200 ವರ್ಷಗಳ ನಂತರ ರಕ್ಷಾಬಂಧನದ ದಿನ ಅಪರೂಪದ ಯೋಗ ! ಈ ರಾಶಿಯವರ ಜೀವನದಲ್ಲಿ ಧನಾಗಮನ

200 ವರ್ಷಗಳ ನಂತರ ರಕ್ಷಾಬಂಧನದ ದಿನ ಅತ್ಯಂತ ಅಪರೂಪದ ಬುಧಾದಿತ್ಯ ಯೋಗ, ರವಿ ಯೋಗ ಮತ್ತು ಶತಭಿಷಾ ನಕ್ಷತ್ರದ ಸಂಯೋಜನೆ ರೂಪುಗೊಳ್ಳುತ್ತಿದೆ. ಈ ಅಪರೂಪದ  ಸಂಯೋಗಗಳು 3 ರಾಶಿಯವರ ಅದೃಷ್ಟವನ್ನು ಬೆಳಗಲಿದೆ.   

Written by - Ranjitha R K | Last Updated : Aug 24, 2023, 10:18 AM IST
  • ರಕ್ಷಾ ಬಂಧನ ಹಬ್ಬಕ್ಕೆ ಒಂದು ವಾರ ಮಾತ್ರ ಉಳಿದಿದೆ.
  • ಎರಡು ದಿನಗಳ ಕಾಲ ಅಂದರೆ ಆಗಸ್ಟ್ 30 ಮತ್ತು 31 ರಂದು ಆಚರಿಸಲಾಗುತ್ತದೆ.
  • 3 ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ
200 ವರ್ಷಗಳ ನಂತರ ರಕ್ಷಾಬಂಧನದ ದಿನ ಅಪರೂಪದ ಯೋಗ ! ಈ  ರಾಶಿಯವರ ಜೀವನದಲ್ಲಿ ಧನಾಗಮನ  title=

ಬೆಂಗಳೂರು : ಸಹೋದರ-ಸಹೋದರಿ ವಾತ್ಸಲ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬಕ್ಕೆ ಒಂದು ವಾರ ಮಾತ್ರ ಉಳಿದಿದೆ. ಈ ವರ್ಷ ಭದ್ರಾ ಕಾರಣ, ಈ ಹಬ್ಬವನ್ನು ಎರಡು ದಿನಗಳ ಕಾಲ ಅಂದರೆ ಆಗಸ್ಟ್ 30 ಮತ್ತು 31 ರಂದು ಆಚರಿಸಲಾಗುತ್ತದೆ. 200 ವರ್ಷಗಳ ನಂತರ ರಕ್ಷಾಬಂಧನದ ದಿನ ಅತ್ಯಂತ ಅಪರೂಪದ ಬುಧಾದಿತ್ಯ ಯೋಗ, ರವಿ ಯೋಗ ಮತ್ತು ಶತಭಿಷಾ ನಕ್ಷತ್ರದ ಸಂಯೋಜನೆ ರೂಪುಗೊಳ್ಳುತ್ತಿದೆ. ಈ ಅಪರೂಪದ  ಸಂಯೋಗಗಳು 3 ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಜ್ಯೋತಿಷಿಗಳ ಪ್ರಕಾರ, ಈ 3 ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ಎಲ್ಲಾ ದಿಕ್ಕುಗಳಿಂದಲೂ ಲಾಭ ಗಳಿಸುವ ಸಾಮರ್ಥ್ಯ ಒದಗಿ ಬರಲಿದೆ. 

ಈ ರಾಶಿಗಳ ಮೇಲೆ ರಕ್ಷಾ ಬಂಧನ 2023 ರ ಶುಭ ಪರಿಣಾಮಗಳು : 
ಧನು ರಾಶಿ :
ಈ ಬಾರಿಯ ರಕ್ಷಾ ಬಂಧನವು ನಿಮಗೆ ತುಂಬಾ ಸಿಹಿಯಾಗಿರಲಿದೆ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಒಗ್ಗಟ್ಟು ಬಲವಾಗಿರುತ್ತದೆ. ಸಂಬಳದ ಹೊರತಾಗಿ, ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ : ಮಂಗಳ-ಕೇತು ಯುತಿ: ಈ 4 ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ

ಸಿಂಹ ರಾಶಿ : 
ಈ ರಕ್ಷಾಬಂಧನ ನಿಮ್ಮ ಅದೃಷ್ಟವನ್ನು ತೆರೆಯುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದವು ನಿಮ್ಮ ಮೇಲೆ  ಇರುತ್ತದೆ. ಇದ್ದಕ್ಕಿದ್ದಂತೆ ನಿಮಗೆ ತಿಳಿಯದ ಮೂಲದಿಂದ ಹಣ ಬರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಹಬ್ಬವು  ಅದ್ಭುತವಾಗಿರಲಿದೆ. ಈ ಸಮಯದಲ್ಲಿ ಹೊಸ ಹೂಡಿಕೆಗೆ ನಿರ್ಧರಿಸುತ್ತೀರಿ.  ಅದು ಭವಿಷ್ಯದಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. 

ಮಿಥುನ ರಾಶಿ :
ರಕ್ಷಾಬಂಧನದಂದು ಸಂಭವಿಸಿದ ಅಪರೂಪದ ಯೋಗದಿಂದಾಗಿ ಜೀವನದಿಂದ ಹಣಕಾಸಿನ ಬಿಕ್ಕಟ್ಟು ಕೊನೆಗೊಳ್ಳಬಹುದು. ಹಠಾತ್ ಆಗುವ ಹಣದ ಲಾಭದ ಕಾರಣದಿಂದಾಗಿ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಕಂಡು ಬರಲಿದೆ. ಮೊದಲಿಗಿಂತ ಹೆಚ್ಚು ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ರಕ್ಷಾ ಬಂಧನದ ದಿನದಿಂದ  ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ರಿಯಲ್ ಎಸ್ಟೇಟ್‌ನಿಂದಲೂ ಆರ್ಥಿಕ ಲಾಭವಾಗುವುದು. 

ಇದನ್ನೂ ಓದಿ : ಈ ರಾಶಿಗಳ ಮೇಲೆ ಸಿರಿ-ಸಂಪತ್ತಿನ ಮಳೆ ಹರಿಸಲಿದ್ದಾನೆ ಸೂರ್ಯದೇವ: ಮುಂದಿನ 30 ದಿನ ಹಣ, ಪ್ರಗತಿ, ಖ್ಯಾತಿಗಿರಲ್ಲ ಎಳ್ಳಷ್ಟೂ ಬರ!

( ಸೂಚನೆ :  ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News