ವಿಜಯ್‌ ರಾಘವೇಂದ್ರ ನಟನೆಯ ʼಕದ್ದ ಚಿತ್ರʼ ರಿಲೀಸ್‌..! ಹೇಗಿದೆ ಗೊತ್ತಾ ಚಿನ್ನಾರಿ ಮುತ್ತನ ಸಿನಿಮಾ 

Vijay raghavendra : ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ʼಕದ್ದ ಚಿತ್ರʼ ಸಿನಿಮಾ ಮೇಲೆ ತುಂಬಾನೆ ನಂಬಿಕೆ ಇಟ್ಟುಕೊಂಡಿದ್ದರು. ಆದರಿಂದ ಈ ಸಿನಿಮಾ ವಿಜಯ್‌ಗೆ ಭಾವನಾತ್ಮಕವಾಗಿ ತುಂಬಾನೆ ಸ್ಪೆಷಲ್‌. ಇಡೀ ಸಿನಿಮಾವನ್ನ ರಾಘು ಆವರಿಸಿಕೊಂಡಿದ್ದಾರೆ.

Written by - Krishna N K | Last Updated : Sep 8, 2023, 05:19 PM IST
  • ವಿಜಯ್‌ ರಾಘವೇಂದ್ರ ನಟನೆಯ ಬಹು ನಿರೀಕ್ಷಿತ ಸಿನಿಮಾ ʼಕದ್ದ ಚಿತ್ರʼ ರಿಲೀಸ್‌.
  • ಟೀಸರ್‌ ಮತ್ತು ಟ್ರೈಲರ್‌ನಿಂದ ಹೆಚ್ಚು ಸದ್ದು ಮಾಡಿದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
  • ಮೊದಲ ಬಾರಿಗೆ ವಿಜಯ್‌ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕನಿಗೆ ಇಷ್ಟವಾಗಿದೆ.
ವಿಜಯ್‌ ರಾಘವೇಂದ್ರ ನಟನೆಯ ʼಕದ್ದ ಚಿತ್ರʼ ರಿಲೀಸ್‌..! ಹೇಗಿದೆ ಗೊತ್ತಾ ಚಿನ್ನಾರಿ ಮುತ್ತನ ಸಿನಿಮಾ  title=

Kaddha chitra review : ಸ್ಯಾಂಡಲ್‌ವುಡ್‌ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ನಟನೆಯ ಬಹು ನಿರೀಕ್ಷಿತ ಸಿನಿಮಾ ʼಕದ್ದ ಚಿತ್ರʼ ರಿಲೀಸ್‌ ಆಗಿದೆ. ಟೀಸರ್‌ ಮತ್ತು ಟ್ರೈಲರ್‌ನಿಂದ ಹೆಚ್ಚು ಸದ್ದು ಮಾಡಿದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ.. ನೋಡಿ..

ಹೌದು.. ನಟ ವಿಜಯ್‌ ರಾಘವೇಂದ್ರ ಅಭಿನಯದ ʼಕದ್ದ ಚಿತ್ರʼ ಇಂದು ತೆರೆಗೆ ಅಪ್ಪಳಿಸಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ ವಿಜಯ್‌ ರಾಘವೇಂದ್ರ ಬರಹಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಇಂತಹ ರೋಲ್ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಗೆ. ಹಾಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. 

ಇದನ್ನೂ ಓದಿ: ಜೂನಿಯರ್ ಎನ್‌ಟಿಆರ್ ಅವರ ಈ ದಾಖಲೆ ಎಲ್ಲರ ಹುಬ್ಬೇರಿಸುತ್ತದೆ!

ಅದರಂತೆ ಇಂದು ರಿಲೀಸ್‌ ಆದ ʼಕದ್ದ ಚಿತ್ರʼ ಪ್ರೇಕ್ಷಕರ ಮನಗೆದ್ದಿದೆ. ಸಿನಿಮಾ ವಿಚಾರವಾಗಿ ಹೇಳೋದಾದ್ರೆ, ಚಿತ್ರದಲ್ಲಿ ವಿಜಯ್‌ ಸ್ಮೋಕ್‌ ಮತ್ತು ಡ್ರಿಂಕ್ಸ್‌ಗೆ ತುಂಬಾ ಅಡಿಕ್ಟ್‌ ಆಗಿರುತ್ತಾರೆ. ಅದರಲ್ಲಿ ಅವರದೇಯಾದ ಪ್ಯಾಷನ್‌ ಇರುತ್ತದೆ. ಆ ಪ್ಯಾಷನ್‌ನ ಹೇಗೆ ಪ್ರೋಫೆಶನ್‌ ಆಗಿ ತೊಗೊಳ್ಳುತ್ತಾರೆ. ಅಲ್ಲದೆ, ಅವರು ಬರೆದ ಒಂದು ಪುಸ್ತಕ ಕದ್ದಿದ್ದು ಅಂತ ದೊಡ್ಡ ಸುದ್ದಿಯಾಗುತ್ತದೆ. ಅದರಿಂದ ಬರುವ ಕಷ್ಟಗಳನ್ನ ಹೇಗೆ ಎದುರಿಸುತ್ತಾರೆ, ಏನೆಲ್ಲಾ ಟ್ವಿಸ್ಟ್ ಇದೆ..‌ ಅನ್ನೋದನ್ನು ನೀವು ಸಿನಿಮಾ ನೋಡಿ ತಿಳ್ಕೊಬೇಕು..

ಕಾಪಿ ರೈಟ್‌ಗೆ ಸಂಬಂಧ ಪಟ್ಟ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ಸುಹಾಸ್‌ ಕೃಷ್ಣ ನಿರ್ದೇಶನ ಮಾಡಿದ್ದಾರೆ. ವಿಜಯ್‌ಗೆ ನಾಯಕಿಯಾಗಿ ನಮ್ರತಾ ಸುರೇಂದ್ರನಾಥ್ ನಟಿಸಿದ್ದು, ರಾಘು ಶಿವಮೊಗ್ಗ, ಬಾಲಾಜಿ ಮನೋಹರ್‌, ಬೇಬಿ ಆರಾಧ್ಯ ಸೇರಿದಂತೆ ಹಲವು ನಟರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದೀಪ್‌ ಹೆಚ್‌ ಕೆ ನಿರ್ಮಾಣ ಈ ಚಿತ್ರಕ್ಕೆ ಕೃಷ್ಣರಾಜ್‌ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಗ್ಲಾಮರಸ್‌ ಲುಕ್‌ನಲ್ಲಿ ಮಾಸ್ತಾರು ಮಾಸ್ತಾರು ಅಪ್ಸರೆ...ಪೋಟೋಸ್‌ ನೋಡಿ

ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ʼಕದ್ದ ಚಿತ್ರʼ ಸಿನಿಮಾ ಮೇಲೆ ತುಂಬಾನೆ ನಂಬಿಕೆ ಇಟ್ಟುಕೊಂಡಿದ್ದರು. ಆದರಿಂದ ಈ ಸಿನಿಮಾ ವಿಜಯ್‌ಗೆ ಭಾವನಾತ್ಮಕವಾಗಿ ತುಂಬಾನೆ ಸ್ಪೆಷಲ್‌. ಇಡೀ ಸಿನಿಮಾವನ್ನ ರಾಘು ಆವರಿಸಿಕೊಂಡಿದ್ದು, ಮೊದಲ ಬಾರಿಗೆ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿನ್ನಾರಿ ಮುತ್ತನ ನಟನೆ ಪ್ರೇಕ್ಷಕರಿಗೆ ಇಷ್ಟವಾಗುವುದಂತು ಖಂಡಿತ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News