80 ಲಕ್ಷ ಲಾಟರಿ ಬಹುಮಾನ ಗೆದ್ದ; ಮರುದಿನವೇ ದುರಂತ ಅಂತ್ಯ ಕಂಡ ಯುವಕ!

Kerala state lottery: ಪೊಲೀಸರ ಮಾಹಿತಿ ಪ್ರಕಾರ, ಸಾವಿಗೂ ಹಿಂದಿನ ದಿನ ಸಂಜೀವ್ 80 ಲಕ್ಷ ರೂ. ಲಾಟರಿ ಗೆದ್ದಿದ್ದರು. ಮರುದಿನವೇ ಅವರ ಖಾತೆಗೆ ದೊಡ್ಡ ಮೊತ್ತದ ಹಣ ಬಂದಿದೆ.

Written by - Puttaraj K Alur | Last Updated : Apr 4, 2023, 03:53 PM IST
  • ಕೇರಳ ಲಾಟರಿಯಲ್ಲಿ 80 ಲಕ್ಷ ರೂ. ಬಹುಮಾನ ಗೆದ್ದಿದ್ದ ಯುವಕ
  • ಮದ್ಯದ ಪಾರ್ಟಿ ವೇಳೆ ಮಣ್ಣಿನ ದಿಬ್ಬದಿಂದ ಬಿದ್ದು ಯುವಕ ದುರಂತ ಅಂತ್ಯ
  • ಲಾಟರಿ ಗೆದ್ದ ಖುಷಿಯಲ್ಲಿ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದ ಸಂಜೀವ್
80 ಲಕ್ಷ ಲಾಟರಿ ಬಹುಮಾನ ಗೆದ್ದ; ಮರುದಿನವೇ ದುರಂತ ಅಂತ್ಯ ಕಂಡ ಯುವಕ! title=
ದುರಂತ ಅಂತ್ಯ ಕಂಡ ಯುವಕ!

ನವದೆಹಲಿ: ಆತ ಬರೋಬ್ಬರಿ 80 ಲಕ್ಷ ರೂ. ಲಾಟರಿ ಬಹುಮಾನ ಗೆದ್ದಿದ್ದ.. ಆದರೆ ಮರುದಿನವೇ ಆತ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಕೇರಳದ ಪಂಗೋಡೆಯಲ್ಲಿ ನಡೆದಿದೆ. 80 ಲಕ್ಷ ರೂ. ಗೆದ್ದ ಖುಷಿಯಲ್ಲಿರಬೇಕಾದ ಯುವಕನ ಜೀವನ ದುರಂತ ಅಂತ್ಯ ಕಂಡಿದೆ.

ಪಂಗೋಡೆ ಮೂಲದ ಸಜೀವ್​ (35) ಮೃತ ಯುವಕನಾಗಿದ್ದಾನೆ. ಸ್ನೇಹಿತರ ಜೊತೆ ಸೇರಿ ಮದ್ಯದ ಪಾರ್ಟಿ ನಡೆಸುತ್ತಿದ್ದ ವೇಳ ಮಣ್ಣಿನ ದಿಬ್ಬದಿಂದ ಬಿದ್ದು ಸಂಜೀವ್ ಸಾವನ್ನಪ್ಪಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಪೊಲೀಸರ ಮಾಹಿತಿ ಪ್ರಕಾರ, ಸಾವಿಗೂ ಹಿಂದಿನ ದಿನ ಸಂಜೀವ್ 80 ಲಕ್ಷ ರೂ. ಲಾಟರಿ ಗೆದ್ದಿದ್ದರು. ಮರುದಿನವೇ ಅವರ ಖಾತೆಗೆ ದೊಡ್ಡ ಮೊತ್ತದ ಹಣ ಬಂದಿದೆ. ಇದರ ಖುಷಿಯಲ್ಲಿಯೇ ಸಂಜೀವ್ ಏಪ್ರಿಲ್​ 1ರ ರಾತ್ರಿ ಪಾಂಗೋಡೆಯ ಚಂತಕ್ಕುನ್ನುನಲ್ಲಿರುವ ಸ್ನೇಹಿತನ ಬಾಡಿಗೆ ಮನೆಯಲ್ಲಿ ಮದ್ಯದ ಪಾರ್ಟಿ ಆಯೋಜಿಸಿದ್ದ. ಈ ವೇಳೆ ಆತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

ಪಾರ್ಟಿ ವೇಳೆ ಸಂಜೀವ್‍ನನ್ನು ಆತನ ಸ್ನೇಹಿತ ಸಂತೋಷ್ ಮಣ್ಣಿನ ದಿಬ್ಬದಿಂದ ಕೆಳಗೆ ತಳ್ಳಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಸಂಜೀವ್‍ನನ್ನು ಪಂಗೋಡೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆತ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಪಂಗೋಡೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಇದನ್ನೂ ಓದಿ: Couple Lip Kiss In Delhi Metro : ಮೆಟ್ರೋದಲ್ಲಿ ಎಲ್ಲರೆದುರೇ ಲಿಪ್‌ ಲಾಕ್‌.. ಪಬ್ಲಿಕ್‌ನಲ್ಲಿ ಪ್ರೇಮಿಗಳ ರೊಮ್ಯಾನ್ಸ್ ವಿಡಿಯೋ ವೈರಲ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News