ದಂತಚೋರ ವೀರಪ್ಪನ್ ಕುರಿತಂತೆ ವೆಬ್ ಸೀರೀಸ್

ಕೆಎಸ್ಆರ್ ಆವರಣದಲ್ಲಿ ವೆಬ್ ಸೀರೀಸ್ ಗೆ ಚಿತ್ರೀಕರಣಕ್ಕೆ ಚಾಲನೆ.  

Last Updated : Aug 22, 2020, 12:35 PM IST
ದಂತಚೋರ ವೀರಪ್ಪನ್ ಕುರಿತಂತೆ ವೆಬ್ ಸೀರೀಸ್ title=

ಬೆಂಗಳೂರು: ದಂತಚೋರ ವಿರಪ್ಪನ್ ಕುರಿತಂತೆ ವೆಬ್ ಸೀರಿಸ್ ಒಂದು ಬರುತ್ತಿದ್ದು ಅದಕ್ಕೆ  ಕೆಎಸ್ಆರ್ ಆವರಣದಲ್ಲಿ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್  ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.

'Veerappan Hunger for killing' ಹೆಸರಲ್ಲಿ ಮೂಡಿ ಬರುತ್ತಿರುವ ವೆಬ್ ಸೀರೀಸ್ ಗೆ ಕೆಎಸ್ಆರ್ ಪಿ ಅವರಣದ ದೇವಸ್ಥಾನದಲ್ಲಿ ಅಲೋಕ್ ಕುಮಾರ್ ಚಾಲನೆ ನೀಡುವ ವೇಳೆ ಸೀರೀಸ್ ನಿರ್ದೇಶಕ ಎಎಂಆರ್ ರಮೇಶ್, ನಟ ಕಿಶೋರ್ ಹಾಜರಿದ್ದರು.

ಕಾಡುಗಳ್ಳ ವೀರಪ್ಪನ್ ಬೇಟೆಯಲ್ಲಿ ಕೆಎಸ್ಆರ್ ಪಿ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದರ ಹಿನ್ನಲೆಯಲ್ಲಿ ಕೆಎಸ್ಆರ್ ಆವರಣದಲ್ಲಿ ವೆಬ್ ಸೀರೀಸ್ ಚಿತ್ರೀಕರಣಕ್ಕೆ ಚಾಲನೆ ನೀಡಿರುವುದಾಗಿ ಚಿತ್ರ ತಂಡ ಹೇಳಿದೆ.

Trending News