Daily Horoscope: ದಿನಭವಿಷ್ಯ 26-06-2021 Today astrology

ಶ್ರೀ ಶ್ರೀಕ್ಷೇತ್ರ ಶ್ರೀ ಪಂಚಮುಖಿ ಗಣಪತಿ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿಯಿರಿ...  

Written by - Zee Kannada News Desk | Last Updated : Jun 26, 2021, 06:30 AM IST
  • ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ
  • ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ದೊರೆಯಲಿದೆ
  • ಮಕರ ರಾಶಿಯವರಿಗೆ ನಿಮ್ಮ ಕಾರ್ಯಗಳು ಹಿರಿಯರ ಆಶೀರ್ವಾದದಿಂದ ನೆರವೇರುವುದು
Daily Horoscope: ದಿನಭವಿಷ್ಯ 26-06-2021 Today astrology  title=
Daily Horoscope (ದಿನಭವಿಷ್ಯ 26-06-2021) :

Daily Horoscope (ದಿನಭವಿಷ್ಯ 26-06-2021) : ಶ್ರೀ ಶ್ರೀಕ್ಷೇತ್ರ ಶ್ರೀ ಪಂಚಮುಖಿ ಗಣಪತಿ ಸ್ವಾಮಿ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯ ತಿಳಿಯಿರಿ...

ಮೇಷ:- ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಮಾನಸಿಕ ಉದಾಸೀನತೆ, ಕಾರ್ಯದಲ್ಲಿ ಹಿನ್ನಡೆ. ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ವೃಷಭ:- ಭಗವಂತನ ಕೃಪೆಯಿಂದ ಧನ್ಯತಾಭಾವ ಮನದಲ್ಲಿ ಮೂಡುವುದು. ಮಹತ್ವದ ಪತ್ರಾಗಮನವಾಗುವುದು. ಬಂಧು ಬಳಗದವರ ಭೇಟಿಯಾಗಲಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಹಿರಿಯರ ಗುರುಗಳ ಮಾರ್ಗದರ್ಶನದಂತೆ ನಡೆಯುವುದು ಒಳ್ಳೆಯದು.

ಮಿಥುನ:- ವಿವಿಧ ಮೂಲಗಳಿಂದ ಹಣಕಾಸು ಬರುವುದು. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಮನಸ್ಸಿನ ಕಾಮನೆಗಳು ಪೂರ್ತಿಗೊಳ್ಳುವವು. ಬಂಧು ಬಳಗದವರ ಭೇಟಿಯಾಗಲಿದೆ. ದೈವಾನುಕೂಲತೆ ಇದೆ.

ಕಟಕ:- ಚಂಚಲ ಮನಸ್ಸಿನ ಕಾರಣದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಅರ್ಧ ಯಶಸ್ಸು ಕಂಡುಬರುವುದು. ಮಾತೃ ಸಂಬಂಧದವರಿಗೆ ಸಹಾಯ ಮಾಡುವಿರಿ. ಸ್ಥಿರಾಸ್ತಿ ಖರೀದಿಗೆ ಚಿಂತನೆ ನಡೆಸುವಿರಿ. ಅಲ್ಪ ಪ್ರವಾಸ ಕೈಗೊಳ್ಳಬಹುದು. ಬೆಲೆಬಾಳುವ ವಸ್ತುಗಳ ಖರೀದಿ ಮಾಡುವಿರಿ.

ಇದನ್ನೂ ಓದಿ- Dream Interpretation: ಕನಸಿನಲ್ಲಿ ಯಾವ ದೇವರನ್ನು ಕಂಡರೆ ಏನು ಫಲ

ಸಿಂಹ:- ಮನೆಯಿಂದ ದೂರವಿದ್ದು ವಾಸಮಾಡಬೇಕಾಗಬಹುದು. ಹೊಸ ಪರಿಸರದ ಆಹಾರ, ವಿಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಪರಿಣಾಮ ಉಂಟಾಗುವುದು. ಹಣಕಾಸಿನ ತೊಂದರೆ ಎದುರಿಸುವಿರಿ. ಕುಲದೇವತಾ ಸ್ತೋತ್ರ ಮಾಡಿ. ಪರರಿಗೆ ದಾನ ಮಾಡಿ.

ಕನ್ಯಾ:- ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು. ಒಂದು ಬೃಹತ್‌ ಕೆಲಸವನ್ನು ಸಕಾಲದಲ್ಲಿ ಮುಗಿಸಿದ ಆತ್ಮತೃಪ್ತಿಯೂ ನಿಮ್ಮದಾಗುವುದು. ಧನಕಾರಕ ಗುರು ವಿವಿಧ ಮೂಲಗಳಿಂದ ಬರುವ ಹಣದ ಮಾರ್ಗವನ್ನು ತಿಳಿಸುವನು.

ತುಲಾ:- ಉದ್ಯೋಗದಲ್ಲಿ ಕೀರ್ತಿ ದೊರೆಯಲಿದೆ. ಆತ್ಮೀಯ ಹಿತೈಷಿಗಳಿಂದ ನಿಮ್ಮ ವ್ಯವಹಾರದಲ್ಲಿ ನಿಮಗೆ ಪಾಲುದಾರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಅಮೂಲ್ಯ ವಸ್ತುಗಳ ಖರೀದಿಯಿಂದ ಲಾಭವಾಗುವುದು. ಕೆಲವು ಸಂದರ್ಭಗಳಲ್ಲಿ ಸಂಗಾತಿ ಸಲಹೆ ಪಡೆಯಿರಿ.

ವೃಶ್ಚಿಕ:- ಉದ್ಯೋಗದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಕಾರ್ಯಗಳು ಪೂರ್ಣಗೊಳ್ಳುವವು. ಹಣಕಾಸಿನ ಸಮಸ್ಯೆ ಕಡಿಮೆ ಆಗುವುದು. ದೊಡ್ಡ ಜನರ ಸಂಪರ್ಕ ಏರ್ಪಡುವುದರಿಂದ ನಿಮ್ಮ ಉದ್ಯೋಗಕ್ಕೆ ಹೆಚ್ಚಿನ ಲಾಭಾಂಶ ಕಂಡು ಬರುವುದು.

ಇದನ್ನೂ ಓದಿ- Richest Temple of India: ಭಾರತದ ಶ್ರೀಮಂತ ದೇವಾಲಯಗಳಿವು

ಧನಸ್ಸು:- ಮನಸ್ಸು ಖಿನ್ನತೆಯಿಂದ ಕುಗ್ಗುವುದು. ಯಾವುದೇ ಕೆಲಸ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಶಿವ ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಿ. ದೂರ ಪ್ರವಾಸದ ವಿಚಾರವನ್ನು ಮುಂದೂಡುವುದು ಒಳಿತು. ಆರೋಗ್ಯದ ಕಡೆ ಗಮನ ಹರಿಸಿ.

ಮಕರ:- ನಿಮ್ಮ ಕಾರ್ಯಗಳು ಹಿರಿಯರ ಆಶೀರ್ವಾದದಿಂದ ನೆರವೇರುವುದು. ಹಣಕಾಸಿನ ವಿಚಾರದಲ್ಲಿ ಪಕ್ಕಾ ಲೆಕ್ಕ ಇಡುವುದು ಒಳ್ಳೆಯದು. ಹಿರಿಯರ ಸಲಹೆಯನ್ನು ಸ್ವೀಕರಿಸಿದಲ್ಲಿ ಉತ್ತಮ ಲಾಭವಾಗಲಿದೆ.

ಕುಂಭ:- ಆರ್ಥಿಕ ವಿಚಾರದಲ್ಲಿ ಗಮನ ಹರಿಸುವುದು ಒಳ್ಳೆಯದು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿದಲ್ಲಿ ಉತ್ತಮ ಸಮಯವನ್ನು ಕಳೆಯಬಹುದು.

ಮೀನ:- ಬಿಗುವಿನ ವಾತಾವರಣ ತಿಳಿಯಾಗುವುದು. ಮನೆಯಲ್ಲಿ ಮನದಲ್ಲಿ ಸಂತಸದ ಕ್ಷಣ ಮೂಡುವುದು. ಬಂಧುಗಳು, ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವರು. ಕೆಲಸಗಳು ಸರಾಗವಾಗಿ ನಡೆಯುವವು.

ಇದನ್ನೂ ಓದಿ- ಆಗಸದಲ್ಲಿ ಕಂಡ Strawberry Super Moon, ಇದರ ವಿಶೇಷತೆ ಏನು ಗೊತ್ತಾ?

ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News