ಅರಿಶಿಣ ಔಷಧ.. ಆದರೆ..! ನಿಮ್ಮಲ್ಲಿ ಈ ಸಮಸ್ಯೆಗಳಿದ್ದರೆ ಅದರಿಂದ ದೂರವಿರಿ

Turmeric health benefits : ಅರಿಶಿಣವನ್ನು ಆಯುರ್ವೇದದ ನಿಧಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವ ಜನರು ಅರಿಶಿನವನ್ನು ಸೇವಿಸುವ ಮುನ್ನ ಜಾಗರೂಕರಾಗಿರಬೇಕು. 

Written by - Krishna N K | Last Updated : Jun 9, 2023, 03:05 PM IST
  • ಆಯುರ್ವೇದದ ನಿಧಿ ಎಂದು ಕರೆಯಲಾಗುವ ಅರಿಶಿಣ ನಮ್ಮ ಅಡುಗೆಮನೆಯಲ್ಲಿ ಹೆಚ್ಚು ಬಳಸುವ ಮಸಾಲೆ ಪದಾರ್ಥ.
  • ಅರಿಶಿನವು ಎಲ್ಲರಿಗೂ ಒಂದೇ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುವುದಿಲ್ಲ.
  • ಕೆಲವು ಸಮಸ್ಯೆಗಳಿಂದ ಬಳಲುವವರು ಅರಿಶಿಣ ಸೇವಿಸುವುದರಿಂದ ಅವರ ಆರೋಗ್ಯವು ಹದಗೆಡಬಹುದು.
ಅರಿಶಿಣ ಔಷಧ.. ಆದರೆ..! ನಿಮ್ಮಲ್ಲಿ ಈ ಸಮಸ್ಯೆಗಳಿದ್ದರೆ ಅದರಿಂದ ದೂರವಿರಿ title=

Turmeric side effects : ಆಯುರ್ವೇದದ ನಿಧಿ ಎಂದು ಕರೆಯಲಾಗುವ ಅರಿಶಿಣ ನಮ್ಮ ಅಡುಗೆಮನೆಯಲ್ಲಿ ಹೆಚ್ಚು ಬಳಸುವ ಮಸಾಲೆ ಪದಾರ್ಥ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅರಿಶಿಣದ ಔಷಧೀಯ ಗುಣಗಳಿಂದಾಗಿ, ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ಸೇವಿಸುವಂತೆ ಶಿಫಾರಸು ಮಾಡುತ್ತಾರೆ.

ಆದರೆ, ಅರಿಶಿಣವು ಎಲ್ಲರಿಗೂ ಒಂದೇ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುವುದಿಲ್ಲ. ಕೆಲವು ಸಮಸ್ಯೆಗಳಿಂದ ಬಳಲುವವರು ಅರಿಶಿಣ ಸೇವಿಸುವುದರಿಂದ ಅವರ ಆರೋಗ್ಯವು ಹದಗೆಡಬಹುದು. ಯಾವ ಜನರು ಹೆಚ್ಚು ಅರಿಶಿನವನ್ನು ಸೇವಿಸಬಾರದು ಎಂದು ಈ ಕೆಳಗೆ ನೀಡಲಾಗಿದೆ. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: ತಾಯ್ತನಕ್ಕಾಗಿ ಹಂಬಲಿಸುವವರಿಗೆ ವರದಾನವಂತೆ ಈ ಅಕ್ಕಿ ! ಮಕ್ಕಳಿಲ್ಲದವರು ಒಮ್ಮೆ ಟ್ರೈ ಮಾಡಿ ನೋಡಿ

ಅರಿಶಿಣವು ಅದ್ಭುತವಾದ ಆರೋಗ್ಯವನ್ನು ನೀಡುವ ನೈಸರ್ಗಿಕ ಔಷಧಿಗುಣವುಳ್ಳ ಗಡ್ಡೆ. ಅರಿಶಿಣವು ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ, ಇದು ಅನೇಕ ಔಷಧೀಯ ಪ್ರಯೋಜನಗಳನ್ನು ಹೊಂದಿದೆ. ನೋವನ್ನು ನಿವಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಇದು ತುಂಬಾ ಪರಿಣಾಮಕಾರಿಯಾಗಿದೆ. ಆದಾಗ್ಯೂ, ಹೆಚ್ಚು ಅರಿಶಿನವನ್ನು ಸೇವಿಸುವುದು ಕೆಲವು ಆರೋಗ್ಯ ಸಮಸ್ಯೆಗಳಿರುವ ಜನರಿಗೆ ಹಾನಿಕಾರಕವಾಗಿದೆ. ಕೆಲವು ಆರೋಗ್ಯ ಸಮಸ್ಯೆ ಇರುವವರು ಅರಿಶಿನವನ್ನು ಸೇವಿಸುವಾಗ ತುಂಬಾ ಜಾಗರೂಕರಾಗಿರಬೇಕು. 

1. ಮಧುಮೇಹಿಗಳು : ಮಧುಮೇಹ ಹೊಂದಿರುವ ಜನರು ಸಾಮಾನ್ಯವಾಗಿ ತಮ್ಮ ರಕ್ತವನ್ನು ತೆಳುಗೊಳಿಸುವ ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಜೊತೆಗೆ ಅವರ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಮಧುಮೇಹಿಗಳು ಅರಿಶಿಣವನ್ನು ಅತಿಯಾಗಿ ಸೇವಿಸಿದರೆ, ಅವರ ದೇಹದಲ್ಲಿನ ರಕ್ತದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆಯಿದೆ, ಇದು ದೇಹಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ: Health Tips:ಫ್ಯಾಟಿ ಲೀವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಹಾರಗಳು ವರದಾನಕ್ಕೆ ಸಮ!

2. ಕಾಮಾಲೆ ರೋಗಿಗಳು : ಈ ರೋಗದಿಂದ ಬಳಲುತ್ತಿರುವವರು ಆದಷ್ಟು ದೂರವಿರಬೇಕು. ನೀವು ಅರಿಶಿನ ತಿನ್ನಲು ಬಯಸಿದರೆ, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಏಕೆಂದರೆ ಹೆಚ್ಚು ಅರಿಶಿನವನ್ನು ತಿನ್ನುವುದರಿಂದ ಸೀರಮ್ ಬೈಲಿರುಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಜಾಂಡೀಸ್‌ನಿಂದ ಚೇತರಿಸಿಕೊಂಡ ನಂತರವೂ, ಅರಿಶಿಣ ಸೇವನೆಯ ಬಗ್ಗೆ ಯಾವುದೇ ನಿರ್ಧಾರವನ್ನು ವೈದ್ಯರನ್ನು ಸಂಪರ್ಕಿಸಿದ ನಂತರ ತೆಗೆದುಕೊಳ್ಳುವುದು ಒಳ್ಳೆಯದು.

3. ಪಿತ್ತಗಲ್ಲು ರೋಗಿಗಳು : ಪಿತ್ತಕೋಶದ ಕಲ್ಲು ಬಹಳ ಜಟಿಲವಾದ ಕಾಯಿಲೆಯಾಗಿದ್ದು, ಈ ಸಮಸ್ಯೆಯನ್ನು ಎದುರಿಸುತ್ತಿರುವವರು ಸಾಕಷ್ಟು ನೋವನ್ನು ಎದುರಿಸಬೇಕಾಗುತ್ತದೆ, ಈ ಸಂದರ್ಭದಲ್ಲಿ, ಅರಿಶಿಣ ಸೇವನೆಯನ್ನು ಕಡಿಮೆ ಮಾಡಿ, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು. ಪದೇ ಪದೇ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿಣವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.

ಇದನ್ನೂ ಓದಿ: ಮೆದುಳು ಕ್ಯಾನ್ಸರ್ ವಿರುದ್ಧದ ಸಮರ; ಭಾರತದಲ್ಲಿ ಶೀಘ್ರ ಪತ್ತೆಮಾಡಬೇಕಾದ ತುರ್ತು ಅಗತ್ಯ

4. ಅಪಾರ ರಕ್ತಸ್ರಾವ ಹೊಂದಿರುವ ರೋಗಿಗಳು : ಮೂಗಿನಿಂದ ಅಥವಾ ದೇಹದ ಯಾವುದೇ ಭಾಗದಿಂದ ರಕ್ತಸ್ರಾವದ ಸಮಸ್ಯೆ ಎದುರಿಸುವ ರೋಗಿಗಳು ಅರಿಶಿಣ ಸೇವನೆಯನ್ನು ಕಡಿಮೆ ಮಾಡಬೇಕು, ಇಲ್ಲದಿದ್ದರೆ ಹೆಚ್ಚು ರಕ್ತಸ್ರಾವ ಉಂಟಾಗುತ್ತದೆ. ಅಲ್ಲದೆ, ದೇಹದಲ್ಲಿ ರಕ್ತಹೀನತೆಯನ್ನು ಉಂಟುಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News