Vastu Tips: ದುಂದುವೆಚ್ಚದಿಂದ ನೀವೂ ತೊದರೆಗೀಡಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ

Oriental Arborvitae - ವಾಸ್ತು ಶಾಸ್ತ್ರದ ಪ್ರಕಾರ, ಸಸ್ಯಗಳು ಧನಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಮನೆಯಲ್ಲಿ ಹಣದ ಸ್ಥಾನವನ್ನು ಬಲಪಡಿಸಲು ಕೆಲವು ಸಸ್ಯಗಳನ್ನು ನೆಡಲಾಗುತ್ತದೆ. ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ, ಮನೆಯಲ್ಲಿ ಸಂತೋಷದ ಜೊತೆಗೆ, ಹಣಕಾಸಿನ ಸ್ಥಿತಿಯೂ ಕೂಡ ಸುಧಾರಿಸುತ್ತದೆ.  

Written by - Nitin Tabib | Last Updated : Mar 19, 2022, 08:10 PM IST
  • ಪುರಾಣಗಳಲ್ಲಿ ಗಿಡ-ಸಸ್ಯಗಳನ್ನು ಪೂಜಿಸುವ ಕುರಿತು ಉಲ್ಲೇಖಿಸಲಾಗಿದೆ
  • ದುಂದುವೆಚ್ಚವನ್ನು ನಿಯಂತ್ರಿಸುತ್ತದೆ ಈ ಗಿಡ
  • ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯಾಗುತ್ತದೆ
Vastu Tips: ದುಂದುವೆಚ್ಚದಿಂದ ನೀವೂ ತೊದರೆಗೀಡಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ title=
Vastu Tips(File Photo)

ನವದೆಹಲಿ: ಭೌತಿಕ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಹಣಗಳಿಕೆ ಮಾಡಿ, ಶ್ರೀಮಂತನಾಗಲು ಹಾತೊರೆಯುತ್ತಾನೆ. ಆದರೆ ಶ್ರೀಮಂತರಾಗಲು ಕಠಿಣ ಪರಿಶ್ರಮ ಮತ್ತು ಅದೃಷ್ಟದ ಜೊತೆಗೆ ಬುದ್ಧಿವಂತಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮರಗಳು ಮತ್ತು ಸಸ್ಯಗಳ ಪೂಜೆಯನ್ನು ವೇದ-ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ಇದಲ್ಲದೆ, ವೈದಿಕ ಜ್ಯೋತಿಷ್ಯ (Astrology) ಮತ್ತು ವಾಸ್ತುಶಾಸ್ತ್ರದಲ್ಲಿ (Vastu Shastra) ಕೆಲವು ವಿಶೇಷ ಮರಗಳು ಮತ್ತು ಸಸ್ಯಗಳನ್ನು ಉಲ್ಲೇಖಿಸಲಾಗಿದೆ, ಅವುಗಳನ್ನು ಮನೆಯಲ್ಲಿ ನೆಡುವುದರಿಂದ ಅದೃಷ್ಟವನ್ನು ಬದಲಾಯಿಸಬಹುದು. Oriental Arborvitae  ಅಥವಾ ಮಯೂರ್ಪಂಖಿ (Morpankhi Plant) ಎಂದೇ ಕರೆಯಲಾಗುವ ಸಸ್ಯವು ಅವುಗಳಲ್ಲಿ ಒಂದು.

ಹಣ ಹರಿದು ಬರುತ್ತದೆ (Vastu Tips For Wealth) 
ತಾಯಿ ಸರಸ್ವತಿಯ (Goddess Saraswati) ಕೃಪೆಯಿಲ್ಲದೆ ಮನೆಯಲ್ಲಿ ಲಕ್ಷ್ಮಿಯ (Goddess Lakshmi) ಆಗಮನ ಸಾಧ್ಯವಿಲ್ಲ ಎಂದು ವಾಸ್ತು ಶಾಸ್ತ್ರದ ತಜ್ಞರು ನಂಬುತ್ತಾರೆ. ಒಬ್ಬ ವ್ಯಕ್ತಿಯು ಬುದ್ಧಿವಂತಿಕೆಯಿಂದ ಮಾತ್ರ ಶ್ರೀಮಂತನಾಗುತ್ತಾನೆ. ವಾಸ್ತವದಲ್ಲಿ ಈ ಸಸ್ಯವು ಬುದ್ಧಿವಂತಿಕೆಯನ್ನು ನೀಡುತ್ತದೆ. ಈ ಸಸ್ಯದ ಹೆಸರು ಮಯೂರ್ಪಂಖಿ. ಇದನ್ನು ಈ ವಿದ್ಯೆಯ ಸಸ್ಯ ಎಂದೂ ಕರೆಯುತ್ತಾರೆ. ಮನೆಯಲ್ಲಿ ಈ ಗಿಡ ನೆಟ್ಟರೆ ಹಣಕಾಸಿನ ಹರಿವು ನಿರಂತರವಾಗಿ ಉಳಿಯುತ್ತದೆ. ಈ ಸಸ್ಯವನ್ನು ಎಲ್ಲಿ ನೆಡಲಾಗುತ್ತದೆಯೋ, ಅಲ್ಲಿ ಹಣ ಹರಿದುಬರುತ್ತಲೇ ಇರುತ್ತದೆ ಎಂದು ನಂಬಲಾಗಿದೆ. ತಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಿ, ಮನೆಯಲ್ಲಿ ನಿರಂತರವಾಗಿ ಹಣ ಬರುತ್ತಲೇ ಇರಬೇಕು ಎನ್ನುವ ಕಾರಣಕ್ಕೆ ಶ್ರೀಮಂತರು ತಮ್ಮ ಮನೆಯಲ್ಲಿ ಈ ಸಸ್ಯವನ್ನು (Mayurpankh Plant) ನೆಡುತ್ತಾರೆ.

ಇದನ್ನೂ ಓದಿ-Skin care: ಬೇಸಿಗೆಯಲ್ಲಿ ಉಂಟಾಗುವ ಒಣ ತ್ವಚೆಗೆ ಶಾಶ್ವತ ಪರಿಹಾರ ಬೇಕಾ..?

ನವಿಲು ಗರಿ ಅಥವಾ ಮೊರ್ಪಂಖಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು (Vastu Tips For Prosperity)
ವಾಸ್ತು ಶಾಸ್ತ್ರದ (Vastu Tips For Money) ಪ್ರಕಾರ ಈ ಗಿಡವನ್ನು ಉತ್ತರ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕನ್ನು ಬುದ್ಧಿವಂತಿಕೆಯ ನಿರ್ದೇಶಕ ದಿಕ್ಕು ಎಂದು ಕರೆಯಲಾಗುತ್ತದೆ. ನೀವು ಈ ಸಸ್ಯವನ್ನು ಮಡಕೆಯಲ್ಲಿ ನೆಟ್ಟರೆ, ಉತ್ತರ ದಿಕ್ಕನ್ನು ಬಳಸುವುದು ಉತ್ತಮ. ಇದನ್ನು ಮಾಡುವುದರಿಂದ ಕ್ರಮೇಣ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ. ಇದೇ ವೇಳೆ ಇದು ಅನಾವಶ್ಯಕ ಅಥವಾ ದುಂದು ವೆಚ್ಚವನ್ನು ತೊಡೆದುಹಾಕುತ್ತದೆ.

ಇದನ್ನೂ ಓದಿ-Astrology : ಮನೆಯಿಂದ ಹೊರ ಹೋಗುವಾಗ ಈ ಪ್ರಾಣಿಗಳು ಕಂಡರೆ ಅದೃಷ್ಟದ ಸಂಕೇತ!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-ಭಾಗ್ಯದ ಒಡೆಯರಾಗಿರುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು..! ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News