Om Raut kisses Kriti: ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!

Om Raut kisses Kriti Sanon in Tirupati temple: ಆದಿಪುರುಷ ನಿರ್ದೇಶಕ ಓಂ ರಾವುತ್ ಮತ್ತು ಕೃತಿ ಸನೋನ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಬ್ಬರೂ ದೇವಾಲಯದ ಆವರಣದ ಹೊರಗೆ ವಿದಾಯ ಹೇಳುತ್ತಿರುವುದನ್ನು ನೋಡಬಹುದು. ಆದರೆ ಈ ವೇಳೆ ಕಿಸ್‌ ಕೊಟ್ಟು ಪೇಚಿಗೆ ಸಿಲುಕಿದ್ದಾರೆ. 

Written by - Chetana Devarmani | Last Updated : Jun 7, 2023, 04:22 PM IST
  • ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ಓಂ ರಾವುತ್
  • ಆದಿಪುರುಷ ನಿರ್ದೇಶಕ ಓಂ ರಾವುತ್
  • ದೇವಸ್ಥಾನದಲ್ಲಿ ಕಿಸ್‌ ಕೊಟ್ಟ ನಿರ್ದೇಶಕ
Om Raut kisses Kriti: ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!   title=
Om Raut kisses Kriti Sanon

Om Raut kisses Kriti Sanon: ಪ್ರಭಾಸ್, ಕೃತಿ ಸನೋನ್, ಸನ್ನಿ ಸಿಂಗ್, ಓಂ ರಾವುತ್ ಸೇರಿದಂತೆ ಆದಿಪುರುಷ ಸಿನಿಮಾದ ಸಂಪೂರ್ಣ ತಂಡ ನಿನ್ನೆ ರಾತ್ರಿ ತಿರುಪತಿಯಲ್ಲಿ ನಡೆದ ಅದ್ಭುತ ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿತ್ತು. ಚಿತ್ರದ ಅಂತಿಮ ಟ್ರೇಲರ್ ಅನ್ನು ನಿನ್ನೆ ಬಿಡುಗಡೆ ಮಾಡಲಾಯಿತು.

ಈ ಹಿನ್ನೆಲೆ ಇಂದು (ಜೂನ್ 7 ರಂದು)  ಆದಿಪುರುಷ ನಿರ್ದೇಶಕ ಓಂ ರಾವುತ್ ಮತ್ತು ಕೃತಿ ಸನೋನ್ ಒಟ್ಟಿಗೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ, ದೇವಾಲಯದ ಆವರಣದ ಹೊರಗೆ ಕೃತಿಗೆ ವಿದಾಯ ಹೇಳಿದ ನಂತರ ಈ ವಿವಾದ ಭುಗಿಲೆದ್ದಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಯಿತು. ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ಇದರ ವಿರುದ್ಧ ಕಾಮೆಂಟ್ ಮಾಡಿದ್ದರು. ಆದರೆ ಕೆಲ ಹೊತ್ತಿನ ನಂತರ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ. 

BJP Leader Tweet

ಇದನ್ನೂ ಓದಿ: ಕುತೂಹಲ ಹೆಚ್ಚಿಸಿದೆ ʼಆದಿಪುರುಷ್‌ʼ 2ನೇ ಟ್ರೈಲರ್‌; ಒಂದೂವರೆ ಕೋಟಿ ವೀಕ್ಷಣೆ

ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ಓಂ ರಾವುತ್ : 

ಆದಿಪುರುಷ ಚಿತ್ರ ತಂಡವು ಜೂನ್ 6 ರಂದು ತಿರುಮಲದಲ್ಲಿ ಚಿತ್ರದ ಅಂತಿಮ ಟ್ರೇಲರ್ ಅನ್ನು ಅನಾವರಣಗೊಳಿಸಿತು. ಆ ಬಳಿಕ ಇಂದು ಬೆಳಗ್ಗೆ ನಿರ್ದೇಶಕ ಓಂ ರಾವುತ್ ಮತ್ತು ಕೃತಿ ಸನೋನ್ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ನಿರ್ದೇಶಕ ಓಂ ರಾವುತ್ ಅವರು ನಟಿ ಕೃತಿ ಸನೋನ್‌ ಅವರನ್ನು ಅಲ್ಲಿಂದ ಕಳುಹಿಸಿ ಕೊಡುವಾಗ, ಅವರ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ದೇವಾಲಯದ ಆವರಣದಲ್ಲಿ ಈ ವರ್ತನೆ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ಇದರ ವಿರುದ್ಧ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದರು. ಸಾರ್ವಜನಿಕವಾಗಿ ಈ ರೀತಿ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕ, ಇದು ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದರು. ಇದೀಗ ಆ ಟ್ವೀಟ್ ಡಿಲೀಟ್ ಆಗಿದೆ.

 

 

ಕೃತಿ ಸನೋನ್ ಮತ್ತು ಓಂ ರಾವುತ್ ಜೂನ್ 7 ರಂದು ಬೆಳಿಗ್ಗೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ದರ್ಶನದ ನಂತರ, ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡರು ಮತ್ತು ಓಂ ರಾವುತ್ ಕೃತಿಯ ಕೆನ್ನೆಗೆ ಕಿಸ್‌ ಕೊಟ್ಟಯ ಬೈ ಹೇಳಿದರು. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದ್ದು, ಕೆಲವರ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ: ಮಗುವನ್ನು ಕಳೆದುಕೊಂಡ 5 ಬಾಲಿವುಡ್ ಸುಂದರಿಯರು ಇವರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News