Fake ₹500 notes: ₹500 ಮುಖಬೆಲೆಯ ನಕಲಿ ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್ ಫೋಟೊ!

Fake ₹500 notes: ಮೆಹುಲ್ ಠಕ್ಕರ್ ಅವರ ಬಳಿ 2KGಯಷ್ಟು ಚಿನ್ನ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ವಂಚಕರು ₹1.3 ಕೋಟಿ ನಗದು ಇದೆ ಎಂದು ಹೇಳಿ ಹಣದ ಬ್ಯಾಗ್‌ ಕೊಡಲು ಬಂದಿದ್ದರು. ನಕಲಿ ನೋಟುಗಳ ಜೊತೆಗೆ ತೋರಿಕೆಗೆ ಮೇಲೆ ಕೆಲವು ಅಸಲಿ ನೋಟುಗಳನ್ನು ಇಟ್ಟಿದ್ದರು.

Written by - Puttaraj K Alur | Last Updated : Sep 30, 2024, 07:49 PM IST
  • ಗುಜರಾತ್‌ನ ಅಹಮದಾಬಾದ್‌ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ಭಾರೀ ದೋಖಾ!
  • ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ನೀಡಿ ವಂಚನೆ
  • ನಕಲಿ ನೋಟುಗಳ ಮೇಲೆ ಮಹಾತ್ಮಾ ಗಾಂಧೀಜಿ ಚಿತ್ರದ ಬದಲು ನಟ ಅನುಪಮ್ ಖೇರ್ ಚಿತ್ರ!
Fake ₹500 notes: ₹500 ಮುಖಬೆಲೆಯ ನಕಲಿ ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್ ಫೋಟೊ! title=
ಗಾಂಧೀಜಿ ಚಿತ್ರದ ಬದಲು ಅನುಪಮ್ ಖೇರ್ ಚಿತ್ರ!

Fake ₹500 notes: ಗುಜರಾತ್‌ನ ಚಿನ್ನಾಭರಣ ವ್ಯಾಪಾರಸ್ಥರೊಬ್ಬರಿಗೆ ವಂಚಕರು ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ನೀಡಿ ವಂಚಿಸಿರುವ ಘಟನೆ ನಡೆದಿದೆ. ಅಹಮದಾಬಾದ್‌ನ ಮಾಣಿಕ್ ಚೌಕ್‌ನ ಮೆಹುಲ್ ಠಕ್ಕರ್ ಅವರೇ ವಂಚನೆಗೊಳಗಾದ ವ್ಯಕ್ತಿ. ಈ ಬಗ್ಗೆ ಅವರು ನವರಂಗಪುರ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿಶೇಷವೆಂದರೆ ಠಕ್ಕರ್ ಅವರಿಗೆ ದೋಖಾ ಮಾಡಿದ ವಂಚಕರು ನೀಡಿದ್ದ ₹500 ಮುಖಬೆಲೆಯ ₹1.3 ಕೋಟಿ ಮೌಲ್ಯದ ನಕಲಿ ನೋಟುಗಳ ಮೇಲೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಚಿತ್ರದ ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ಅವರ ಚಿತ್ರಗಳಿವೆ. 

ಇದನ್ನೂ ಓದಿ: 7ನೇ ವೇತನ ಆಯೋಗ: ದೀಪಾವಳಿಗೆ ಮುಂಚಿತವಾಗಿ ಸರ್ಕಾರಿ ಈ ರಾಜ್ಯದ ನೌಕರರಿಗೆ ಶೇ 4% ರಷ್ಟು ತುಟ್ಟಿ ಭತ್ಯೆ ಹೆಚ್ಚಳ 

ಸದ್ಯ ಅನುಪಮ್ ಖೇರ್ ಅವರ ಚಿತ್ರವಿರುವ ₹500 ಮುಖಬೆಲೆಯ ನೋಟುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಈ ನೋಟುಗಳ ಬಗ್ಗೆ ವ್ಯಾಪಕ ಟ್ರೋಲ್ ಕೂಡ ಮಾಡಲಾಗುತ್ತಿದೆ. ಸ್ವತಃ ನಟ ಅನುಪಮ್‌ ಖೇರ್‌ ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ತಮ್ಮ ಭಾವಚಿತ್ರವಿರುವ ನಕಲಿ ನೋಟುಗಳ ಸುದ್ದಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಠಕ್ಕರ್ ಅವರ ಬಳಿ 2KGಯಷ್ಟು ಚಿನ್ನ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ವಂಚಕರು ₹1.3 ಕೋಟಿ ನಗದು ಇದೆ ಎಂದು ಹೇಳಿ ಹಣದ ಬ್ಯಾಗ್‌ ಕೊಡಲು ಬಂದಿದ್ದರು. ನಕಲಿ ನೋಟುಗಳ ಜೊತೆಗೆ ತೋರಿಕೆಗೆ ಮೇಲೆ ಕೆಲವು ಅಸಲಿ ನೋಟುಗಳನ್ನು ಇಟ್ಟಿದ್ದರು. ಠಕ್ಕರ್ ಅವರ ನಂಬಿಕೆ ಗಳಿಸಿದ ವಂಚಕರು ಇನ್ನೊಂದು ಅಂಗಡಿ ಬಳಿ ಚಿನ್ನ ಖರೀದಿಸಬೇಕಿದೆ ಎಂದು ಅಲ್ಲಿಂದ ಎಸ್ಕೇಪ್‌ ಆಗಿದ್ದರಂತೆ.

ಇದನ್ನೂ ಓದಿ: Rain Alert: ಮುಂದಿನ 24 ಗಂಟೆಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ; ರೆಡ್ ಅಲರ್ಟ್ ಘೋಷಣೆ!

ವಂಚಕರು ಕೊಟ್ಟು ಹೋದ ನೋಟುಗಳನ್ನು ಯಂತ್ರದ ಸಹಾಯದಿಂದ ಎಣಿಸಲು ಹೋದಾಗ ಠಕ್ಕರ್ ಅವರಿಗೆ ಅಸಲಿ ವಿಚಾರ ಗೊತ್ತಾಗಿದೆ. ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್ ಅವರ ಚಿತ್ರವನ್ನು ನೋಡಿದ ಠಕ್ಕರ್ ಅವರಿಗೆ ಆಘಾತವಾಗಿದೆ. ಇನ್ನು ಈ ವಂಚನೆ ಬಗ್ಗೆ ಮಾತನಾಡಿರುವ ನವರಂಗಪುರ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎ.ಎ.ದೇಸಾಯಿ, ʼ ಈ ಬಗ್ಗೆ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News