ಸಮಂತಾ- ನಾಗ ಚೈತನ್ಯ ವಿಚ್ಛೇದನಕ್ಕೆ ತೆಲಂಗಾಣ ಮಾಜಿ ಸಿಎಂ ಪುತ್ರ ಕೆಟಿಆರ್‌ ಕಾರಣ..! ಶಾಕಿಂಗ್‌ ವಿಚಾರ ಬಹಿರಂಗ

Naga Chaitanya Samantha divorce : ಇಷ್ಟು ದಿನ ಅಭಿಮಾನಿಗಳ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದ ನಾಗ ಚೈತನ್ಯ ಸಮಂತಾ ವಿಚ್ಛೇದನ ವಿಚಾರ ಇದೀಗ ರಾಜಕೀಯ ಅಂಗಳ ಪ್ರವೇಶಿಸಿದೆ. ನಾಗ ಚೈತನ್ಯ ಸಮಂತಾ ವಿಚ್ಛೇದನಕ್ಕೆ ತೆಲಂಗಾಣ ಮಾಜಿ ಸಚಿವ ಕೆಟಿಆರ್ ಕಾರಣ ಎಂದು ಸಚಿವೆ ಕೊಂಡಾ ಸುರೇಖಾ ಸಂಚಲನ ಹೇಳಿಕೆ ನೀಡಿದ್ದಾರೆ. 

Written by - Krishna N K | Last Updated : Oct 2, 2024, 03:14 PM IST
    • ನಾಗ ಚೈತನ್ಯ ಸಮಂತಾ ವಿಚ್ಛೇದನ ವಿಚಾರ ಇದೀಗ ರಾಜಕೀಯ ಅಂಗಳ ಪ್ರವೇಶಿಸಿದೆ
    • ಈ ಸ್ಟಾರ್‌ ಜೋಡಿಯ ವಿಚ್ಛೇದನಕ್ಕೆ ಮಾಜಿ ಸಚಿವ ಕೆಟಿಆರ್ ಕಾರಣ
    • ಬದುಕಿನೊಂದಿಗೆ ಆಟವಾಡುತ್ತಾ ಬ್ಲಾಕ್ ಮೇಲ್ ಮಾಡಿದ್ದೇ ಕೆಟಿಆರ್
ಸಮಂತಾ- ನಾಗ ಚೈತನ್ಯ ವಿಚ್ಛೇದನಕ್ಕೆ ತೆಲಂಗಾಣ ಮಾಜಿ ಸಿಎಂ ಪುತ್ರ ಕೆಟಿಆರ್‌ ಕಾರಣ..! ಶಾಕಿಂಗ್‌ ವಿಚಾರ ಬಹಿರಂಗ title=

KTR Naga Chaitanya Samantha Divorce : ನಾಗ ಚೈತನ್ಯ ಸಮಂತಾ ವಿಚ್ಛೇದನ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಸ್ಟಾರ್‌ ಜೋಡಿಯ ವಿಚ್ಛೇದನಕ್ಕೆ ಮಾಜಿ ಸಚಿವ ಕೆಟಿಆರ್ ಕಾರಣ ಎಂದು ಸಚಿವೆ ಕೊಂಡ ಸುರೇಖಾ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲ ಮೂಡಿಸಿದೆ. ಅಷ್ಟೇ ಅಲ್ಲ ನಟ-ನಟಿಯರ ಪೋನ್‌ ಟ್ಯಾಪಿಂಗ್, ಅವರನ್ನು ಮಾದಕ ವ್ಯಸನಕ್ಕೆ ಒಳಪಡಿಸಿದದ್ದ, ಅವರ ಬದುಕಿನೊಂದಿಗೆ ಆಟವಾಡುತ್ತಾ ಬ್ಲಾಕ್ ಮೇಲ್ ಮಾಡಿದ್ದೇ ಕೆಟಿಆರ್ ಎಂದು ಸುರೇಖಾ ಹೇಳಿಕೆ ನೀಡಿದ್ದಾರೆ.

ಕೊಂಡಾ ಸುರೇಖಾ ಅವರ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಬಿಸಿ ಟಾಪಿಕ್ ಆಗಿದೆ. ನಿನ್ನೆಯವರೆಗೂ ಇವರಿಬ್ಬರ ವಿಚ್ಛೇದನ ಚಿತ್ರರಂಗದಲ್ಲಿ ಮಾತ್ರ ಚರ್ಚೆಯ ವಿಷಯವಾಗಿತ್ತು. ಮೂರು ವರ್ಷಗಳಿಂದ ನಡೆಯುತ್ತಿರುವ ಸ್ಯಾಮ್ ಚೈತು ವಿಚ್ಛೇದನದ ಸುದ್ದಿ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. 

ಇದನ್ನೂ ಓದಿ: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮೊದಲ ಆಡಿಷನ್‌ ಹೇಗಿತ್ತು ಗೊತ್ತಾ? ಕನ್ನಡ ಮಾತಾಡೋಕೆ ಇಷ್ಟೊಂದು ಕಷ್ಟಪಡ್ತಾರಾ ನಟಿ! ವಿಡಿಯೋ ನೋಡಿ

ಇದರ ಜೊತೆಗೆ ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ.. ಅದು ಕೂಡ ಮತ್ತೊಬ್ಬ ಟಾಲಿವುಡ್ ಸ್ಟಾರ್‌ ಹೀರೋಯಿನ್ ಸೋಭಿತಾ ಧೂಳಿಪಾಲ ಜೊತೆ.. ಇದೀಗ ಇದರ ನಡುವೆ ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರ ಪುತ್ರ ಕೆಟಿಆರ್‌ ಹೆಸರು ಕೇಳಿ ಬಂದಿದ್ದು ಚರ್ಚೆಗೆ ಕಾರಣವಾಗಿದೆ.

ಮತ್ತೊಂದೆಡೆ, ಕೊಂಡ ಸುರೇಖ್ ಅವರ ಕಾಮೆಂಟ್‌ಗಳಿಗೆ ಕೆಟಿಆರ್ ಪ್ರತಿಕ್ರಿಯೆ ನೀಡಿದ್ದಾರೆ. ಸುರೇಖಾ ನಮಗೆ ಸಂಬಂಧವೇ ಇಲ್ಲದ ವಿಚಾರದಲ್ಲಿ ನಮ್ಮನ್ನು ಎಳೆದು ತರುತ್ತಿದ್ದಾರೆ ಎಂದು ಆರೋಪವನ್ನು ಅಲ್ಲಗಳೆದಿದ್ದಾರೆ. ಈ ವಿಚಾರ ಮುಂದಿನ ದಿನ ಯಾವ ಹಂತ  ತಲುಪುತ್ತದೆ ಅಂತ ಕಾಯ್ದು ನೋಡಬೇಕಿದೆ..

ಇದನ್ನೂ ಓದಿ:ಈ ಸ್ಪರ್ಧಿ ನಾಮಿನೇಟ್ ಮಾತ್ರ ಆಗೋದು,ಎಲಿಮಿನೆಟ್ ಚಾನ್ಸೇ ಇಲ್ಲ! ಮೊದಲ ವಾರದಲ್ಲೇ ಈ ಕಂಟೆಸ್ಟೆಂಟ್ ಗೆ ಸಿಕ್ಕಾಪಟ್ಟೆ ಸಪೋರ್ಟ್

ನಾಗ ಚೈತನ್ಯ ತೆಲುಗು ಪ್ರೇಕ್ಷಕರಿಗೆ ಏನು ಮಾಯ ಕಾಲವೇ ಚಿತ್ರದ ಮೂಲಕ ಪರಿಚಯವಾದರು. ಇಬ್ಬರು 2017 ರಲ್ಲಿ ವಿವಾಹವಾದರು. 2021 ರಲ್ಲಿ ಈ ಜೋಡಿ ವಿಚ್ಛೇದನ ಪಡೆದಾಗ ಸಿನಿರಂಗದಲ್ಲಿ ದೊಡ್ಡ ಚರ್ಚೆ ನಡೆದಿತ್ತು. ಇದೀಗ ಇವರಿಬ್ಬರ ಡಿವೋರ್ಸ್‌ ವಿಚಾರದ ನಡುವೆ ಕೆಟಿಆರ್‌ ಹೆಸರು ಬಂದಿದೆ.. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News