಕೆಲ ಸಲಹೆಗಳನ್ನು ಅನುಸರಿಸಬಹುದು. ಈ ಸಲಹೆಗಳಲ್ಲಿ ಹಸಿರು ಏಳಕ್ಕಿಗೆ ಸಂಬಂಧಿಸಿದ ಪರಿಹಾರವೂ ಶಾಮೀಲಾಗಿದೆ. 

ಜ್ಯೋತಿಷ್ಯ  ಶಾಸ್ತ್ರದ ಪ್ರಕಾರ, ಹಸಿರು ಏಲಕ್ಕಿಯ ಈ ಪರಿಹಾರಗಳು ಗ್ರಹಗಳನ್ನು ಶಾಂತಗೊಳಿಸುತ್ತದೆ ಮತ್ತು ಬಲಪಡಿಸುತ್ತದೆ. ಸ್ವಲ್ಪ ಏಲಕ್ಕಿಯು ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದಲ್ಲದೆ, ಅದಕ್ಕೆ ಸಂಬಂಧಿಸಿದ ಜ್ಯೋತಿಷ್ಯ ಪರಿಹಾರಗಳು ಸಹ ವಿಶೇಷ ಪ್ರಯೋಜನಗಳನ್ನು ನೀಡುತ್ತವೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹಸಿರು ಏಲಕ್ಕಿಯ ಕೆಲವು ಖಚಿತವಾದ ಪರಿಹಾರಗಳು ಮನೆಯಿಂದ ಬಡತನವನ್ನು ತೊಡೆದುಹಾಕಲು ಕೆಲಸ ಮಾಡುತ್ತವೆ. ಈ ತಂತ್ರಗಳು ದಾರಿಯಲ್ಲಿ ಬರುವ ಅಡೆತಡೆಗಳನ್ನು ಸಹ ತೆಗೆದುಹಾಕುತ್ತವೆ. ಹೊಸ ವರ್ಷವನ್ನು ಸಂತೋಷಪಡಿಸಲು ನೀವು ಹಸಿರು ಏಲಕ್ಕಿಯನ್ನು ಹೇಗೆ ಬಳಸಬಹುದು ಎಂಬುದನ್ನು ನಮಗೆ ತಿಳಿಸಿ.

ಹಸಿರು ಏಲಕ್ಕಿಯ ಯಾವ ಉಪಾಯಗಳನ್ನು ಅನುಸರಿಸಬೇಕು?
>> ಕೆಲಸ ಕಾರ್ಯಗಳಲ್ಲಿ ತೊಂದರೆಗಳನನ್ನು ನಿವಾರಿಸಲು ಒಂದು ಲೋಟ ನೀರಿಗೆ ಎರಡು ಏಲಕ್ಕಿ ಹಾಕಿ ಕುದಿಸಿ. ಅದು ಅರ್ಧದಷ್ಟು ಬಂದು ನಿಂತ ಬಳಿಕ ಅದನ್ನು ಬಕೆಟ್ ಗೆ ಹಾಕಿ ಈ ನೀರಿನಿಂದ ಸ್ನಾನ ಮಾಡಿ. ಸ್ನಾನ ಮಾಡುವಾಗ ಓಂ ಜಯಂತಿ ಮಂಗಳ ಕಾಳಿ ಭದ್ರಕಾಳಿ ಮಂತ್ರವನ್ನು ಜಪಿಸಿ. ಏಲಕ್ಕಿಯ ಈ ವಿಶೇಷ ತಂತ್ರಗಳು ಶುಕ್ರನನ್ನು ಬಲಪಡಿಸುತ್ತವೆ ಮತ್ತು ಕೆಲಸದಲ್ಲಿ ಯಶಸ್ಸನ್ನು ತರುತ್ತವೆ.

>> ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದರೆ ಅಥವಾ ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದಾದಲ್ಲಿ, ನಿಮ್ಮ ಪರ್ಸ್‌ನಲ್ಲಿ 5 ಹಸಿರು ಏಲಕ್ಕಿಗಳನ್ನು ಇರಿಸಿ. ಹೀಗೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ ಮತ್ತು ಖರ್ಚು ಕಡಿಮೆಯಾಗುತ್ತದೆ. ಬಡವರಿಗೆ ನಾಣ್ಯವನ್ನು ದಾನ ಮಾಡಿ ಅವರಿಗೆ ಹಸಿರು ಏಲಕ್ಕಿಯನ್ನು ತಿನ್ನಿಸಿದರೆ ಬಡತನ ದೂರವಾಗುತ್ತದೆ.

>> ಐದು ಚಿಕ್ಕ ಹಸಿರು ಏಲಕ್ಕಿಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಗುರುವಾರ ಬಡವರಿಗೆ ದಾನ ಮಾಡಿ. ಕನಿಷ್ಠ ಐದು ಗುರುವಾರಗಳ ಕಾಲ ಈ ಪರಿಹಾರವನ್ನು ಮಾಡುವುದರಿಂದ ಇಷ್ಟಾರ್ಥ ನೆರವೇರುತ್ತದೆ.

>> ಒಂದು ಆಲದ ಎಲೆಯ ಮೇಲೆ ಐದು ಸಿಹಿತಿಂಡಿಗಳು ಮತ್ತು ಎರಡು ಏಲಕ್ಕಿಗಳನ್ನು ಹಾಕಿ ಮತ್ತು ಅದನ್ನು ಆಲದ ಮರದ ಕೆಳಗೆ ಇರಿಸಿ. ಮನೆಗೆ ಬರುವಾಗ ಹಿಂತಿರುಗಿ ನೋಡಬೇಡಿ. ಹೀಗೆ ಮಾಡುವುದರಿಂದ ಶಿಕ್ಷಣದಲ್ಲಿ ಯಶಸ್ಸು ಸಿಗುತ್ತದೆ.

ಇದನ್ನೂ ಓದಿ-Relationship Tips: ಒಂಟಿಯಾಗಿರುವುದು ಕೂಡ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಗೊತ್ತಾ?

>> ಉದ್ಯೋಗದಲ್ಲಿ ಪ್ರಗತಿ ಅಥವಾ ವ್ಯಾಪಾರದಲ್ಲಿನ ಯಶಸ್ಸಿಗೆ ಏಲಕ್ಕಿಯನ್ನು ಹಸಿರು ಬಟ್ಟೆಯಲ್ಲಿ ಕಟ್ಟಿ ದಿಂಬಿನ ಕೆಳಗೆ ಇಟ್ಟು ರಾತ್ರಿ ಮಲಗಬೇಕು. ಬೆಳಗ್ಗೆ ಹೊರಗಿನವರಿಗೆ ಆಹಾರ ನೀಡಿ. ಹೀಗೆ ಮಾಡುವುದರಿಂದ ಶೀಘ್ರದಲ್ಲೇ ಯಶಸ್ಸು ಸಿಗುತ್ತದೆ.

ಇದನ್ನೂ ಓದಿ-Vastu Tips: ಜಾತಕದಲ್ಲಿನ ರಾಹು, ಕೇತು ಹಾಗೂ ಶನಿ ದೋಷದಿಂದ ಮುಕ್ತಿ ಪಡೆಯಲು ಈ ಉಪಾಯ ಅನುಸರಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News