T20ಯಲ್ಲಿ ಭಾರತವನ್ನು ಪುಡಿ ಪುಡಿ ಮಾಡುತ್ತೇವೆ! ಟೀಂ ಇಂಡಿಯಾಗೆ ಮತ್ತೆ ಬೆದರಿಕೆ ಹಾಕಿದ ಬಾಂಗ್ಲಾ ನಾಯಕ!

India vs Bangladesh: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ-20 ಸರಣಿ ಭಾನುವಾರದಿಂದ ಗ್ವಾಲಿಯರ್‌ನಲ್ಲಿ ಆರಂಭವಾಗಿದೆ. ಗ್ವಾಲಿಯರ್‌ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.

Written by - Puttaraj K Alur | Last Updated : Oct 9, 2024, 04:53 PM IST
  • T20 ಸರಣಿಯಲ್ಲಿ ಭಾರತ ತಂಡವನ್ನು ಪುಡಿ ಪುಡಿ ಮಾಡುತ್ತೇವೆ!
  • ಭಾರತ ವಿರುದ್ಧದ ಟಿ-20 ಸರಣಿ ಗೆಲ್ಲುವುದೇ ಬಾಂಗ್ಲಾ ತಂಡದ ಪ್ರಯತ್ನ
  • ಟೀಂ ಇಂಡಿಯಾಗೆ ಮತ್ತೆ ಬೆದರಿಕೆ ಹಾಕಿದ ಬಾಂಗ್ಲಾದೇಶ ನಾಯಕ
T20ಯಲ್ಲಿ ಭಾರತವನ್ನು ಪುಡಿ ಪುಡಿ ಮಾಡುತ್ತೇವೆ! ಟೀಂ ಇಂಡಿಯಾಗೆ ಮತ್ತೆ ಬೆದರಿಕೆ ಹಾಕಿದ ಬಾಂಗ್ಲಾ ನಾಯಕ! title=
ಟೀಂ ಇಂಡಿಯಾಗೆ ಮತ್ತೆ ವಾರ್ನಿಂಗ್!

India vs Bangladesh, 2nd T20I: ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗಿದ್ದರೂ, ಟಿ-20 ಸರಣಿಯಲ್ಲಿ ಸರಿದೂಗಿಸುವುದಾಗಿ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್‌ ಹುಸೇನ್‌ ಶಾಂತೊ ಎಚ್ಚರಿಕೆ ನೀಡಿದ್ದಾರೆ. ಭಾರತ ತಂಡಕ್ಕೆ 2ನೇ ಬಾರಿ ಅವರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಟೆಸ್ಟ್ ಸರಣಿಗೂ ಮುನ್ನ ಭಾರತವನ್ನು ಸೋಲಿಸುವುದಾಗಿ ಶಾಂತೊ ಹೇಳಿದ್ದರು. ಅವರ ಈ ಹೇಳಿಕೆ ಸಖತ್‌ ಸೌಂಡ್‌ ಮಾಡಿತ್ತು.  25 ವರ್ಷಗಳ ಬಳಿಕ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶ ಗೆದ್ದು ಬೀಗಿತ್ತು. 

ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ್ದ ಬಾಂಗ್ಲಾ!

ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ ಬಾಂಗ್ಲಾ ಮಣ್ಣುಮುಕ್ಕಿಸಿತ್ತು. ಪಾಕ್‌ ನಂತರ ಭಾರತ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶ ಟೀಂ ಇಂಡಿಯಾವನ್ನು ಸೋಲಿಸುವುದಾಗಿ ವಾರ್ನಿಂಗ್‌ ಮಾಡಿತ್ತು. ಆದರೆ ರೋಹಿತ್‌ ಪಡೆ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾಗೆ ಮುಟ್ಟಿನೋಡುಕೊಳ್ಳುವ ಹಾಗೆ ಮಣ್ಣುಮುಕ್ಕಿಸಿತು. ಇದಾದ ಬಳಿಕ ಟಿ-20 ಸರಣಿ ನಾವು ಭಾರತವನ್ನು ಸೋಲಿಸುತ್ತೇವೆ ಅಂತಾ ಶಾಂತೊ ಹೇಳಿಕೆ ನೀಡಿದ್ದರು. ಆದರೆ ಮೊದಲ ಟಿ-20 ಪಂದ್ಯದಲ್ಲೇ ಹೀನಾಯ ಸೋಲು ಕಂಡಿತು. ಇಂದು ಸಂಜೆ ೭ ಗಂಟೆಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 2ನೇ ಪಂದ್ಯ ನಡೆಯಲಿದ್ದು, ಬಾಂಗ್ಲಾ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಅಂತಾ ಕಾದು ನೋಡಬೇಕಿದೆ.  

ಇದನ್ನೂ ಓದಿ: IND vs BAN: T20I ಸರಣಿಯ ನಡುವೆ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ ಈ ಆಟಗಾರ!

ಶಾಂತೂ ಹೇಳಿದ್ದೇನು?

ಭಾರತ ವಿರುದ್ಧದ ಟಿ-20 ಸರಣಿ ಗೆಲ್ಲುವುದೇ ಬಾಂಗ್ಲಾದೇಶ ತಂಡದ ಪ್ರಯತ್ನ ಅಂತಾ ನಾಯಕ ಶಾಂತೊ ಹೇಳಿದ್ದಾರೆ. ʼನಿಜ ಹೇಳಬೇಕೆಂದರೆ ನಾವು ಈ ಸರಣಿಯನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ನಾವೂ ಸಹ ಆಕ್ರಮಣಕಾರಿ ಕ್ರಿಕೆಟ್ ಆಡಲು ಬಯಸುತ್ತೇವೆ. ಕಳೆದ ಟಿ-20 ವಿಶ್ವಕಪ್ ಟೂರ್ನಿ ನೋಡಿದರೆ ನಮಗೆ ಸೆಮಿಫೈನಲ್‌ನಲ್ಲಿ ಆಡುವ ಉತ್ತಮ ಅವಕಾಶವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಈಗ ನಾವು ಹೊಸ ತಂಡವನ್ನು ಹೊಂದಿದ್ದೇವೆ. ಭಾರತದೊಂದಿಗೆ ಟಿ-20 ಸರಣಿಯಲ್ಲಿ ಎಲ್ಲಾ ಆಟಗಾರರು ಉತ್ತಮವಾಗಿ ಆಡುವ ನಿರೀಕ್ಷೆಯಿದೆ. ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿನ ಹಿನ್ನಡೆ ಬಗ್ಗೆ ಯೋಚಿಸುತ್ತಿಲ್ಲ. ಟೆಸ್ಟ್ ಸರಣಿಯಲ್ಲಿ ನಾವು ಅತ್ಯುತ್ತಮ ಕ್ರಿಕೆಟ್ ಆಡಿಲ್ಲವೆಂಬುದು ನಮಗೆಲ್ಲರಿಗೂ ಗೊತ್ತು. ಆದ್ದರಿಂದ ನಾವು ಮೊದಲು ಏನು ಮಾಡಿದ್ದೇವೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಮುಂದೆ ನಮಗೆ ಅತ್ಯಂತ ಮಹತ್ವದ ಟಿ-20 ಸರಣಿ ಆರಂಭವಾಗಲಿದೆ. ಟೆಸ್ಟ್‌ಗೆ ಹೋಲಿಸಿದರೆ ಟಿ-20 ಸಂಪೂರ್ಣ ವಿಭಿನ್ನ ಆಟವಾಗಿದೆʼ ಎಂದು ಹೇಳಿದ್ದಾರೆ.  

ಅಂದಹಾಗೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ-20 ಸರಣಿ ಭಾನುವಾರದಿಂದ ಗ್ವಾಲಿಯರ್‌ನಲ್ಲಿ ಆರಂಭವಾಗಿದೆ. ಗ್ವಾಲಿಯರ್‌ನ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಇಂದು ದೆಹಲಿಯಲ್ಲಿ 2ನೇ ಪಂದ್ಯ ನಡೆಯಲಿದ್ದು, 3ನೇ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಿಂದಿನ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿರುವ ಭಾರತ ಇದೀಗ ಟಿ-20ಯಲ್ಲೂ ಅಧಿಪತ್ಯ ಸ್ಥಾಪಿಸುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ಒಂದೇ ಏಟಿಗೆ ಮೂವರು ದಿಗ್ಗಜ್ಜರ ದಾಖಲೆ ಉಡೀಸ್ ! ಬಹು ದೊಡ್ಡ ಸಾಧನೆಯತ್ತ ಅರ್ಷದೀಪ್ ಸಿಂಗ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News