ನವದೆಹಲಿ : ಲಾಭದಾಯಕ ಹುದ್ದೆಯನ್ನು ಹೊಂದಿದ್ದಕ್ಕೆ 20 ಎಎಪಿ ಶಾಸಕರ ಅನರ್ಹತೆಗೆ ಚುನಾವಣಾ ಆಯೋಗದ(ಇಸಿಐ) ಶಿಫಾರಸು ಮಾಡಿದ ಕೆಲವೇ ಗಂಟೆಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ವಿಷಯದ ಬಗ್ಗೆ ಮೌನವನ್ನು ಮುರಿದು ಅಂತಿಮವಾಗಿ ಸತ್ಯಕ್ಕೆ ಜಯ ದೊರೆಯಲಿದೆ ಎಂದು ತಿಳಿಸಿದ್ದಾರೆ.
जब आप सच्चाई और ईमानदारी पर चलते हैं तो बहुत बाधाएँ आती हैं। ऐसा होना स्वाभाविक है। पर ब्रह्मांड की सारी दृश्य और अदृश्य शक्तियाँ आपकी मदद करती हैं। ईश्वर आपका साथ देता है। क्योंकि आप अपने लिए नहीं,देश और समाज के लिए काम करते हैं। इतिहास गवाह है कि जीत अंत में सचाई की होती है।
— Arvind Kejriwal (@ArvindKejriwal) 19 January 2018
"ಸತ್ಯ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವಾಗ ಈ ರೀತಿಯ ಅಡೆತಡೆಗಳು ಬರುವುದು ಸಹಜ ಆದರೆ ಆದ್ದರಿಂದ ಅಷ್ಟಕ್ಕೇ ಹೆದರಿ ನಮ್ಮ ಪ್ರಾಮಾಣಿಕತೆಯನ್ನು ನಿಲ್ಲಿಸಬಾರದು, ನಮ್ಮಲ್ಲಿ ಸತ್ಯವಿದ್ದಾಗ ಪ್ರಪಂಚದ ಎಲ್ಲಾ ಗೋಚರ ಮತ್ತು ಅಗೋಚರ ಶಕ್ತಿಗಳು ಸಹಾಯ ಮಾಡುತ್ತವೆ.ಇದಕ್ಕೆ ದೇವರು ಸಹಿತ ಬೆಂಬಲಿಗನಾಗಿ ನಿಲ್ಲುತ್ತಾನೆ" ಎಂದು ಕೇಜ್ರಿವಾಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.