ಮರೆಯಲಾಗದ ನೆನಪು ಅಪ್ಪು : ಯವರತ್ನನನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ವೈರಲ್‌..!

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಕನ್ನಡಿಗರ ಹೃದಯ ಸಾಮ್ರಾಟ. ಇಡಿ ಕರುನಾಡಿನ ಜನತೆ ಅಪ್ಪು ಅವರನ್ನು ಮೆನೆಯ ಮಗನಂತೆ ನೋಡ್ತಾರೆ. ಅಪ್ಪು ಇಲ್ಲ ಎಂದು ಹೇಳಲಾಗದು ವೀರ ಕನ್ನಡಿಗ ಕನ್ನಡ ಭಾಷೆಯ ಒಂದೊಂದು ಅಕ್ಷಗಳಲ್ಲಿಯೂ ಸದಾ ಅಮರ. ಸದ್ಯ ಅಪ್ಪು ಅವರನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

Written by - Krishna N K | Last Updated : Nov 19, 2022, 09:20 AM IST
  • ಯವರತ್ನನನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ವೈರಲ್‌
  • ಗಂಧದಗುಡಿ ಶೂಟಿಂಗ್‌ ವೇಳೆ ನಡೆದ ದೃಶ್ಯದ ವಿಡಿಯೋ
  • ಅಪ್ಪು ಅವರನ್ನು ಕಣ್ತುಂಬಿಕೊಂಡು ಮುದ್ದಾಡಿದ ಅಜ್ಜಿ
ಮರೆಯಲಾಗದ ನೆನಪು ಅಪ್ಪು : ಯವರತ್ನನನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ವೈರಲ್‌..! title=

Puneeth Rajkumar : ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಕನ್ನಡಿಗರ ಹೃದಯ ಸಾಮ್ರಾಟ. ಇಡಿ ಕರುನಾಡಿನ ಜನತೆ ಅಪ್ಪು ಅವರನ್ನು ಮೆನೆಯ ಮಗನಂತೆ ನೋಡ್ತಾರೆ. ಅಪ್ಪು ಇಲ್ಲ ಎಂದು ಹೇಳಲಾಗದು ವೀರ ಕನ್ನಡಿಗ ಕನ್ನಡ ಭಾಷೆಯ ಒಂದೊಂದು ಅಕ್ಷಗಳಲ್ಲಿಯೂ ಸದಾ ಅಮರ. ಸದ್ಯ ಅಪ್ಪು ಅವರನ್ನು ಅಜ್ಜಿಯೊಬ್ಬರು ಮುದ್ದಾಡಿದ್ದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಅಭಿಮಾನಿಗಳೇ ನಮ್ಮ ಮನೆಯ ದೇವರು ಅಂತ ತಮ್ಮ ನೆಚ್ಚಿನ ಫ್ಯಾನ್ಸ್‌ಗಳನ್ನು ಸದಾ ನಗುಮೊಗದಿಂದ ಮಾತನಾಡಿಸುವ ಅಪ್ಪುವಿನ ಸರಳತೆಯೇ ಅವರನ್ನು ಯುವರತ್ನನನ್ನಾಗಿ ಮಾಡಿದ್ದು. ಅಭಿಮಾನಿಗಳಿಗೆ ಮತ್ತು ದೊಡ್ಮನೆಗೆ ವಿಶೇಷ ಬಂಧ. ರಾಜ್‌ಕುಮಾರ್‌ ಕುಟುಂಬವನ್ನು ಕನ್ನಡಿಗರು ತಮ್ಮ ಕುಟುಂಬವೇ ಎಂದು ಭಾವಿಸಿದ್ದಾರೆ. ಇನ್ನು ಇದಕ್ಕೆ ಸಾಕ್ಷಿ ಎಂಬಂತೆ ಪುನೀತ್‌ಪರ್ವದಲ್ಲಿ ಜಮಾಯಿಸಿದ್ದ ಜನ. ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರ ಕರೆಗೆ ಓಗೊಟ್ಟು ಅಭಿಮಾನಿಗಳು ಸಾಗರ ಸಾಗರವಾಗಿ ಸಾಗಿ ಬಂದಿದ್ದರು.

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ʼಕಾಂತಾರʼದ ಗುಳಿಗ-ಪಂಜುರ್ಲಿಯ ದಂತಕತೆ ಅಲ್ಲ

ಸದ್ಯ ವೈರಲ್‌ ಆದ ವಿಡಿಯೋ ಹೊಸಪೇಟೆ ಭಾಗದಲ್ಲಿ ಗಂಧದಗುಡಿ ಶೂಟಿಂಗ್‌ಗೆ ತೆರಳಿದ್ದಾಗ ಅಲ್ಲಿ ಅಜ್ಜಿಯೊಬ್ಬರು ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಣ್ತುಂಬಿಕೊಂಡು ʼಪುನೀತ್‌ ಎನಪ್ಪಾ ನೀನುʼ ಎಂದು ತನ್ನ ಪೊರೆಗಟ್ಟಿದ ಕಣ್ಣಿನಿಂದ ನೋಡಿ ಮುದ್ದಾಡಿದ್ದ ದೃಶ್ಯ ವಿಡಿಯೋದಲ್ಲಿದೆ. ಹೌದು.. ಆಗಲೇ ನಾನು ಹೇಳಿದಂತೆ ಇದು ದೊಡ್ಮನೆ ಮತ್ತು ಅಭಿಮಾನಿಗಳಿಗೆ ಇರುವ ಸಂಬಂಧ. ಇಂತಹ ಬಂಧವನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಇನ್ನು ಅಪ್ಪು ಅವರಿಗೆ ಉತ್ತರ ಕರ್ನಾಟಕ ಅಂದ್ರೆ, ಅಲ್ಲಿನ ಜನರ ಪ್ರೀತಿ, ಮಾತು, ಊಟ ತುಂಬಾ ಇಷ್ಟ ಗಂಧದಗುಡಿಯಲ್ಲಿ ಸ್ವತಃ ಅಪ್ಪು ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ.

 

ಇನ್ನು ಅಪ್ಪು ಅಭಿನಯದ ಗಂಧದಗುಡಿ ಬಿಡುಗಡೆಯಾಗಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಈ ಡ್ಯಾಕುಮೆಂಟರಿಯಲ್ಲಿ ಅಪ್ಪುವನ್ನು ಅಪ್ಪುವಾಗಿಯೇ ನೋಡಿದ ಜನರು ಸರಳತೆಯ ಸಾಹುಕಾರನ ಸ್ಮೈಲ್‌ಗೆ ಫಿದಾ ಆಗಿದ್ದಾರೆ. ಅಪ್ಪು ಜೀವಿಸಿರುವ ಗಂಧದಗುಡಿ ನೋಡಿದ ಜನ ಅಪ್ಪು ನೀವು ಇರಬೇಕಿತ್ತು ಈ ಯಶಸ್ಸನ್ನು ಕೊಂಡಾಡಲು ಎಂದು ಹೇಳಿದ್ದರು. ಆದ್ರೆ ಅಪ್ಪು ದೈಹಿಕವಾಗಿ ನಮ್ಮ ನಡುವೆ ಇಲ್ಲ ಅಂದ್ರೂ ಕನ್ನಡಿಗರ ಹೃದಯದಲ್ಲಿ ಅವರು ಸದಾ ಅಮರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News