ಮನಸ್ಸಲ್ಲಿ ಒಂದು ಇಟ್ಕೊಂಡು ಹೊರಗಡೆ ನಾಟಕವಾಡುವುದು ನನಗೆ ಇಷ್ಟವಿಲ್ಲ : ಧ್ರುವ ಸರ್ಜಾ

Dhruva Sarja and  Darshan : ನಟ ದರ್ಶನ್‌ ಮತ್ತು ಧ್ರುವ ಸರ್ಜಾ ಕಾವೇರಿ ಪ್ರತಿಭಟನಾ ವೇದಿಕೆಯ ಮೇಲೆ ಇಬ್ಬರು ಅಕ್ಕಪಕ್ಕ ಪಕ್ಕದಲೇ ಇದ್ದರೂ ಒಬ್ಬರಿಗೊಬ್ಬರು ಮಾತನಾಡುವುದಿರಲಿ ನೋಡಲೇ ಇಲ್ಲ. ಅಲ್ಲದೆ ದರ್ಶನ್‌ ಸಭೆ ಉದ್ದೇಶಿಸಿ ಮಾತನಾಡಿದ ನಂತರ ಧ್ರುವ ವೇದಿಕೆಯಿಂದ ಏಕಾಎಕಿ ಕೆಳಗಿಳಿದು ಹೋದರು. ಇದರಿಂದಾಗಿ ಇಬ್ಬರ ನಡುವೆ ಏನೋ ನಡೆದಿದೆ ಎಂಬುವುದು ಸ್ಪಷ್ಟವಾಗಿತ್ತು. 

Written by - Krishna N K | Last Updated : Oct 6, 2023, 09:33 AM IST
  • ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗ ಭಾಗಿಯಾಗಿತ್ತು.
  • ಇಬ್ಬರು ಅಕ್ಕಪಕ್ಕ ಪಕ್ಕದಲೇ ಇದ್ದರೂ ಒಬ್ಬರಿಗೊಬ್ಬರು ಮಾತನಾಡುವುದಿರಲಿ ನೋಡಲೇ ಇಲ್ಲ.
  • ನಟ ದರ್ಶನ್‌ ಮತ್ತು ಧ್ರುವ ಸರ್ಜಾ ನಡೆದುಕೊಂಡ ರೀತಿ ಚರ್ಚೆಗೆ ಗ್ರಾಸವಾಗಿತ್ತು.
ಮನಸ್ಸಲ್ಲಿ ಒಂದು ಇಟ್ಕೊಂಡು ಹೊರಗಡೆ ನಾಟಕವಾಡುವುದು ನನಗೆ ಇಷ್ಟವಿಲ್ಲ : ಧ್ರುವ ಸರ್ಜಾ title=

Dhruva Sarja : ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್‌ ಮತ್ತು ಧ್ರುವ ಸರ್ಜಾ ಮನಸ್ತಾಪದ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಇಬ್ಬರು ಸ್ಟಾರ್‌ ನಟರ ನಡುವೆ ಅಂತಹದ್ದು ಏನಾಗಿದೆ ಅಂತ ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಕುರಿತು ಧ್ರುವ ಸರ್ಜಾ ಸ್ಪಷ್ಟತೆ ನೀಡಿದ್ದಾರೆ.

ಹೌದು.. ಕಾವೇರಿಗಾಗಿ ಕಳೆದ ಸೆಪ್ಟೆಂಬರ್‌ 29 ರಂದು ಸ್ಯಾಂಡಲ್‌ವುಡ್‌ ಒಂದಾಗಿತ್ತು. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಿತ್ರರಂಗ ಭಾಗಿಯಾಗಿತ್ತು. ಈ ವೇಳೆ ದರ್ಶನ್‌ ಮತ್ತು ಧ್ರುವ ಸರ್ಜಾ ನಡೆದುಕೊಂಡ ರೀತಿ ಅವರ ಅಭಿಮಾನಿಗಳಿಗೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಮೂಡುವಂತೆ ಮಾಡಿತ್ತು.

ಇದನ್ನೂ ಓದಿ:ಅಮೆರಿಕದಲ್ಲಿನ ಶೂಟಿಂಗ್ ಫೋಟೋ ಹಂಚಿಕೊಂಡ ಶಾನ್ವಿ ಶ್ರೀವಾಸ್ತವ

ಏಕೆಂದರೆ ಪ್ರತಿಭಟನಾ ವೇದಿಕೆಯ ಮೇಲೆ ಇಬ್ಬರು ಅಕ್ಕಪಕ್ಕ ಪಕ್ಕದಲೇ ಇದ್ದರೂ ಒಬ್ಬರಿಗೊಬ್ಬರು ಮಾತನಾಡುವುದಿರಲಿ ನೋಡಲೇ ಇಲ್ಲ. ಅಲ್ಲದೆ ದರ್ಶನ್‌ ಸಭೆ ಉದ್ದೇಶಿಸಿ ಮಾತನಾಡಿದ ನಂತರ ಧ್ರುವ ವೇದಿಕೆಯಿಂದ ಏಕಾಎಕಿ ಕೆಳಗಿಳಿದು ಹೋದರು. ಇದರಿಂದಾಗಿ ಇಬ್ಬರ ನಡುವೆ ಏನೋ ನಡೆದಿದೆ ಎಂಬುವುದು ಸ್ಪಷ್ಟವಾಗಿತ್ತು. 

ಸಧ್ಯ ಈ ಕುರಿತು ನಟ ಧ್ರುವ ಸ್ಪಷ್ಟತೆ ನೀಡಿದ್ದಾರೆ. ದರ್ಶನ್ ಮತ್ತು ತಮ್ಮ ಮಧ್ಯೆ ಮನಸ್ತಾಪ ಇರೋದು ನಿಜ ಎಂದು ತಿಳಿಸಿದ್ದಾರೆ. ಅಲ್ಲದೆ, ಮನಸ್ಸಿನ ಒಳಗೊಂದು ಹೊರಗೊಂದು ರೀತಿ ಇರೋದಕ್ಕೆ ನನಗೆ ಆಗಲ್ಲ. ನಾಟಕ ಮಾಡೋಕೆ ನನಗೆ ಬರಲ್ಲ. ದರ್ಶನ್ ಅವರಿಗೆ ನಾನು ಎರಡು ಪ್ರಶ್ನೆಗಳನ್ನು ಕೇಳಬೇಕು. ಅವರ ಬಳಿ ಪರ್ಸನಲ್ ಆಗಿ ನಾನು ಕ್ಲಾರಿಟಿ ತಗೋತೀನಿ ಎಂದು ಹೇಳಿದ್ದಾರೆ. ಅಲ್ಲದೇ, ದರ್ಶನ್ ಅವ್ರು ನಮ್ಮ‌ ಸೀನಿಯರ್, ಅವರಿಗೆ ನಾನು ಗೌರವ ಕೊಡುತ್ತೇನೆ. ನಮ್ಮ ಚಿತ್ರಕ್ಕೆ ಅವರು ಬೆಂಬಲ ನೀಡಿದ್ದಾರೆ ಎಂದರು. 

ಇದನ್ನೂ ಓದಿ:ಸಕತ್ತಾಗವ್ಳೆ.. ಸುಮ್ನೆ ನಗ್ತಾಳೆ..! ನಟಿ ಪ್ರಣಿತಾ ಫೋಟೋಸ್‌ ವೈರಲ್‌

ಮಾತು ಮುಂದುವರೆಸಿದ ಧ್ರುವ, ಈ ವಿಚಾರವಾಗಿ ನನ್ನ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಏನೇನೋ ಪೋಸ್ಟ್ ಹಾಕ್ತಿದ್ದಾರೆ. ಅವರಿಗೆ ನಾನು ಹೇಳೊದು ಆತರ ಕೆಲಸ ಮಾಡಬೇಡಿ. ಒಂದು ವೇಳೆ ಮಾಡೇ ಮಾಡ್ತಿನಿ ಅಂದ್ರೆ ದಯವಿಟ್ಟು ನಮ್ಮ ಕೈಗೆ ಸಿಗಬೇಡಿ ಎಂದು ಧ್ರುವ ಸರ್ಜಾ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News