Chiru's Death Anniversary: ಚಿರು ಸರ್ಜಾ ಫೋಟೋಗೆ ಮುತ್ತು ಇಟ್ಟು, ಹೂ ಹಾಕಿ ನಮಿಸಿದ ರಾಯನ್ ರಾಜ್ ಸರ್ಜಾ!

Chiranjeevi Sarja Death Anniversary: ಚಿರಂಜೀವಿ ಸರ್ಜಾರವರನ್ನು ಕಳೆದುಕೊಂಡು ಇಂದಿಗೆ ಮೂರು ವರ್ಷ ಕಳೆದಿದೆ. ಆದರೆ ಅವರ ನೆನಪು ಇನ್ನು ಮಾಸಿಲ್ಲ. ಇಂದು (ಜೂನ್ 7) ಚಿರಂಜೀವಿ ಅವರ ಪುಣ್ಯತಿಥಿ ಹಿನ್ನಲೆ ಸರ್ಜಾ ಕುಟುಂಬ ಚಿರು ಸಮಾದಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.  

Written by - Zee Kannada News Desk | Last Updated : Jun 7, 2023, 04:13 PM IST
  • ಚಿರು ಸರ್ಜಾ ಫೋಟೋಗೆ ಮುತ್ತು ಇಟ್ಟು, ಹೂ ಹಾಕಿ ನಮಿಸಿದ ರಾಯನ್ ರಾಜ್ ಸರ್ಜಾ
  • ಚಿರಂಜೀವಿ ಸರ್ಜಾರವರನ್ನು ಕಳೆದುಕೊಂಡು ಇಂದಿಗೆ ಮೂರು ವರ್ಷ
  • ಚಿರು ಫೋಟೊಕ್ಕೆ ಕುಟುಂಬ ಸಮೇತರಾಗಿ ಪುಷ್ಪಾರ್ಚನೆ
Chiru's Death Anniversary: ಚಿರು ಸರ್ಜಾ ಫೋಟೋಗೆ ಮುತ್ತು ಇಟ್ಟು, ಹೂ ಹಾಕಿ ನಮಿಸಿದ ರಾಯನ್ ರಾಜ್ ಸರ್ಜಾ! title=

ಬೆಂಗಳೂರು: ಚಿರಂಜೀವಿ ಸರ್ಜಾರವರನ್ನು ಕಳೆದುಕೊಂಡು ಇಂದಿಗೆ ಮೂರು ವರ್ಷ ಕಳೆದಿದೆ. ಆದರೆ ಅವರ ನೆನಪು ಇನ್ನು ಮಾಸಿಲ್ಲ. ಇಂದು (ಜೂನ್ 7) ಚಿರಂಜೀವಿ ಅವರ ಪುಣ್ಯತಿಥಿ ಹಿನ್ನಲೆ ಸರ್ಜಾ ಕುಟುಂಬ ಚಿರು ಸಮಾದಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.

ಸಮಾಧಿಯಲ್ಲಿ ಚಿರು ಫೋಟೊಕ್ಕೆ ಕುಟುಂಬ ಸಮೇತರಾಗಿ ಮಾಲರ್ಪಾಣೆ ಹಾಗೂ ಪುಷ್ಪರ್ಚಾನೆ ಮಾಡಿ ಪೂಜೆ ಸಲ್ಲಿಸಿದ್ದರು. ಆ ವೇಳೆ  ಚಿರು ಪೋಟೋಕೆ ಮುದ್ದಿನ ಮಗ ರಾಯನ್‌ ಸರ್ಜಾ,  ಹೂ ಹಾಕಿ ಮುತ್ತಿಕ್ಕಿ ತಂದೆ ಪೋಟೋಕ್ಕೆ ನಮಿಸಿದ್ದಾನೆ. 

ಇದನ್ನೂ ಓದಿ: Mouni Restaurant: ಹೇ ʼಬದ್ಮಾಶ್ʼ ನಾನು ಬೈಲಿಲ್ಲ ಕಂಡ್ರಿ ; ಇದು ಮೌನಿ ರಾಯ್ ರೆಸ್ಟೋರೆಂಟ್ !

ವಾಯು ಪುತ್ರ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ, ಚಿರು ಸಿನಿಮಾದಲ್ಲಿ ನಟಿಸಿ ಎಲ್ಲರ ಪ್ರೀತಿಗೆ ಕಾರಣವಾದರು. ಆದರೆ ಎರಡನೇ ಅಲೆ ಕೋವಿಡ್‌ ಸಂದರ್ಭದಲ್ಲಿ ಹೃದಯಘಾತದಿಂದ ಚಿರು ಸರ್ಜಾ ಕುಟುಂಬಸ್ಥರನ್ನು ಮಾತ್ರವಲ್ಲದೇ ಚಿತ್ರ ರಂಗ ಸ್ನೇಹಿತರು, ಅವರನ್ನು ಪ್ರೀತಿಸವ ನೂರಾರು ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದರು.

ಆದರೆ ಚಿರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದೇ ಹೋದರೂ, ಮಂದಹಾಸದ ನಗುವಿನ ಮೂಲಕ, ನೂರಾರೂ ನೆನಪುಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚುಳಿದಿದ್ದಾರೆ. ಅವರನ್ನು ಕಳೆದುಕೊಂಡಿರುವ ನೋವು ಎಂದಿಗೂ ಕಡಿಮೆ ಆಗುವಂಥದ್ದಲ್ಲ.

 

Trending News