ಕುಬೇರ ಯೋಗದ ಮೂಲಕ ಸಿರಿವಂತರಾಗುತ್ತಾರೆ ಈ ರಾಶಿಯವರು ! ಸಂಪತ್ತಿನೊಡೆಯ ಹರಿಸುತ್ತಾನೆ ಹಣದ ಹೊಳೆ

ಈ ಸಮಯದಲ್ಲಿ ಶುಕ್ರನು ಸಿಂಹ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಜನರ ಆರ್ಥಿಕ ಸ್ಥಿತಿ ಮತ್ತು ಪ್ರೀತಿಯ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತಾನೆ. ಮತ್ತೊಂದೆಡೆ, ಹಿಮ್ಮುಖ ಶುಕ್ರನು ಮೂರು ರಾಶಿಯವರ ಜೀವನದ ಸಂತೋಷ ಮತ್ತು ಅದೃಷ್ಟ ಹೆಚ್ಚಿಸುತ್ತದೆ.

Written by - Ranjitha R K | Last Updated : Aug 26, 2023, 12:40 PM IST
  • ಶುಕ್ರ ಗ್ರಹವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
  • ಶುಕ್ರನು ಅಪಾರ ಸಂಪತ್ತು, ಐಶ್ವರ್ಯ ಕರುಣಿಸುತ್ತಾನೆ.
  • ಹಿಮ್ಮುಖ ಶುಕ್ರನು ಲಾಭವನ್ನು ನೀಡುತ್ತಾನೆ
ಕುಬೇರ ಯೋಗದ ಮೂಲಕ ಸಿರಿವಂತರಾಗುತ್ತಾರೆ ಈ ರಾಶಿಯವರು ! ಸಂಪತ್ತಿನೊಡೆಯ ಹರಿಸುತ್ತಾನೆ ಹಣದ ಹೊಳೆ  title=

ಬೆಂಗಳೂರು : ಶುಕ್ರ ಗ್ರಹವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಉತ್ಕೃಷ್ಟ ಶುಕ್ರನು ಅಪಾರ ಸಂಪತ್ತು, ಐಶ್ವರ್ಯ ಮತ್ತು ಆಕರ್ಷಕ ವ್ಯಕ್ತಿತ್ವವನ್ನು ಕರುಣಿಸುತ್ತಾನೆ. ಜಾತಕದಲ್ಲಿ ಶುಭ ಶುಕ್ರನನ್ನು ಹೊಂದಿರುವ ಜನರು, ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಅವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಶುಕ್ರನು ಸಿಂಹ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಜನರ ಆರ್ಥಿಕ ಸ್ಥಿತಿ ಮತ್ತು ಪ್ರೀತಿಯ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತಾನೆ. ಮತ್ತೊಂದೆಡೆ, ಹಿಮ್ಮುಖ ಶುಕ್ರನು ಮೂರು ರಾಶಿಯವರ ಜೀವನದ ಸಂತೋಷ ಮತ್ತು ಅದೃಷ್ಟ ಹೆಚ್ಚಿಸುತ್ತದೆ. 

ಹಿಮ್ಮುಖ ಶುಕ್ರನು ಲಾಭವನ್ನು ನೀಡುತ್ತಾನೆ  : 
ವೃಷಭ ರಾಶಿ : ಹಿಮ್ಮುಖ ಶುಕ್ರನು ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತಾನೆ. ಶುಕ್ರನು ವೃಷಭ ರಾಶಿಯ ಅಧಿಪತಿ ಮತ್ತು ಈ ರಾಶಿಯವರ ಮೇಲೆ  ಯಾವಾಗಲೂ ದಯೆ ತೋರುತ್ತಾನೆ. ಈ ರಾಶಿಯವರು ಭೂಮಿ, ಕಟ್ಟಡ, ವಾಹನದ ಸುಖವನ್ನು ಪಡೆಯುತ್ತಾರೆ. ಜೀವನದಲ್ಲಿ ಪ್ರಗತಿಯಾಗುವುದು. ಈ ರಾಶಿಯವರು ಐಷಾರಾಮಿ ಜೀವನವನ್ನು ನಡೆಸುವರು. ಇವರ ಪ್ರೇಮ ಜೀವನ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಇದನ್ನೂ ಓದಿ : Hindu Gods: ಹಿಂದೂ ಧರ್ಮದಲ್ಲಿ ನಿಜವಾಗಿಯೂ 33 ಕೋಟಿ ದೇವತೆಗಳು ಇದ್ದಾರೆಯೇ?

ಮಿಥುನ ರಾಶಿ: ಹಿಮ್ಮುಖ ಶುಕ್ರನು ಮಿಥುನ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತಾನೆ. ಈ ರಾಶಿಯವರ ಅದೃಷ್ಟ ಬೆಳಗುವುದು.  ಮಾಡುವ ಕೆಲಸವು ಯಶಸ್ವಿಯಾಗಲು ಪ್ರಾರಂಭಿಸುತ್ತದೆ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತದೆ. ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತದೆ.  ಬಡ್ತಿ ಸಿಗುವ ಸಾಧ್ಯತೆಗಳಿವೆ. ಮನಸ್ಸಿನ ನೆಮ್ಮದಿ ಹೆಚ್ಚುತ್ತದೆ. ಆದಾಯ ಹೆಚ್ಚಾಗಬಹುದು. 
 
ಧನು ರಾಶಿ: ಶುಕ್ರನ ಹಿಮ್ಮುಖ ಚಲನೆಯು ಧನು ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಅದೃಷ್ಟ ಕೈ ಹಿಡಿಯಲಿದೆ. ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಕೆಲಸ ಕಾರ್ಯಗಳು ಸರಿಯಾಗಿ ಸಾಗುತ್ತದೆ. ಮಗುವಿನಿಂದ ಹೆಚ್ಚು ಲಾಭವನ್ನು ಪಡೆಯುತ್ತೀರಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಬುದ್ಧಿವಂತಿಕೆಯ ಬಲದ ಮೇಲೆ ಕೆಲಸ ಮಾಡುವಿರಿ. ವೃತ್ತಿಜೀವನದಲ್ಲಿ ಮುನ್ನಡೆಯಲು ಉತ್ತಮ ಅವಕಾಶವಿದೆ. 

ಇದನ್ನೂ ಓದಿ ವರ್ಗೋತ್ತಮಗೊಂಡ ಶನಿದೇವನಿಂದ ಕುಬೇರಾರಗುವರು ಈ ರಾಶಿಯವರು… ಉನ್ನತಿ-ಪ್ರಗತಿಯ ಪರ್ವ, ಇವರಿಗಿದೆ ಶನಿಕೃಪೆ

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News